ದೆಹಲಿ ಸುಲ್ತಾನರ ಕಾಲದ ಆಡಳಿತ ಪದ್ಧತಿ

 

ADMINISTRATION OF DELHI SULTANATE.

5 ಹಂತಗಳಲ್ಲಿ ವಿಭಜಿಸಬಹುದು:-
ಅವುಗಳೆಂದರೆ,

ಅ. ಕೇಂದ್ರಾಡಳಿತ.

ಆ. ಪ್ರಾಂತ್ಯಾಡಳಿತ.

ಇ. ಹಣಕಾಸು ಆಡಳಿತ.

ಈ. ಸೇನಾಡಳಿತ.

ಉ. ನ್ಯಾಯಾಡಳಿತ.

 

ಅ. ಕೇಂದ್ರಾಡಳಿತ: ಸುಲ್ತಾನ:- ಸ್ಥಾನ-ಮಾನಗಳು ಮತ್ತು ಅವನ ಜವಾಬ್ದಾರಿಗಳು.

ಮಂತ್ರಿಮಂಡಲ: ಸುಲ್ತಾನನ ಸಹಾಯಕ್ಕಾಗಿ ವಿವಿಧ ಮಂತ್ರಿಗಳು ಇರುತ್ತಿದ್ದರು. ಆರಂಭ ಕಾಲದಲ್ಲಿ ಕೇವಲ ೪ ಪ್ರಮುಖ ಮಂತ್ರಿಗಳು  ಇದ್ದು ನಂತರದ ಕಾಲದಲ್ಲಿ ಅವರ ಸಂಖ್ಯೆ ೬ ಕ್ಕೆ ಏರಿತು. ಅವರುಗಳೆಂದರೆ,,

. ವಜ಼ೀರ್ಪ್ರಧಾನ ಮಂತ್ರಿ: ದಿವಾನ್ ವಜ಼ೀರತ್ ಇವನ ಕಛೇರಿಯ ಹೆಸರು. ಎಲ್ಲಾ ಇಲಾಖೆಗಳ ಮೇಲ್ವಿಚಾರಣೆ. ಇವನಿಗೆ ನಾಯಿಬ್ ವಜ಼ೀರ್ ಮತ್ತು ಮುಶ್ರಫ್ ಮುಮಲಿಕ್ ಎಂಬ ಸಹಾಯಕರು ಇದ್ದರು.

2. ದಿವಾನ್‌ ಇ ಮುಮಲಿಕ್:‌ ದಿವಾನ್‌ ಇ ಆರಿಜ್‌ ಇವನ ಇಲಾಖೆಯ ಹೆಸರು. ಸೇನಾ ವಿಭಾಗದ ಮುಖ್ಯಸ್ಥ – ಯುದ್ಧ ಮಂತ್ರಿ. ಸೇನೆಯ ಸಮಸ್ತ ಆಡಳಿತದ ಜವಾಬ್ದಾರಿಗಳು.

೩. ದಬೀರ್ ಇ ಮುಮಲಿಕ್ –
ಪತ್ರ ವ್ಯವಹಾರಗಳ ಮುಖ್ಯಸ್ಥ: ಇವನ ಕಛೇರಿಯ ಹೆಸರು ದಿವಾನ್ ಇ ಇನ್ಶಾ. ರಾಜಾಜ್ಞೆಗಳ ಸಂಗ್ರಹಣೆ ಮತ್ತು ರವಾನೆ. ಇವನಿಗೆ ಸಹಾಯಕರು ದಬೀರ್‌ಗಳು ಆಗಿದ್ದರು.

೪. ದಿವಾನ್ ಇ ರಿಸಾಲತ್: ವಿದೇಶಾಂಗ ಮಂತ್ರಿ; ರಾಯಭಾರಿಗಳ ನೇಮಕ, ವಿದೇಶೀ ರಾಯಭಾರಿಗಳ ಸ್ವಾಗತ ಮತ್ತು ಪತ್ರ ವ್ಯವಹಾರಗಳು ಇತ್ಯಾದಿ ಇವನ ಕರ್ತವ್ಯಗಳು.

