ರಾಷ್ಟ್ರಕೂಟರ ಆರಂಭ, ಸ್ಥಾಪಕ, ಆಧಾರಗಳು, ಧೃವ & ಗೋವಿಂದರ ಕುರಿತ ಪ್ರಶ್ನಾವಳಿ.

   ಆತ್ಮೀಯ ವಿದ್ಯಾರ್ಥಿಗಳೇ, ತರಗತಿಯಲ್ಲಿ ಹಾಜರಿರುವ ಎಲ್ಲಾ ವಿದ್ಯಾರ್ಥಿಗಳಲ್ಲಿ ಒಟ್ಟು ಐದು ಗುಂಪುಗಳನ್ನಾಗಿ ಮಾಡಿಕೊಂಡು, ನಿಮಗೆ ಈಗಾಗಲೇ ನೀಡಿರುವ ರಾಷ್ಟ್ರಕೂಟರ ಅಧ್ಯಯನ ಸಾಮಗ್ರಿಯನ್ನು ಬಳಸಿಕೊಂಡು ಪ್ರತಿ ಗುಂಪು ತಲಾ ಹತ್ತು ಪ್ರಶ್ನೆಗಳಿಗೆ  ಉತ್ತರಗಳನ್ನು ಸಿದ್ಧಪಡಿಸಿರಿ:-

