Posts

ಆರನೆ ಸೆಮ್‌ ಇತಿಹಾಸ ವಿಷಯದ DSCC 12, 13 ಮತ್ತು 14 ನೆ ಪತ್ರಿಕೆಗಳ ಪಠ್ಯಕ್ರಮ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ವ್ಯಾಪ್ತಿಗೆ.

DSCC - 12 ಶೀರ್ಷಿಕೆ: ಸಮಕಾಲೀನ ಭಾರತದ ಇತಿಹಾಸ – 1947 ರಿಂದ 1991 ವರೆಗೆ. Title. History of Contemporary India (Since 1947-1991) ಘಟಕ ೧ – Unit I ಅಧ್ಯಾಯ ೧. ಭಾರತದ ಸಂವಿಧಾನದ ರಚನೆ – ಸಂವಿಧಾನ ರಚನಾ ಸಭೆ. Chapter-1. Framing of Indian Constitution –Constituent Assembly ಅಧ್ಯಾಯ ೨. ಸಂವಿಧಾನ ರಚನಾ ಸಭೆಯ ಪಾತ್ರ – ಚರ್ಚೆ ಮತ್ತು ಕರಡು ಸಂವಿಧಾನದ ತಿದ್ದುಪಡಿಗಳು. Chapter-2. Role of Drafting Committee –Debates and Amendments to Draft  Constitution ಅಧ್ಯಾಯ ೩. ಪ್ರಸ್ತಾವನೆ – ಸಂವಿಧಾನದ ಮೂಲ ಸ್ವರೂಪಗಳು ಮತ್ತು ಸಂವಿಧಾನಿಕ ಸಂಸ್ಥೆಗಳು. Chapter3. The Preamble – Basic Features and Institutions of the Constitution.   ಘಟಕ ೨ - Unit II ಅಧ್ಯಾಯ  ೪. ಭಾರತದ ಏಕೀಕರಣ – ಕಾಶ್ಮೀರ, ಜುನಾಘಡ ಮತ್ತು ಹೈದ್ರಾಬಾದ್. Chapter4. Integration of Indian States. Kashmir, Junagarh and Hyderabad States ಅಧ್ಯಾಯ  ೫. ಕಾನೂನಾತ್ಮಕ ಸಂಘಟನೆ – ಹಿಂದೂ ಕೋಡ್‌ ಬಿಲ್. Chapter-5. Legal Integration. Hindu Code Bill. ಅಧ್ಯಾಯ ೬. ರಾಜ್ಯಗಳ ಭಾಷಾವಾರು ಮರುವಿಂಗಡಣೆ – ಪ್ರಾದೇಶಿಕತೆ ಮತ್ತು ಪ್ರಾದೇಶಿಕ ಅಸಮಾನತೆ. Chapter-6. The Linguistic Organization of States – Regionalism and Regional  disparit...

ಕರ್ನಾಟಕ ವಿ.ವಿ., ಎರಡನೆ ಸೆಮ್‌ ಇತಿಹಾಸ ಪಠ್ಯಕ್ರಮ, Revised NEP ಅನುಸಾರ. ಭಾರತದ ಇತಿಹಾಸ; ಗುಪ್ತರಿಂದ ಸಾ.ಶ.ವ. 1206ರ ವರೆಗೆ.

