Posts

Showing posts from March, 2021

ಅನುಭವ ಮಂಟಪದ ಸ್ಥಾಪನೆಯ ಹಿನ್ನೆಲೆ ಮತ್ತು ಅನುಭಾವದ ಸಂಕ್ಷಿಪ್ತ ಅರ್ಥ ವಿವರಣೆ

ಅನುಭವ ಮಂಟಪ ಲೇಖನ: ಶ್ರೀ ಜಗದೀಶ್‌ ಕೊಡೆಕಲ್    ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕಲ್ಪನೆ ಅಭೂತಪೂರ್ವವಾದದ್ದು. ಅನುಭವ ಮಂಟಪದ ಉದ್ದೇಶ ಹಾಗೂ ಶರಣರು ಅದನ್ನು ಬಳಸಿಕೊಂಡ ರೀತಿಯನ್ನು ನೋಡುವುದಕ್ಕೂ ಮೊದಲು “ಅನುಭಾವ”  ಎಂಬುದನ್ನು ತಿಳಿಯುವುದು ಅವಶ್ಯಕ. ಅನುಭಾವದ ಅರ್ಥ ಅತ್ಯಂತ ವಿಶಾಲವಾಗಿದ್ದು, ಅದರ ಪರಿಭಾಷೆಯನ್ನು ಒಂದು ಸೂತ್ರದ ಅಡಿಯಲ್ಲಿ ಹಿಡಿದಿಡುವುದು ಅಸಾಧ್ಯವಾದರೂ ಅದರ ಪ್ರಮುಖವಾದ ಅಂಶಗಳನ್ನು ಕೆಳಕಂಡಂತೆ ಹೇಳಬಹುದು. ೧. ದೇಹದ ಸುಪ್ತ ಶಕ್ತಿಗಳನ್ನು ಎಚ್ಚರಗೊಳಿಸಿ, ಆ ಎಚ್ಚರದಿಂದ ತೆರೆದ ಒಳಗಣ್ಣಿನ ಮೂಲಕ ಸತ್ಯದ ಸ್ವರೂಪವನ್ನು ಪ್ರತ್ಯಕ್ಷವಾಗಿ ಸಾಕ್ಷಾತ್ಕರಿಸಿಕೊಳ್ಳುವುದು. ೨. ಅನುಭಾವವೆಂದರೆ, ಸತ್ಯದ ಕೊನೆಯ ಸ್ವರೂಪವನ್ನು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕಂಡು ಅನುಭವಿಸುವುದು.    ಹಾಗಂದ ಮಾತ್ರಕ್ಕೆ ಅನುಭವ ಮಂಟಪವು ಒಂದು ಯೋಗಶಾಲೆಯಾಗಲಿ ಅಥವಾ ಧ್ಯಾನಮಂದಿರವಾಗಿ ಇರದೇ ಬ್ರಹ್ಮ ಜಿಜ್ಞಾಸೆಯೊಂದಿಗೆ ಸಮಾಜ ಮತ್ತು ಪ್ರತಿಜೀವಿಯ ಉದ್ಧಾರದ ಉದ್ದೇಶವನ್ನು ಹೊಂದಿತ್ತು. ಲೌಕಿಕ ಬದುಕಿನಲ್ಲಿ ಹಾಸು-ಹೊಕ್ಕಾಗಿ ಬೆರೆತ ದೇವ-ದೇವರುಗಳ ಬಡಿದಾಟ, ಜಾತಿ-ಜಾತಿಗಳ ಗೊಂದಲ, ಶ್ರೀಮಂತ-ಬಡವರೆಂಬ ವ್ಯತ್ಯಾಸ, ಹೆಣ್ಣು-ಗಂಡೆಂಬ ತಾರತಮ್ಯ, ಸ್ಪೃಶ್ಯ-ಅಸ್ಪೃಶ್ಯರೆಂಬ ಭೇದ-ಭಾವ, ನಾನೆಂಬ ಅಹಂಕಾರ ಮುಂತಾದ ಜಾಡ್ಯಗಳನ್ನು ತೊಡೆದುಹಾಕಿ, ಕಲ್ಯಾಣ ರಾಜ್ಯವನ್ನು ಮಾ...