  1. ರಾಷ್ಟ್ರಕೂಟರ ಆಳ್ವಿಕೆಯ ಶತಮಾನಗಳು ಯಾವುವು?
  2. ರಾಷ್ಟ್ರಕೂಟರ ಇತಿಹಾಸ ರಚನೆಗೆ ಲಭ್ಯವಿರುವ ಶಾಸನಗಳು ಯಾವುವು?
  3. ರಾಷ್ಟ್ರಕೂಟರ ಇತಿಹಾಸ ರಚನೆಗೆ ಲಭ್ಯವಿರುವ ಸಾಹಿತ್ಯಾಧಾರಗಳು ಯಾವುವು?
  4. ಕರ್ನಾಟಕವನ್ನಾಳಿದ ರಾಷ್ಟ್ರಕೂಟರ ರಾಜಧಾನಿ ಯಾವುದಾಗಿತ್ತು?
  5. ಕರ್ನಾಟಕದಲ್ಲಿ ರಾಷ್ಟ್ರಕೂಟರ ಮನೆತನ ಸ್ಥಾಪಿಸಿದವನು ಯಾರು?
  6. ಅವನು ಯಾರ ಮಾಂಡಲೀಕನಾಗಿದ್ದನು?
  7. ರಾಷ್ಟ್ರಕೂಟರ ರಾಜಲಾಂಛನ ಯಾವುದು?
  8. ಮಾನ್ಯಪುರದ ರಾಷ್ಟ್ರಕೂಟರಿಗೂ ಮಾನ್ಯಕೇಟದ ರಾಷ್ಟ್ರಕೂಟರಿಗೂ ಇರುವ ವ್ಯತ್ಯಾಸವೇನು?
  9. ರಾಷ್ಟ್ರಕೂಟರ ಯಾದವ ಕುಲದ ಮೂಲವನ್ನು ಏಕೆ ತಿರಸ್ಕರಿಸಲಾಗಿದೆ?
  10. ರಾಷ್ಟ್ರಕೂಟರ ಬಗೆಗಿನ R.G. ಭಂಡಾರ್ಕರ್ಅವರ ಅಭಿಪ್ರಾಯವನ್ನು ಏಕೆ ನಿರಾಕರಿಸಲಾಗಿದೆ?
  11. ಡಾ. A C ಬರ್ನೆಲ್ಅವರು ಯಾವ ಮೂಲವನ್ನು ಪ್ರತಿಪಾದಿಸಿದ್ದಾರೆ?
  12. ಡಾ. ಪ್ಲೀಟ್‌ ಅವರ ಪ್ರಕಾರ ರಾಷ್ಟ್ರಕೂಟರ ಮೂಲ ಯಾವುದು?
  13. ಡಾ. C.V. ವೈದ್ಯ ಅವರ ಪ್ರತಿಪಾದನೆ ಯಾವುದು? ಮತ್ತು ಏಕೆ ನಿರಾಕರಿಸಲಾಗಿದೆ?
  14. ಕನ್ನಡ ಮೂಲದ ಪ್ರತಿಪಾದಕರು ಯಾರು?
  15. ಕನ್ನಡ ಮೂಲಕ್ಕೆ ಅವರು ನೀಡುವ ಆಧಾರಗಳು ಯಾವುವು?
  16. ರಾಷ್ಟ್ರಕೂಟ ಪದ ಯಾವುದರ ಸೂಚಕವಾಗಿದೆ??
  17. ಕೂಟ ಎಂಬ ಪದವು ಏನನ್ನು ಸೂಚಿಸುತ್ತದೆ?
  18. ಸ್ವತಂತ್ರ ಅಧಿಕಾರ ಸ್ಥಾಪಿಸುವ ಮುನ್ನ ದಂತಿದುರ್ಗನು ಯಾವ ಸ್ಥಾನವನ್ನು ಅಲಂಕರಿಸಿದ್ದನು?
  19. ರಾಷ್ಟ್ರಕೂಟರ ಮೂಲನೆಲೆ ಯಾವುದಾಗಿತ್ತು?
  20. ಅವರ ಮೂಲನೆಲೆ ಇಂದು ಎಲ್ಲಿದೆ?
  21. . . ಮುತ್ತಣ್ಣ ಅವರ ಹೇಳಿಕೆ ಏನನ್ನು ಸೂಚಿಸುತ್ತದೆ?
  22. ರಾಷ್ಟ್ರಕೂಟರ ಆರಂಭಿಕರ ಹೆಸರುಗಳೇನು?
  23. ರಾಷ್ಟ್ರಕೂಟರ ಆರಂಭಿಕರು ಯಾರ ಅಧೀನಾಧಿಕಾರಿಗಳಾಗಿದ್ದರು?
  24. ರಾಷ್ಟ್ರಕೂಟರ ಬಗೆಗಿನ ಶಾಸನಾಧಾರಗಳನ್ನ ಪಟ್ಟಿ ಮಾಡಿರಿ.
  25. ಅವರ ಕುರಿತ ಸಾಹಿತ್ಯಾಧಾರಗಳು ಯಾವುವು?
  26. ಇವರ ಬಗ್ಗೆ ಆಧಾರ ಒದಗಿಸುವ ವಿದೇಶೀ ಬರವಣಿಗೆಗಳು ಯಾವುವು?
  27. ದಂತಿದುರ್ಗನು ತನ್ನ ಮೂಲವನ್ನು ಶಾಸನಗಳಲ್ಲಿ ಏನೆಂದು ಹೇಳಿಕೊಂಡಿದ್ದಾನೆ?
  28. ಅವನ ಕಾಲಾವಧಿ ತಿಳಿಸಿರಿ.