ಪತ್ರಿಕೆಯ ಶೀರ್ಷಿಕೆ: ಭಾರತದ ಇತಿಹಾಸ; ಗುಪ್ತರಿಂದ ಸಾ.ಶ.ವ. 1206ರ ವರೆಗೆ.  Course Title: HISTORY OF INDIA (From Guptas to 1206 A.D.)  Course Code: A2 HIS 1T1 Instruction hour per week: 06. Total No. of Lectures/Hours/ Semester: 75 Hours. Duration of Exam: 3 hours. Formative Assessment Marks: 20. Summative assessment Marks: 80. Total Marks: 100. *****    Unit I: Establishment of Empire & Kingdoms: 15Hrs 1. ಮಧ್ಯಕಾಲೀನ ಭಾರತದ ಇತಿಹಾಸ ಪುನರ್‌ರಚನೆ; ಆಧಾರಗಳು – ಪುರಾತತ್ವ ಮತ್ತು ಸಾಹಿತ್ಯಾಧಾರಗಳು. 1. Reconstructing the History of Medieval India- Sources - Archaeological &  Literary 2. ಗುಪ್ತರ ಸಾಮ್ರಾಜ್ಯ: ಸಂಕ್ಷಿಪ್ತ ರಾಜಕೀಯ ಇತಿಹಾಸ; ಸಮುದ್ರ ಗುಪ್ತ; ಧಾರ್ಮಿಕ ಪುನರುತ್ಥಾನ, ಸಾಹಿತ್ಯದ ಬೆಳವಣಿಗೆ, ವಿಜ್ಞಾನ & ತಂತ್ರಜ್ಞಾನ ಹಾಗೂ ಕಲೆ & ವಾಸ್ತುಶಿಲ್ಪ. ಗುಪ್ತರ ಕಾಲದ ಸುವರ್ಣಯುಗ: ಸತ್ಯಾಸತ್ಯತೆ. 2.  The Gupta Empire- Brief Political History with special reference to  Samudra Gupta- Golden Age of the Guptas-Growth of Literature, Science,  Art & Architecture 3. ವರ್ಧನ ಸಾಮ್ರಾಜ್ಯ; ಹರ್ಷವರ್ಧನನ ಸಾಧನೆ...

ಪ್ರಾಚೀನ ಭಾರತದ ಮಹಾಜನಪದಗಳು ಮತ್ತು ಗಣರಾಜ್ಯಗಳು

ಸೂಚನೆ: ಇಲ್ಲಿನ ಮಾಹಿತಿಯನ್ನು ಕಣಜ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ, ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ. ಪೀಠಿಕೆ:- ಮೌರ್ಯ ಸಾಮ್ರಾಜ್ಯವೆಂಬ ಪೂರ್ಣ ಪ್ರಮಾಣದ ‘ ರಾಜ್ಯ ’ ಆರಂಭವಾಗುವುದಕ್ಕೆ ಮೊದಲು ಈ ಪ್ರದೇಶದಲ್ಲಿ ವಿವಿಧ ರೀತಿಯ ರಾಜಕೀಯ ವ್ಯವಸ್ಥೆ ಅಸ್ತಿತ್ವದಲ್ಲಿತ್ತು . ಅಂದರೆ ರಾಜ್ಯ ಸ್ವರೂಪಕ್ಕೆ ಹೋಲಿಕೆಯಾಗುವ ಹಲವಾರು ರಾಜಕೀಯ ವ್ಯವಸ್ಥೆಗಳು ಕಂಡುಬರುತ್ತವೆ . ಅವುಗಳಿಗೆ ‘ ಜನಪದ ’ ಗಳೆಂದು ಕರೆಯುತ್ತಾರೆ . ಜನಪದಗಳು ರಚನೆ ಯಾಗುವುದಕ್ಕೆ ಮೊದಲು ಜನರು ತಮ್ಮದೇ ಆದ ಕುಲಗಳನ್ನು ರಚಿಸಿಕೊಂಡಿರುತ್ತಾರೆ . ಹಾಗೂ ಅವರು   ವಾಸಮಾಡುವ ಪ್ರದೇಶಕ್ಕೆ ‘ ಜಾನಪದ ’ ಎಂದು ಹೆಸರು . ಇದೊಂದು ಬುಡಕಟ್ಟು ವ್ಯವಸ್ಥೆ ಹಾಗೂ ಇವುಗಳಲ್ಲಿದ್ದ ಜನರ ಕಸುಬು ‘ ಬೇಟೆ ’ ಹಾಗೂ ಪಶುಸಂಗೋಪನೆ . ತಮ್ಮ ಗಡಿಗಳನ್ನು ಅರಣ್ಯ , ನದಿ , ತೊರೆ , ಬೆಟ್ಟಗಳಿಂದ ಗುರುತಿಸಿಕೊಳ್ಳುತ್ತಿರುತ್ತಾರೆ . ಕ್ರಮೇಣ ಕ್ಷತ್ರಿಯ ರಾಜರು ಇಂಥ ಜನಪದಗಳ ಮೇಲೆ ಏಕಸ್ವಾಮ್ಯ ಸ್ಥಾಪಿಸುತ್ತಾರೆ . ಈ ರೀತಿ ರಾಜರಿಂದ ಕೂಡಿದ ಜನಪದಗಳು ಅಸ್ತಿತ್ವಕ್ಕೆ ಬರುತ್ತವೆ . ಅಲ್ಲದೆ ರಾಜರುಗಳ ಏಕಸ್ವಾಮ್ಯ ಇಲ್ಲದ ‘ ಗಣ ಸಂಘ ಪದ್ಧತಿ ’ ಯ ಆಳುವ ವಂಶಗಳು ಇರುತ್ತವೆ . ಇವುಗಳು ತಮ್ಮದೇ ಲಾಂಛನ ಹೊಂದಿದ್ದು ತಮ್ಮಲ್ಲಿಯೇ ಒಬ್ಬ ಮುಖ್ಯಸ್ಥನನ್ನು ಆಯ್ಕೆಮಾಡಿ ಕೊಳ್ಳುತ್...

