Posts

ಸಮಕಾಲೀನ ಭಾರತದಲ್ಲಿನ ಕಾರ್ಮಿಕರ ಚಳವಳಿಗಳು.

ಕಾರ್ಮಿಕ ಪದದ ಅರ್ಥ :- ಸಾಮಾನ್ಯ ಅರ್ಥದಲ್ಲಿ ಯಾರು ಕರ್ಮ ಅಂದರೆ ಕೆಲಸದಲ್ಲಿ ನಿರತರಾಗಿರುತ್ತಾರೊ ಅವರು ಕಾರ್ಮಿಕ ಎನಿಸಿಕೊಳ್ಳುತ್ತಾರೆ. ” ಅವರು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ ” . ಉದಾಹರಣೆ : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಾನೆ .   ಕಾರ್ಮಿಕ ಪದದ ಸಮಾನಾರ್ಥಕ ಪದಗಳು:   ಆಳು , ಕೂಲಿ , ಕೆಲಸಗಾರ , ಪರಿಶ್ರಮಿಕ , ಶ್ರಮಜೀವಿ , ಶ್ರಮಿಕ “ ಸಾಮಾನ್ಯ ಅರ್ಥದಲ್ಲಿ ಕಾರ್ಮಿಕ ಎಂದರೆ ದೈಹಿಕ ಇಲ್ಲವೇ ಬೌದ್ಧಿಕ ಶ್ರಮದಿಂದ ದುಡಿದು ಹಣ ಗಳಿಸುತ್ತಿರುವ ವ್ಯಕ್ತಿಗೆ ಕಾರ್ಮಿಕ ” ಎನ್ನುತ್ತೇವೆ . ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ . ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಯಾವುದೇ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ .   ಕೈಗಾರಿಕಾ ಕ್ರಾಂತಿಯ ಫಲವಾಗಿ ಸಮಾಜದಲ್ಲಿ ಬಂಡವಾಳಶಾಹಿ ವರ್ಗ ಮತ್ತು ಕಾರ್ಮಿಕ ವರ್ಗ ಎಂಬ ಎರಡು ವರ್ಗಗಳ ಉದಯವಾಯಿತು . ಈ ಎರಡು ವರ್ಗಗಳ ನಡುವೆ ಆರಂಭವಾದ ಸಂಘರ್ಷಗಳು ಮುಂದೆ ಕಾರ್ಮಿಕ ಚಳವಳಿಗಳಿಗೆ ಕಾರಣವಾದವು. ಏಕೆಂದರೆ, ಬಂಡವಾಳಶಾಹಿಗಳು ಕಾರ್ಮಿಕರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಿದ್ದು , ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಪ್...

ಚೋಳರ ಆಡಳಿತ ಪದ್ಧತಿಯ ಪ್ರಶ್ನಾವಳಿಗಳು

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. ವೀರಾಭಿಷೇಕ ಎಂದರೇನು? ಊಳಿಗದವರ ಪಡೆ ಎಂದರೇನು? ಸಂಧಿವಿಗ್ರಹಿಗಳ ಕಾರ್ಯವೇನು? ಚೋಳರ ಸೇನಾ ತುಕಡಿಗಳಿಗೆ ನಾಮಕರಣ ಹೇಗೆ ಮಾಡಲಾಗುತ್ತಿತ್ತು? ಮೂನ್ರುಕೈ ಮಹಾಸೇನೈ ಎಂಬ ಸೇನಾತುಕಡಿ ನಡೆಸಿದ ಸಾಹಸಗಳುಯಾವುವು? ಚೋಳರ ಗಜಸೇನೆಯ ಬಗ್ಗೆ ಲಭ್ಯವಿರುವ ವಿವರಗಳು ಯಾವುವು? ಕಟಕಗಳು ಎಂದರೇನು? ಚೋಳರ ಕಾಲದ ಆಡಳಿತ ಘಟಕಗಳು ಹೇಗೆ ವಿಭಜನೆಗೊಂಡಿದ್ದವು? ಚೋಳರ ಕಾಲದ ನ್ಯಾಯಾಡಳಿತ ಹೇಗಿತ್ತು? ಚರ್ಚಿಸಿರಿ. ವಾರಿಯಂಗಳು ಎಂದರೇನು? ಇವರ ಕಾಲದಲ್ಲಿ ತೆರಿಗೆಮುಕ್ತವಾಗಿದ್ದ ಪ್ರದೇಶಗಳು ಯಾವುವು? ಗ್ರಾಮಸಭೆಗಳಿಗೆ ಚುನಾವಣೆ ಹೇಗೆ ನಡೆಯುತ್ತಿತ್ತು? *****

