ದೆಹಲಿ ಸುಲ್ತಾನರ ಕಾಲದ ರಾಜಪ್ರಭುತ್ವದ ಸಿದ್ಧಾಂತ; ಉಲೇಮಾಗಳು, ನೊಬಲ್ಲರು ಮತ್ತು ಸೂಫಿಗಳ ಪ್ರಭಾವ.
ದೆಹಲಿ ಸುಲ್ತಾನರ ಆಡಳಿತಾವಧಿಯಲ್ಲಿನ ರಾಜಪ್ರಭುತ್ವದ ಸಿದ್ಧಾಂತವು ಇಸ್ಲಾಂ ಜಗತ್ತಿನಿಂದ ಬಂದುದಾಗಿದೆ. ಅವನಿಗೆ ಆ ಅಧಿಕಾರ ಮತ್ತು ಸ್ಥಾನವು ದೇವರಿಂದಲೇ ಕೊಡಲ್ಪಟ್ಟಿರುತ್ತದೆ. ಹಾಗಾಗಿ ಖಲೀಫನು ಇಡೀ ಇಸ್ಲಾಂ ಜಗತ್ತಿಗೇ ಮುಖ್ಯಸ್ಥನಾಗಿರುತ್ತಾನೆ. ಬಹುತೇಕ ಸುಲ್ತಾನರು ಖಲೀಫನನ್ನು ಕಾನೂನಾತ್ಮಕ ಮುಖ್ಯಸ್ಥನೆಂದು, ತಮ್ಮನ್ನು ತಾವು ಅವನ ಪ್ರತಿನಿಧಿಗಳೆಂದು ಭಾವಿಸುತ್ತಾರೆ. ಅವರಲ್ಲಿ ಬಹುತೇಕರು ಖಲೀಫನ ಹೆಸರನ್ನು ಖುತ್ಬಾ ಮತ್ತು ನಾಣ್ಯಗಳಲ್ಲಿ ಸೇರಿಸಿರುತ್ತಾರೆ ಹಾಗೂ ಅವನಿಗೆ ಅಧೀನರಾಗಿರುವುದನ್ನು ಸೂಚಿಸುವಂತಹ ಬಿರುದುಗಳನ್ನು ಹೊಂದಿರುತ್ತಾರೆ. ಆದರೆ ಟರ್ಕರು ಭಾರತಕ್ಕೆ ಬರುವ ಎಷ್ಟೋ ಮೊದಲೇ ಖಲೀಫನ ಅಧಿಕಾರವು ಕ್ಷೀಣಿಸಿತ್ತು ಮತ್ತು ವಂಶಪಾರಂಪರ್ಯದ ರಾಜತ್ವ ಮಾತ್ರವೇ ಉಳಿದಿತ್ತು. ಸುಲ್ತಾನರುಗಳ ರಾಜಕೀಯ ಅವಶ್ಯಕತೆ ಮತ್ತು ಶರ್ಯಾತ್ ಕಾನೂನುಗಳ ಬಗೆಗಿನ ಅವರ ನಿರ್ಲಕ್ಷ್ಯವು ರಾಜ್ಯದ ಮುಖ್ಯಸ್ಥ ಅಂದರೆ ಸುಲ್ತಾನರ ಕರ್ತವ್ಯಗಳಲ್ಲಿ ಬದಲಾವಣೆಯನ್ನು ತಂದಿತು. ಅಂದರೆ ಧಾರ್ಮಿಕ ವಿಚಾರಗಳು ಉಲೇಮಾಗಳಿಂದ ನಿರ್ವಹಿಸಲ್ಪಟ್ಟರೆ, ಆಡಳಿತಾತ್ಮಕ ಕರ್ತವ್ಯಗಳು ಸುಲ್ತಾನನಿಂದ ನಿರ್ವಹಿಸಲ್ಪಡುತ್ತಿದ್ದವು. ರಾಜ್ಯದ ಆಡಳಿತ ನಿರ್ವಹಣೆಗಾಗಿ ನಿಯಮಗಳನ್ನು ರೂಪಿಸುವಾಗ ಸುಲ್ತಾನನ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು; ಅಂದರೆ ಉಲೇಮಾಗಳ ಪ್ರಭಾವವು ಇಲ್ಲಿ ಹೆಚ್ಚಾಗಿತ್ತು. ಆದರೆ ಅಲ್ಲಾ ಉದ್ ದೀನ್ ಖಿಲ್ಜಿ ಮತ್ತು ಮಹಮದ್ ತುಘಲಕರು ಉಲೇ...