ದೆಹಲಿ ಸುಲ್ತಾನರ ಕಾಲದ ರಾಜಪ್ರಭುತ್ವದ ಸಿದ್ಧಾಂತ; ಉಲೇಮಾಗಳು, ನೊಬಲ್ಲರು ಮತ್ತು ಸೂಫಿಗಳ ಪ್ರಭಾವ.
ಪೀಠಿಕೆ : ದೆಹಲಿ ಸುಲ್ತಾನರ ಆಡಳಿತಾವಧಿಯಲ್ಲಿನ ರಾಜಪ್ರಭುತ್ವದ ಸಿದ್ಧಾಂತವು ಇಸ್ಲಾಂ ಜಗತ್ತಿನಿಂದ ಬಂದುದಾಗಿದೆ. ಅವನಿಗೆ ಆ ಅಧಿಕಾರ ಮತ್ತು ಸ್ಥಾನವು ದೇವರಿಂದಲೇ ಕೊಡಲ್ಪಟ್ಟಿರುತ್ತದೆ ಎಂಬ ನಂಬಿಕೆ ಇಸ್ಲಾಂನಲ್ಲಿ ಇದೆ. ಆದ್ದರಿಂದ ಇಸ್ಲಾಂನಲ್ಲಿನ ರಾಜಪ್ರಭುತ್ವವನ್ನು ದೈವೀಪ್ರಭುತ್ವ ಅಥವಾ Theocracy ಎಂದು ಕರೆಯಲಾಗುತ್ತದೆ.ಪಟಕ: ಖಲೀಫರ ಸ್ಥಾನ-ಮಾನ : ಇಸ್ಲಾಂ ಸ್ಥಾಪಕರಾದ ಮಹಮದ್ ಪೈಗಂಬರರು ಗತಿಸಿದ ನಂತರ ಅವರ ಅನುಯಾಯಿಗಳು ಖಲೀಫ ಎಂಬ ಹೆಸರಿನಲ್ಲಿ ರಾಜ್ಯವಾಳತೊಡಗಿದರು. ಅಲ್ಲದೇ ಅವರು ಪೈಗಂಬರರ ಪ್ರತಿನಿಧಿಗಳೆಂದು ಸಹಾ ನಂಬಲಾಗಿದೆ. ಹಾಗಾಗಿ ಖಲೀಫನು ಇಡೀ ಇಸ್ಲಾಂ ಜಗತ್ತಿಗೇ ಮುಖ್ಯಸ್ಥನಾಗಿದ್ದನು. ಬಹುತೇಕ ಸುಲ್ತಾನರು ಖಲೀಫನನ್ನು ಕಾನೂನಾತ್ಮಕ ಮುಖ್ಯಸ್ಥನೆಂದು, ತಮ್ಮನ್ನು ತಾವು ಅವನ ಪ್ರತಿನಿಧಿಗಳೆಂದು ಭಾವಿಸುತ್ತಿದ್ದರು. ಅವರಲ್ಲಿ ಬಹುತೇಕರು ಖಲೀಫನ ಹೆಸರನ್ನು ಖುತ್ಬಾ ಮತ್ತು ನಾಣ್ಯಗಳಲ್ಲಿ ಸೇರಿಸಿದ್ದರು ಹಾಗೂ ಅವನಿಗೆ ಅಧೀನರಾಗಿರುವುದನ್ನು ಸೂಚಿಸುವಂತಹ ಬಿರುದುಗಳನ್ನು ಹೊಂದಿದ್ದರು. ಆದರೆ ಟರ್ಕರು ಭಾರತಕ್ಕೆ ಬರುವ ಎಷ್ಟೋ ಮೊದಲೇ ಖಲೀಫನ ಅಧಿಕಾರವು ಕ್ಷೀಣಿಸಿತ್ತು ಮತ್ತು ವಂಶಪಾರಂಪರ್ಯದ ರಾಜತ್ವ ಮಾತ್ರವೇ ಉಳಿದಿತ್ತು. ಆದರೆ ಸ್ವತಂತ್ರ ಮನೋಭಾವದ ಸುಲ್ತಾನರುಗಳ ರಾಜಕೀಯ ಅವಶ್ಯಕತೆ ಮತ್ತು ಶರ್ಯಾತ್ ಕಾನೂನುಗಳ ಬಗೆಗಿನ ಅವರ ನಿರ್ಲಕ್ಷ್ಯವು ರಾಜ್ಯದ ...