Posts

ಶಿವಾಜಿಯ ಆಡಳಿತ ಪದ್ಧತಿ - Administration of Shivaji

ಶಿವಾಜಿಯ ಆಡಳಿತ ಪದ್ಧತಿ    ಸ್ವತಂತ್ರ ಮರಾಠಾ ರಾಜ್ಯವನ್ನು ಕಟ್ಟಿದ ಛತ್ರಪತಿ ಶಿವಾಜಿಯು ಅದರ ಆಡಳಿತಕ್ಕಾಗಿ ಅಗತ್ಯ ಏರ್ಪಾಟುಗಳನ್ನು ಮಾಡಿದ್ದನು. ಪಾರಂಪರಿಕವಾಗಿ ಬಂದಿದ್ದ ಕೆಲವು ಪದ್ಧತಿಗಳನ್ನು ತನ್ನ ಆಡಳಿತದಲ್ಲಿ ಅಳವಡಿಸಿಕೊಂಡರೂ ಅಗತ್ಯ ಮಾರ್ಪಾಡುಗಳನ್ನು ಮಾಡಿ ಅವುಗಳನ್ನು ತನ್ನ ಕಾಲಕ್ಕೆ ತಕ್ಕಂತೆ ಬದಲಿಸಿದನು. ಆತನು ರೂಪಿಸಿದ ಆಡಳಿತ ಪದ್ಧತಿಯು ಮುಂದೆ ಪೇಶ್ವೆಗಳ ಆಡಳಿತದಲ್ಲಿ ಉತ್ತಮ ವ್ಯವಸ್ಥೆಗಳಾಗಿ ಜಾರಿಯಲ್ಲಿದ್ದವು. ಇದು ಶಿವಾಜಿಯು ರೂಪಿಸಿದ ಆಡಳಿತ ಪದ್ಧತಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ಪ್ರಮುಖ ಲಕ್ಷಣಗಳು ಅಧಿಕಾರಿಗಳ ನೇಮಕಾತಿಯಲ್ಲಿ ಅನುವಂಶೀಕರಣ ಇಲ್ಲ ಅದಿಕಾರಿಗಳಿಗೆ ನೀಡಿದ್ದ ಜಹಗೀರುಗಳು ರದ್ದು ಪ್ರತಿಯೊಬ್ಬ ಮಂತ್ರಿಗಳಿಗೆ ಪ್ರತ್ಯೇಕ ಜವಾಬ್ದಾರಿ ಆಡಳಿತದಲ್ಲಿ ಸೈನಿಕ ಅಧಿಕಾರಿಗಳಿಗಿಂತ ನಾಗರೀಕ ಅಧಿಕಾರಿಗಳಿಗೆ ಆದ್ಯತೆ ಕೋಟೆಗಳ ಆಡಳಿತಕ್ಕೆ ವಿಶೇಷ ಆದ್ಯತೆ ಉನ್ನತ ಹುದ್ದೆಗಳಿಗೆ ಅಧಿಕ ಹಿಂದುಗಳ ನೇಮಕ; ಹಿಂದೂಕರಣ ಪಾರಂಪರಿಕ ಕಂದಾಯ ವಸೂಲಿಗಾರರ ಅಂತಸ್ತು ಇಳಿಮುಖ   ಕೇಂದ್ರಾಡಳಿತ ಛತ್ರಪತಿ, ಸರ್ವಾಧಿಕಾರಿ, ನಿರಂಕುಶನಲ್ಲ.   ಅಷ್ಟಪ್ರಧಾನ ಪದ್ಧತಿ • ಪೇಶ್ವೆ – ಪ್ರಧಾನ ಮಂತ್ರಿ – ಮೋರೆ ತಿವಳಿ ಪಿಂಗ್ಳೆ • ಅಮಾತ್ಯ – ಅರ್ಥಸಚಿವ – ಕಂದಾಯ ಮಂತ್ರಿ – ರಾಮಚಂದ್ರ ನೀಲಕಂಠ • ಮಂತ್ರಿ – ಗೃಹಮಂತ್ರಿ – ಆಪ್ತ ಕಾರ್ಯದರ್ಶಿ – ದತ್ತಾಜಿ ತ್ರಿಯಂಬಕ...