೫. ಸದರ್ ಉಸ್ ಸದರ್: ಧಾರ್ಮಿಕ ವ್ಯವಹಾರಗಳ ಮಂತ್ರಿ. ದಾನ-ದತ್ತಿಗಳ ಮೇಲ್ವಿಚಾರಣೆ. ಇಸ್ಲಾಂ ಆಚರಣೆಗಳ ಮೇಲ್ವಿಚಾರಣೆ. ಪ್ರಜೆಗಳ ನೈತಿಕ ಜೀವನದ ಮೇಲ್ವಿಚಾರಣೆ.

೬. ಖಾಜ಼ಿ ಉಲ್ ಖ್ವಾಜ಼ಾತ್
ಮುಖ್ಯ ನ್ಯಾಯಾಧೀಶ: ಇವನ ಕಛೇರಿಯ ಹೆಸರು  ದಿವಾನ್ ಇ ಖ್ವಾಜ಼ಾತ್. ಸುಲ್ತಾನನಿಗೆ ನ್ಯಾಯತೀರ್ಪು ನೀಡಲು ಸಹಾಯ ಮಾಡುವುದು.

   ಮೇಲಿನ ಪ್ರಮುಖ ಮಂತ್ರಿಗಳಲ್ಲದೇ ಕೆಳಕಂಡ ಇತರೆ ಮಂತ್ರಿಗಳೂ ಸಹ ಸುಲ್ತಾನನ ಆಡಳಿತ ಕಾರ್ಯಗಳಲ್ಲಿ ಸಹಾಯಕರಾಗಿರುತ್ತಿದ್ದರು.

೭. ಬರೀದ್ ಇ ಮುಮಲಿಕ್: ಅಂಚೆ ಮತ್ತು ಗೂಢಾಚಾರ ವಿಭಾಗದ ಮುಖ್ಯಸ್ಥ. ಇವನು ಮುಖ್ಯ ಗೂಢಾಚಾರನೂ ಆಗಿದ್ದ.

೮. ದಿವಾನ್ ಇ ಅಮೀರ್ ಕೋಹಿ: ಮಹಮ್ಮದ್ ಬಿನ್‌ ತುಘಲಕ್ ಕಾಲದ ಕೃಷಿ ಮಂತ್ರಿ.

೯. ದಿವಾನ್ ಇ ಮಸ್ತಕ್ ರಾಜ಼್: ಸಾಲ ವಸೂಲಿಗಾರ. ಅಲ್ಲಾವುದ್ದೀನನ ಕಾಲದಲ್ಲಿ ಈ ವಿಭಾಗ ಆರಂಭವಾಗಿತ್ತು.

೧೦. ಸಾರ್ ಇ ಜ಼ಾಂದಾರ್: ಸುಲ್ತಾನನ ಅಂಗರಕ್ಷಕ ಪಡೆಯ ಮುಖ್ಯಸ್ಥ.

೧೧. ನಾಯಿಬ್ ಉಲ್ ಮುಲ್ಕ್: ಸೇನಾಡಳಿತದ ಮೇಲ್ವಿಚಾರಕ. ಆರಿಜ಼್ ಇ ಮುಮಲಿಕ್ ನಿಗೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದನು.

೧೨. ದಿವಾನ್ ಇ ಇಸ್ತೆಕಾರ್: ಟಂಕಸಾಲೆ ಮತ್ತು ಧರ್ಮಚತ್ರಗಳ ಮೇಲ್ವಿಚಾರಕ.

೧೩. ಬಕ್ಷಿ ಇ ಫೌಜ಼್: ಸೇನಾಪಡೆಗಳ ವೇತನ ವಿತರಣಾಧಿಕಾರಿ.

೧೪. ದಿವಾನ್ ಇ ಖೈರತ್: ಬಡವರು ಮತ್ತು ಅಶಕ್ತರಿಗೆ ದಾನ-ಧರ್ಮ ಇಲಾಖೆ. ಇದು ಫಿರೋಜ಼್ ಶಾ ತುಘಲಕ್ ಕಾಲದಲ್ಲಿ ಆರಂಭವಾದ ಇಲಾಖೆ.