ಮೌರ್ಯರ ಪತನದ ಕಾರಣಗಳು

ಸೂಚನೆ:- ಇಲ್ಲಿನ ಮಾಹಿತಿಗಳನ್ನು ಕಣಜ ಅಂತರ್ಜಾಲದ ಪುಟಗಳಿಂದ ಸಂಗ್ರಹಿಸಿ, ಸಂಕಲಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ. ಮೌರ್ಯರ ಶೀಘ್ರ ಅವನತಿಗೆ ವಿವಿಧ ಕಾರಣಗಳನ್ನು ನೀಡಲಾಗಿದೆ . ಅಶೋಕನ ಕಾಲದಿಂದಲೇ ಮೌರ್ಯರ ಅವನತಿಯ ಪ್ರಕ್ರಿಯೆ ಆರಂಭವಾಹಿತೆಂದು ಕೆಲವರು ಅಭಿಪ್ರಾಯಿಸಿದ್ದಾರೆ . ಮೌರ್ಯರ ಅವನತಿ ಕುರಿತ ವಿವಿಧ ಕಾರಣಗಳನ್ನು ಅಥವಾ ಅಭಿಪ್ರಾಯಗಳನ್ನು ಇಲ್ಲಿ ಚರ್ಚಿಸಲಾಗಿದೆ:- 1.     ಬೌದ್ಧ ಧರ್ಮದ ಅನುಸರಣೆ:- ಒಂದು ಪಂಥದ ಇತಿಹಾಸಕಾರರ ಪ್ರಕಾರ ಅಶೋಕನ ಧಾರ್ಮಿಕ ನೀತಿಯು ಮೌರ್ಯರ ಅವನತಿಗೆ ಮೂಲ ಕಾರಣವಾಗಿದೆ . ಈ ಪಂಥಕ್ಕೆ ಸೇರಿದ ಡಾ . ಹರಪ್ರಸಾದ ಶಾಸ್ತ್ರೀಯವರು ಹೇಳುವಂತೆ , ಅಶೋಕನು ಬೌದ್ಧ ಮತಕ್ಕೆ ರಾಜಾಶ್ರಯ ನೀಡಿದ್ದು , ಹಿಂದೂ ಧರ್ಮದ ಆಚರಣೆಗಳು ಮತ್ತು ಯಜ್ಞ ಯಾಗಗಳನ್ನು ಕೈಬಿಟ್ಟಿದ್ದು , ಧರ್ಮ ಮಹಾಮಾತ್ರರ ನೇಮಕಾತಿ ಹಾಗೂ ಬ್ರಾಹ್ಮಣರ ನಿರ್ಲಕ್ಷ್ಯ , ಶೂದ್ರ ವರ್ಗಕ್ಕೆ ಸೇರಿದ ಮೌರ್ಯ ಅರಸರು ಹಲವು ಕಾಯ್ದೆಗಳನ್ನು ರೂಪಿಸಿದುದು ಮೊದಲಾದವುಗಳು ಬ್ರಾಹ್ಮಣ ವರ್ಗದ ಪ್ರತಿಭಟನೆಗೆ ಕಾರಣವಾದವು . ಬ್ರಾಹ್ಮಣ ವರ್ಗಕ್ಕೆ ಸೇರಿದ ಪುಷ್ಯಮಿತ್ರ ಶೃಂಗನು ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದನು .” ಈ ದೃಷ್ಟಿಕೋನವನ್ನು ಸಮರ್ಥಿಸುವ ಅಂಶಗಳೆಂದರೆ , ಮೌರ್ಯರ ಅವನತಿಯ ನಂತರ ಅಸ್ತಿತ್ವಕ್ಕೆ ಬಂದ ರಾಜವಂಶಗಳು ...