ಸ್ವಾಮಿ ವಿವೇಕಾನಂದ : ಕೆಲವು ನೋಟಗಳು

ಸ್ವಾಮಿ ವಿವೇಕಾನಂದ : ಕೆಲವು ನೋಟಗಳು ಸೂಚನೆ : ಪ್ರಸ್ತುತ ಲೇಖನವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿರ್ವಹಿಸುತ್ತಿರುವ “ ಕಣಜ ” ಎಂಬ ಅಂತರ್ಜಾಲದ ಭಾರತ ಉಪಖಂಡದ ಆಧುನಿಕಪೂರ್ವ ಚರಿತ್ರೆ ವಿವಿಧ ಆಯಾಮಗಳು ಪುಟಗಳಿಂದ ಸಂಗ್ರಹಿಸಿ ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.    ೧೯ನೆಯ ಶತಮಾನದ ಅಂತ್ಯಭಾಗದ ಹೊತ್ತಿಗೆ ಭಾರತದಾದ್ಯಂತ ಸಾಮಾಜಿಕ , ಧಾರ್ಮಿಕ , ಆರ್ಥಿಕ ಹಾಗೂ ರಾಜಕೀಯವಾದ ಸಂಘರ್ಷವು ತೀವ್ರವಾಗಿದ್ದವು . ಪಾಶ್ಚಿಮಾತ್ಯ ಪ್ರಭಾವವು ಒಂದೆಡೆ ಪ್ರಧಾನವಾದರೆ , ಸ್ಥಳೀಯವಾಗಿ ತಲೆದೋರಿದ್ದ ಧಾರ್ಮಿಕ ಅಂಧಶ್ರದ್ಧೆಗಳು , ಸಾಮಾಜಿಕ ಕೀಳರಿಮೆಗಳು , ಭಿನ್ನ ಸಮುದಾಯಗಳ ಸಂಕುಚಿತ ಸ್ವಭಾವಗಳು ಪ್ರಭಾವಿಯಾಗಿದ್ದವು . ಈ ಸಂಧರ್ಭದಲ್ಲಿ ಭಾರತೀಯ ಧಾರ್ಮಿಕ ವಲಯದಲ್ಲಿ ಆಧ್ಯಾತ್ಮಿಕ ಸ್ಫೂರ್ತಿಯಾಗಿ ರೂಪುಗೊಂಡವರು ಸ್ವಾಮಿ ವಿವೇಕಾನಂದರು . ಮಾನವ ಇತಿಹಾಸ ಕಂಡ ಅದ್ಭುತ ಶಕ್ತಿಯಾಗಿ , ಸನಾತನ ಧರ್ಮದ ಪ್ರತಿವಾದಕರಾಗಿ , ವೈಚಾರಿಕ ಚಿಂತನೆಯ ಹರಿಕಾರರಾಗಿ , ಭಾರತೀಯರ ಆತ್ಮಗೌರವದ ಸಂಕೇತವಾಗಿ ಎದ್ದು ನಿಂತವರು ವಿವೇಕಾನಂದರು . ಭಾರತೀಯ ಆಧ್ಯಾತ್ಮಿಕ ಪ್ರತಿನಿಧಿಯಾಗಿ , ಮಾನವಧರ್ಮದ ಅಂತಃಶಕ್ತಿಯನ್ನು ಎತ್ತಿಹಿಡಿಯುವ ಮೂಲಕ ಹಿಂದೂಧರ್ಮವನ್ನು ಪುನರ್ ‌ ವ್ಯಾಖ್ಯಾನಿಸುವ ಪ್ರಯತ್ನಶೀಲ ವ್ಯಕ್ತಿಯಾಗಿ ಅವರು ನಮ್ಮ ಮುಂದೆ ...