Posts

Showing posts with the label ಧಾರವಾಡ ವ್ಯಾಪ್ತಿಯ ಮಹಾವಿದ್ಯಾಲಯಗಳಿಗೆ

ಬನವಾಸಿಯ ಕದಂಬರು - ರಾಜಕೀಯ ಇತಿಹಾಸ - ಸಂಕ್ಷಿಪ್ತ ಟಿಪ್ಪಣಿಗಳು

ಬನವಾಸಿಯ ಕದಂಬರು ಪೀಠಿಕೆ: ಮೊದಲ ಕನ್ನಡದ ರಾಜ ಮನೆತನ. ಶಾತವಾಹನರ ಉತ್ತರಾಧಿಕಾರಿಗಳು. ೪ ರಿಂದ ೬ ನೆ ಶತಮಾನಗಳ ನಡುವೆ ಆಡಳಿತ. ಮಾನವ್ಯ ಗೋತ್ರಕ್ಕೆ ಸೇರಿದ ಹಾರೀತಿಪುತ್ರರು. ಕಾರಣ ಹಿಂದಿನ ಚುಟುಗಳ ಸಂಬಂಧಿಗಳಿರಬಹುದು. ಬನವಾಸಿ ಆಡಳಿತ ಕೇಂದ್ರ. ಪ್ರಾಚೀನ ಹೆಸರು ಕುಂತಳ. ಶಿವಮೊಗ್ಗ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿನ ಪ್ರದೇಶಗಳು ಆಡಳಿತದ ವ್ಯಾಪ್ತಿಗೆ. ಆಧಾರಗಳು: ಚಂದ್ರವಳ್ಳಿ, ಚಿತ್ರದುರ್ಗ ಜಿಲ್ಲೆ, ಹಲ್ಮಿಡಿ ಹಾಸನ ಜಿಲ್ಲೆ, ತಾಳಗುಂದ (ಸ್ಥಾಣಕುಂದೂರು) ಶಿವಮೊಗ್ಗ ಜಿಲ್ಲೆ, ಹೆಬ್ಬಟ್ಟ, ಮಳವಳಿ, ಮಂಡ್ಯ ಜಿಲ್ಲೆ, ಗುಡ್ನಾಪುರಗಳಲ್ಲಿನ ಶಿಲಾಶಾಸನಗಳು. ಹಲಸಿ ಬೆಳಗಾವಿ ಜಿಲೆ, ಮುತ್ತೂರು,  ದೇವಗಿರಿ ರಾಣೆಬೆನ್ನೂರು ತಾ, ಸಂಗೊಳ್ಳಿಯ ತಾಮ್ರಪಟಗಳು. ೨ನೆ ಕಾಳಿದಾಸನ ಕೌಂತಳೇಶ್ವರ ದೌತ್ಯಂ. ತಾಳಗುಂದ, ಬನವಾಸಿ, ಚಿತ್ರದುರ್ಗ, ಹಲಸಿ ಮೊದಲಾದ ಸ್ಥಳಗಳಲ್ಲಿನ ಇವರ ಸ್ಮಾರಕಗಳು. ಮೂಲ: ಶಾಂತಿವರ್ಮನ ತಾಳಗುಂದದ ಶಾಸನದಂತೆ ಮಯೂರಶರ್ಮ ಮೂಲಪುರುಷ. ಮನೆಯ ಬಳಿಯ ಕದಂಬ ವೃಕ್ಷದ ಕಾರಣ ಮನೆತನದ ಹೆಸರು. ಮಳವಳ್ಳಿ ಶಾಸನದಲ್ಲಿ ಮೊದಲ ಅರಸನನ್ನು ʼದ್ವಿಜೋತ್ತಮʼ ಎಂದು ಉಲ್ಲೇಖ; ಕಾರಣ ವೈದಿಕ ಧರ್ಮಕ್ಕೆ ಸೇರಿದ ಬ್ರಾಹ್ಮಣ ವರ್ಗದವರು. ಕದಂಬ ಅರಸರ ಕಾಲಾನುಕ್ರಮಣಿಕೆ - (345-525) ಮಯೂರಶರ್ಮ: (345 - 365) ಕಂಗವರ್ಮ: (365 - 390) ಭಗಿರಥವರ್ಮ: (390 - 415) ರಘುವರ್ಮ: (415 - 43...