ಸೈಯ್ಯದ್ ಸಂತತಿ
ಸೈಯ್ಯದ್ ಸಂತತಿಯವರು ಪ್ರವಾದಿ ಮಹಮದ್ ಪೈಗಂಬರನ ಸಂಬಂಧಿಗಳೆಂದು ಹೇಳಲಾಗಿದೆ. ಸರ್ಹಿಂದಿಯ ತಾರೀಕ್ ಇ ಮುಬಾರಕ್ ಶಾಹಿಯಲ್ಲಿ ಇದಕ್ಕೆ ಮಾಹಿತಿ ಲಭ್ಯ. ಅದರ ಪ್ರಕಾರ, ಒಮ್ಮೆ ಸೈಯ್ಯದ್ ಮುಖ್ಯಸ್ಥನಾದ ಜಲಾಲುದ್ದೀನ್ ಭುಕಾರಿ ಮುಲ್ತಾನದ ರಾಜ್ಯಪಾಲನಾಗಿದ್ದ ನಾಜೀರ್ ಉಲ್ ಮುಲ್ಕ್ನಲ್ಲಿಗೆ ಭೇಟಿ ನೀಡಿದ್ದನು. ಆಗ ಏರ್ಪಡಿಸಿದ್ದ ಔತಣಕೂಟದಲ್ಲಿ ರಾಜ್ಯಪಾಲನು ಭುಕಾರಿಯ ಕೈ ತೊಳೆಯುವಂತೆ ಕಿಜರ್ಖಾನನ ಸೋದರನಿಗೆ ಹೇಳಿದನು. ಇದನ್ನು ಕೇಳಿದ ಭುಕಾರಿಯು “ಅವನು ಸೈಯ್ಯದ್ನು, ಅವನಿಂದ ಇಂತಹ ಕೆಲಸ ಮಾಡಿಸಬಾರದು” ಎಂದನಂತೆ. ಇದರಿಂದ ಕಿಜರ್ಖಾನ್ನು ಸೈಯ್ಯದ್ ವಂಶಕ್ಕೆ ಸೇರಿದವನೆಂದು ತಿಳಿದುಬರುತ್ತದೆ. ಆದರೆ ಸರ್ಹಿಂದಿಯ ವಿವರಣೆ ಮಾತ್ರ ಈ ಬಗ್ಗೆ ಲಭ್ಯವಿರುವುದು. ಕಿಜರ್ಖಾನನ ತಂದೆ ಮಲಿಕ್ ಸುಲೇಮಾನ್. ಅವನು ಮುಲ್ತಾನದ ರಾಜ್ಯಪಾಲನಾಗಿದ್ದನು. ಅವನ ಮರನದ ನಂತರ ಮಗ ಕಿಜರ್ಖಾನನು ಅಧಿಕಾರಕ್ಕೆ ಬಂದನು. ಆದರೆ ಅವನು ದೀಪಾಳಪುರದ ಅಧಿಕಾರಿಯೊಂದಿಗೆ ಕಲಹದಲ್ಲಿ ತೊಡಗಿದ್ದರಿಂದ ಅವನನ್ನು ಮುಲ್ತಾನದ ಆಡಳಿತಗಾರನ ಹುದ್ದೆಯಿಂದ ವಜಾ ಮಾಡಲಾಯಿತು. ಅದೇ ಸಮಯಕ್ಕೆ ಭಾರತದ ಮೇಲೆ ದಾಳಿ ಮಾಡಲು ಬಂದಿದ್ದ ತೈಮೂರ್ ಲಂಗನ ಸೇವೆಗೆ ಕಿಜರ್ಖಾನ್ ಸೇರಿಕೊಂಡನು. ತೈಮೂರ್ ದಾಳಿಯ ನಂತರ ತನ್ನ ದೇಶಕ್ಕೆ ವಾಪಾಸ್ಸು ಹೋಗುವಾಗ ಕಿಜರ್ಖಾನನನ್ನು ಮುಲ್ತಾನದ ರಾಜ್ಯಪಾಲನಾಗಿ ನೇಮಿಸಿದನು. ಇತ್ತ ದೆಹಲಿಯಲ್ಲಿ ತುಘಲಕ್ ಸುಲ್ತಾನ ಮಹಮದ್ ನಾಸೀ...