  29. ದಂತಿದುರ್ಗನು ಚಾಲುಕ್ಯರಿಗೆ ಹೇಗೆ ಸೇವೆ ಸಲ್ಲಿಸಿದ್ದನು?
  30. ಹಿರಣ್ಯಗರ್ಭದಾನ ಯಾಗವನ್ನು ಎಲ್ಲಿ ಆಚರಿಸಿದ್ದನು?
  31. ಹಿರಣ್ಯಗರ್ಭದಾನ ಯಾಗವನ್ನು ಯಾವ ಸಂದರ್ಭದಲ್ಲಿ ಆಚರಿಸಿದ್ದನು?
  32. ದಂತಿದುರ್ಗನು ಚಾಲುಕ್ಯರಿಂದ ಸ್ವತಂತ್ರಗೊಂಡ ಕಾಲಾವದಿ ಯಾವುದು?
  33. ದಂತಿದುರ್ಗನು ಯಾವ ಬಿರುದುಗಳಿಗೆ ಪಾತ್ರನಾಗಿದ್ದನು?
  34. ದಂತಿದುರ್ಗನಿಗೆ ಎಷ್ಟು ಜನ ಗಂಡುಮಕ್ಕಳಿದ್ದರು?
  35. ದಂತಿದುರ್ಗನ ನಂತರ ಅಧಿಕಾರಕ್ಕೆ ಬಂದವರು ಯಾರು?
  36. ಒಂದನೆ ಕೃಷ್ಣ ಮತ್ತು ದಂತಿದುರ್ಗನ ನಡುವಿನ ಸಂಬಂಧವೇನಾಗಿತ್ತು?
  37. ಒಂದನೆ ಕೃಷ್ಣನ ನಂತರ ಅದಿಕಾರಕ್ಕೆ ಬಂದವರು ಯಾರು?
  38. ಧೃವನು ತನ್ನ ಸೋದರನನ್ನು ಪದಚ್ಯುತನನ್ನಾಗಿಸಲು ಕಾರಣವೇನು?
  39. ಅಂತಃಕಲಹದ ಸಂದರ್ಭದಲ್ಲಿ ದೃವನು ಯಾರನ್ನು ಸೆರೆಗೆ ಹಾಕಿದನು?
  40. ಧೃವನಿಂದ ಸೋತ ಪ್ರತಿಹಾರರ ರಾಜ ಯಾರು?
  41. ತನ್ನ ಉತ್ತರದ ದಂಡಯಾತ್ರೆಗಳ ಕಾಲಕ್ಕೆ ಮಾಳವ ಮತ್ತು ಸುತ್ತಲಿನ ಪ್ರದೇಶಗಳ ರಕ್ಷಣೆಯ ಜವಾಬ್ದಾರಿಯನ್ನು ಧೃವನು ಯಾರಿಗೆ ವಹಿಸಿದ್ದನು?
  42. ಧೃವನ ಮಕ್ಕಳ ಹೆಸರುಗಳೇನು ಮತ್ತು ಅವನಿಗಿದ್ದ ಬಿರುದುಗಳು ಯಾವುವು?
  43. ಮೂರನೇ ಗೋವಿಂದನು ಅಧಿಕಾರಕ್ಕೆ ಬಂದುದರ ಪರಿಣಾಮವೇನು?
  44. ಸ್ತಂಭನನ್ನು ಯಾರು ಸೋಲಿಸಿದರು ಮತ್ತು ಏಕೆ?
  45. ಗೋವಿಂದನು ಉತ್ತರದ ದಿಗ್ವಿಜಯ ಕೈಗೊಂಡಾಗ ಪ್ರತಿಹಾರರ ರಾಜನಾಗಿದ್ದವನು ಯಾರು?
  46. ಶರ್ವನ ಜನನ ಎಲ್ಲಿ ಆಯಿತು ಮತ್ತು ಯಾವಾಗ?
  47. ಗೋವಿಂದನು ಉತ್ತರದ ದಿಗ್ವಿಜಯಗಳಿಂದ ಮರಳಿದ ನಂತರ ದಕ್ಷಿಣದ ದಂಡಯಾತ್ರೆಗಳನ್ನು ಕೈಗೊಂಡನು. ಏಕೆ?
  48. ಗೋವಿಂದನ ವರ್ಣನೆಯನ್ನು ಹೊಂದಿರುವ ಶಾಸನಗಳು ಯಾವುವು?
  49. ಗೋವಿಂದನ ಕುರಿತು ಸಾ.ಶ.ವ. 805ರ ಶಾಸನದ ವರ್ಣನೆ ಏನನ್ನು ತಿಳಿಸುತ್ತದೆ?
  50. ಗೋವಿಂದನಿಗಿದ್ದ ಬಿರುದುಗಳು ಯಾವುವು?


Comments

Popular posts from this blog

ಸಿಂಧೂ ನಾಗರೀಕತೆಯ ಪ್ರಮುಖ ಲಕ್ಷಣಗಳು The Salient Features of the Indus Valley Civilization

ಕರ್ನಾಟಕದ ಇತಿಹಾಸ ರಚನೆಯ ಮೂಲಾಧಾರಗಳು ಭಾಗ ೧

ಸಾಹಿತ್ಯಾಧಾರಗಳು - Literary Sources