ಅಧ್ಯಾಯ 7. ಆರ್ಥಿಕಾಭಿವೃದ್ಧಿ; ನೆಹರು ಕಾಲದ ಆರ್ಥಿಕ ಪರಂಪರೆ – ಪಂಚವಾರ್ಷಿಕ ಯೋಜನೆಗಳು, ಜಮೀನ್ದಾರಿ ಪದ್ಧತಿಯ ರದ್ದತಿ – ಭೂದಾನ ಚಳವಳಿ ಮತ್ತು ಹಸಿರು ಕ್ರಾಂತಿ.

ಪೀಠಿಕೆ : ಸ್ವಾತಂತ್ರದ ಕಾಲಕ್ಕೆ ಭಾರತವು ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಹೊಂದಿತ್ತು. ಇದಕ್ಕೆ ಕಾರಣವೆಂದರೆ ಬ್ರಿಟಿಷರ ಆಡಳಿತವು ನಮ್ಮ ಆರ್ಥಿಕತೆಯನ್ನು ಅಷ್ಟು ದುರ್ಬಲಗೊಳಿಸಿತ್ತು. ಇದರಿಂದ ಭಾರತವು ಜಾಗತಿಕ ಮಟ್ಟದ ಕೈಗಾರಿಕಾ ಪೈಪೋಟಿಯಲ್ಲಿ ಭಾಗವಹಿಸದಾಯಿತು. ಕಡುಬಡತನ, ಅನಕ್ಷರತೆ, ಕೈಗಾರಿಕೆ ಹಾಗೂ ಕೃಷಿಯ ಹಿಂದುಳಿಯುವಿಕೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಗಳು ಭಾರತವು ಆರ್ಥಿಕ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವಲ್ಲಿ ಅಡ್ಡಿಯಾಗಿದ್ದವು. ಇಂತಹ ಸನ್ನಿವೇಶದಲ್ಲಿ ನೆಹರು ಮತ್ತು ಕೆಲವು ಆರ್ಥಿಕ ತಜ್ಞರಿಗೆ ಭಾರತದ ಆರ್ಥಿಕಾಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವ ಅನಿವಾರ್ಯತೆ ಉಂಟಾಗಿತ್ತು. ಜಾಗತಿಕವಾಗಿ ಆರ್ಥಿಕ ಯೋಜನೆಗಳ ಆರಂಭ: ಒಂದನೆಯ ಮಹಾಯುದ್ಧದ ಅನಂತರ ೧೯೨೯ರ ಸುಮಾರಿಗೆ ಇಡೀ ಯುರೋಪ್ ಖಂಡವೇ ಬಹು ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಇದರಿಂದ ಅನೇಕ ರಾಷ್ಟ್ರಗಳಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ಸರ್ವಾಧಿಕಾರಿಗಳ ಆಡಳಿತ ಜಾರಿಗೆ ಬರಲು ಕಾರಣವಾಯಿತು. ಇದೇ ಸಮಯದಲ್ಲಿ ಸೋವಿಯತ್ ರಷ್ಯ ಆರ್ಥಿಕ ಯೋಜನೆ ಯನ್ನು ಪ್ರಾರಂಭಿಸಿದುದರಿಂದ ಯುರೋಪಿನ ಆರ್ಥಿಕ ಮುಗ್ಗಟ್ಟು ಆ ದೇಶದ ಮೇಲೆ ಏನೂ ಪರಿಣಾಮ ಉಂಟುಮಾಡಲಿಲ್ಲ. ಈ ಘಟನೆಯಿಂದ ಯುರೋಪಿನ ಅನೇಕ ಅರ್ಥಶಾಸ್ತ್ರಜ್ಞರು ಪ್ರಭಾವಿತರಾದರು.  ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್‌ ಡಿ ರೂಸ್ವೆಲ್ಟ್ ಆರ್ಥಿಕ ಮುಗ್ಗಟ್ಟಿನಿಂದ ಉಂಟಾದ ಪರಿಸ್ಥಿತಿಯನ್ನು ಪರಿಹರಿಸಲು “ನ್ಯೂ ಡೀಲ್...