೧೫. ದಿವಾನ್ ಇ ಬಂದಗಾನ್: ಗುಲಾಮರ ಮೇಲ್ವಿಚಾರಣೆಯ ಇಲಾಖೆ. ಇದೂ ಸಹ ಫಿರೋಜ಼್ ಶಾ ತುಘಲಕ್ ಕಾಲದಲ್ಲಿ ಆರಂಭವಾದ ಇಲಾಖೆ.

೧೬. ಮುಶ್ರಫ್ ಎ ಮುಮಲಿಕ್: ರಾಜ್ಯದ ಖರ್ಚು-ವೆಚ್ಚಗಳ ಮೇಲ್ವಿಚಾರಕ.

೧೭. ಅಮೀರ್ ಇ ಆಕರ್: ಅರಮನೆಗಳ ಮೇಲ್ವಿಚಾರಕ.

೧೮. ಅಮೀರ್ ಎ ಬೆಹ್ರಾ: ಸುಲ್ತಾನನ ಹಡಗುಗಳ ಮೇಲ್ವಿಚಾರಕ.

 

ಆ. ಪ್ರಾಂತ್ಯಾಡಳಿತ: ಇಕ್ತಾ-ಇಕ್ತೆದಾರ್.‌ ಶಿಕ್-ಶಿಕ್‌ದಾರ್.‌ ಪರಗಣ-ಅಮೀಲ್‌. ಗ್ರಾಮ-ಚೌಧರಿ, ಪಟ್ವಾರಿ, ಮುಕ್ದಮ್‌ರು.

ಇ. ಹಣಕಾಸು ಆಡಳಿತ: ಭೂಕಂದಾಯ ಪ್ರಮುಖ ಆದಾಯ. ಎರಡು ವಿಧ. ಕರಜ್- ಹಿಂದೂಗಳ ಮೇಲಿನ ಭೂಕಂದಾಯ. ಉಶರ್-ಮುಸ್ಲೀಂರ ಮೇಲಿನ ಭೂಕಂದಾಯ. ಕಂಸ್-ಯುದ್ಧ ಲೂಟಿ. ಜಕಾತ್-‌ ಆದಾಯ ತೆರಿಗೆ. ಜೆಸಿಯಾ-ತಲೆಗಂದಾಯ. ಘರಿ, ಚರಾಯಿ, ಕಪ್ಪಕಾಣಿಕೆಗಳು, ವೃತ್ತಿ ತೆರಿಗೆ, ಗಣಿತೆರಿಗೆ, ವ್ಯಾಪಾರ ತೆರಿಗೆ, ನೀರಾವರಿ ತೆರಿಗೆ, ದಂಡ, ರಫ್ತು ತೆರಿಗೆಗಳು.

ಈ. ಸೇನಾಡಳಿತ: ಸುಲ್ತಾನರ ಅಸ್ಥಿತ್ವ ಸೇನೆಯ ಮೇಲೆ ನಿಂತಿತ್ತು. ಸ್ಥಾಯಿ ಸೈನ್ಯ ಸ್ಥಾಪಿಸಿದ್ದರು. ಪದಾತಿ, ಅಶ್ವ ಮತ್ತು ಗಜ ಪಡೆಗಳೆಂಬ ಮೂರು ಪಡೆಗಳು ಇದ್ದವು. ಅಶ್ವಪಡೆ ಬಹುಮುಖ್ಯ ಪಡೆಯಾಗಿತ್ತು. ಪ್ರಾಂತ್ಯಗಳ ಗವರ್ನರ್‌ಗಳು ಯುದ್ಧಕಾಲದಲ್ಲಿ ಸೇನೆ ಒದಗಿಸುತ್ತಿದ್ದರು. ನಾಲ್ಕು ರೀತಿಯ ಸೈನ್ಯವಿತ್ತು; ಸ್ಥಾಯಿ, ಪ್ರಾಂತ್ಯಗಳಿಂದ ಬರುತ್ತಿದ್ದ ಸೈನ್ಯ, ಯುದ್ಧಕಾಲದಲ್ಲ್ನೇಮಿಸಿಕೊಳ್ಳುತ್ತಿದ್ದ ಸೈನ್ಯ ಮತ್ತು ಸ್ವಯಂ ಸೇವಕರಿಂದ ಕೂಡಿದ್ದ ಧಾರ್ಮಿಕ ಸೈನ್ಯ. ವಿವಿಧ ಜನಾಂಗಗಳಿಂದ ಕೂಡಿತ್ತು. ಅಫ್ಘನ್ನರು, ತುರ್ಕರು, ಪರ್ಷಿಯನ್ನರು ಮತ್ತು ಮಂಗೋಲರು. ಸೈನ್ಯದಲ್ಲಿ ವಿವಿಧ ದರ್ಜೆಯ ಅಧಿಕಾರಿಗಳಿದ್ದರು. ಅವರುಗಳೆಂದರೆ,

೧. ಸರ್‌ ಇ ಕೈಲ್‌ - ೧೦ ಸವಾರರು – ೧೦,೦೦೦ ಟಂಕ

೨. ಸಿಪಾಹ್‌ ಸಲಾರ್‌ - ೧೦ ಸರ್‌ ಇ ಕೈಲ್‌ಗಳು – ೨೦,೦೦೦ ಟಂಕಗಳು

೩. ಅಮೀರ್‌ - ೧೦ ಸಿಪಾಹ್‌ ಸಲಾರ್‌ಗಳು – ೪೦,೦೦೦ ಟಂಕಗಳು

೪. ಮಲಿಕ್‌ - ೧೦ ಅಮೀರರು – ೬೦,೦೦೦ ಟಂಕಗಳು

೫. ಖಾನ್‌ - ೧೦ ಮಲಿಕ್‌ಗಳು – ೧ ಲಕ್ಷ ಟಂಕಗಳು

   ಕುದುರೆಗಳು ಅರೇಬಿಯಾದಿಂದ ಆಮದಾಗುತ್ತಿದ್ದವು. ಕೋಟೆಗಳು ಪ್ರಾಮುಖ್ಯತೆ ಪಡೆದಿದ್ದವು. ಗಡಿಗಳಲ್ಲಿ ಸ್ಥಾಯಿ ಸೇನೆ ಇರುತ್ತಿತ್ತು. ಡಾಕ್‌, ಚಹರಾ ಮತ್ತು ಇಕ್ತಾ ಎಂಬ ಪದ್ಧತಿಗಳಿದ್ದವು. ನೌಕಾಪಡೆ ಮತ್ತು ಫಿರಂಗಿ ಪಡೆಗಳು ಕಡಿಮೆ ಇತ್ತು.

ಉ. ನ್ಯಾಯಾಡಳಿತ: ಸುಲ್ತಾನನೆ ಅಂತಿಮ ನ್ಯಾಯಾಧೀಶ. ಅವನ ಆಸ್ಥಾನವೇ ಅಂತಿಮ ನ್ಯಾಯಾಲಯ. ವಾರದಲ್ಲಿ ಎರಡು ದಿನ ನ್ಯಾಯತೀರ್ಪು. ನಿಸ್ಪಕ್ಷಪಾತ ನ್ಯಾಯದಾನ. ಶಿಕ್ಷೆಗಳು ಕಠಿಣ. ಸದರ್‌ ಇ ಸದರ್‌, ಖಾಜಿ, ಮುಫ್ತಿಗಳು ಸಹಾಯಕ್ಕೆ. ಪಟ್ಟಣಗಳಲ್ಲಿ ಖಾಜಿ ನ್ಯಾಯಾಲಯಗಳು. ನಗರಗಳ ನ್ಯಾಯಾಡಳಿತವನ್ನು ಅಮೀರ್‌ ಇ ದಾದ್‌ ನಡೆಸುತ್ತಿದ್ದನು. ಇಸ್ಲಾಂ ಕಾನೂನಿನಂತೆ ನ್ಯಾಯದಾನ. ಖಿಲ್ಜಿ ಕಾಲದಲ್ಲಿ ಮಹತಾಶಿಬ್‌ ಎಂಬ ಅಧಿಕಾರಿ ತೂಕ-ಅಳತೆಗಳ ಮೋಸ ಪರಿಶೀಲಿಸುತ್ತಿದ್ದನು.

Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources