ಅಧ್ಯಾಯ 7. ಆರ್ಥಿಕಾಭಿವೃದ್ಧಿ; ನೆಹರು ಕಾಲದ ಆರ್ಥಿಕ ಪರಂಪರೆ – ಪಂಚವಾರ್ಷಿಕ ಯೋಜನೆಗಳು, ಜಮೀನ್ದಾರಿ ಪದ್ಧತಿಯ ರದ್ದತಿ – ಭೂದಾನ ಚಳವಳಿ ಮತ್ತು ಹಸಿರು ಕ್ರಾಂತಿ.
ಪೀಠಿಕೆ: ಸ್ವಾತಂತ್ರದ ಕಾಲಕ್ಕೆ ಭಾರತವು ಹದಗೆಟ್ಟ
ಆರ್ಥಿಕ ಪರಿಸ್ಥಿತಿಯನ್ನು ಹೊಂದಿತ್ತು. ಇದಕ್ಕೆ ಕಾರಣವೆಂದರೆ ಬ್ರಿಟಿಷರ ಆಡಳಿತವು ನಮ್ಮ ಆರ್ಥಿಕತೆಯನ್ನು
ಅಷ್ಟು ದುರ್ಬಲಗೊಳಿಸಿತ್ತು. ಇದರಿಂದ ಭಾರತವು ಜಾಗತಿಕ ಮಟ್ಟದ ಕೈಗಾರಿಕಾ ಪೈಪೋಟಿಯಲ್ಲಿ ಭಾಗವಹಿಸದಾಯಿತು.
ಕಡುಬಡತನ, ಅನಕ್ಷರತೆ, ಕೈಗಾರಿಕೆ ಹಾಗೂ ಕೃಷಿಯ ಹಿಂದುಳಿಯುವಿಕೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಗಳು
ಭಾರತವು ಆರ್ಥಿಕ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವಲ್ಲಿ ಅಡ್ಡಿಯಾಗಿದ್ದವು. ಇಂತಹ ಸನ್ನಿವೇಶದಲ್ಲಿ
ನೆಹರು ಮತ್ತು ಕೆಲವು ಆರ್ಥಿಕ ತಜ್ಞರಿಗೆ ಭಾರತದ ಆರ್ಥಿಕಾಭಿವೃದ್ಧಿಗಾಗಿ ಕ್ರಮ ಕೈಗೊಳ್ಳುವ ಅನಿವಾರ್ಯತೆ
ಉಂಟಾಗಿತ್ತು.
ಜಾಗತಿಕವಾಗಿ ಆರ್ಥಿಕ ಯೋಜನೆಗಳ ಆರಂಭ: ಒಂದನೆಯ ಮಹಾಯುದ್ಧದ ಅನಂತರ
೧೯೨೯ರ ಸುಮಾರಿಗೆ ಇಡೀ ಯುರೋಪ್ ಖಂಡವೇ ಬಹು ತೀವ್ರವಾದ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು.
ಇದರಿಂದ ಅನೇಕ ರಾಷ್ಟ್ರಗಳಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ ಸರ್ವಾಧಿಕಾರಿಗಳ ಆಡಳಿತ ಜಾರಿಗೆ ಬರಲು
ಕಾರಣವಾಯಿತು. ಇದೇ ಸಮಯದಲ್ಲಿ ಸೋವಿಯತ್ ರಷ್ಯ ಆರ್ಥಿಕ ಯೋಜನೆ ಯನ್ನು ಪ್ರಾರಂಭಿಸಿದುದರಿಂದ ಯುರೋಪಿನ
ಆರ್ಥಿಕ ಮುಗ್ಗಟ್ಟು ಆ ದೇಶದ ಮೇಲೆ ಏನೂ ಪರಿಣಾಮ ಉಂಟುಮಾಡಲಿಲ್ಲ. ಈ ಘಟನೆಯಿಂದ ಯುರೋಪಿನ ಅನೇಕ ಅರ್ಥಶಾಸ್ತ್ರಜ್ಞರು
ಪ್ರಭಾವಿತರಾದರು. ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್
ಡಿ ರೂಸ್ವೆಲ್ಟ್ ಆರ್ಥಿಕ ಮುಗ್ಗಟ್ಟಿನಿಂದ ಉಂಟಾದ ಪರಿಸ್ಥಿತಿಯನ್ನು ಪರಿಹರಿಸಲು “ನ್ಯೂ ಡೀಲ್”
ಎಂಬ ಯೋಜನೆಯನ್ನು ಪ್ರಾರಂಭಿಸಿದ. ಅನಂತರ ನಾಜಿ ಜರ್ಮನಿಯಲ್ಲಿ ಸರ್ವಾಧಿಕಾರಿಯಾದ ಹಿಟ್ಲರ್ ನಾಲ್ಕು
ವರ್ಷಗಳ ಯೋಜನೆಯನ್ನು ಆರಂಭಿಸಿದ. ಅಲ್ಲದೆ ಇಂಗ್ಲೆಂಡಿನಲ್ಲೂ ಬೆವರಿಡ್ಜ್ ಪ್ಲಾನ್ ಎಂಬ ಕಾರ್ಯಕ್ರಮವೂ
ಪ್ರಾರಂಭಿಸಲ್ಪಟ್ಟಿತು.
ಆರ್ಥಿಕ ಯೋಜನೆಯ ಅರ್ಥ: ಸಾಮಾನ್ಯವಾಗಿ ಒಂದು ಆರ್ಥಿಕ ಕಾರ್ಯಕ್ರಮವನ್ನು ನಿರ್ದಿಷ್ಟ ಅವಧಿಯಲ್ಲಿ ಪುರ್ತಿಗೊಳಿಸಲು ನಿಶ್ಚಯಿಸಿ ಅದಕ್ಕಾಗಿ ಕೈಗೊಳ್ಳುವ ಸಮಗ್ರ ವ್ಯವಸ್ಥೆ ಅಥವಾ ಕ್ರಮ ಎಂದು ಅರ್ಥ. ಯಾವುದೇ ಯೋಜನೆಯಲ್ಲಿ ಎರಡು ಮೂಲತತ್ತ್ವಗಳು ಅಡಕವಾಗಿರಬೇಕು. ಒಂದು ನಿರ್ದಿಷ್ಟ ಗುರಿ ಮತ್ತು ಅದನ್ನು ಸಾಧಿಸಲು ಅಷ್ಟೇ ನಿರ್ದಿಷ್ಟ ಸಾಧನ. ಇವು ಪ್ರತಿಯೊಂದು ಯೋಜನೆಯಲ್ಲಿರತಕ್ಕ ಮುಖ್ಯ ಗುಣಗಳು.
“ಆರ್ಥಿಕ ಯೋಜನೆ ಎಂದರೆ ಜನರ ಸಮಸ್ತ ಆರ್ಥಿಕ ಜೀವನಕ್ಕೆ, ಅಂದರೆ ಉತ್ಪಾದನೆ ವಿತರಣೆ ಹಾಗೂ ಬಂಡವಾಳ ವಿನಿಯೋಗ ಮುಂತಾದ ಎಲ್ಲ ಆರ್ಥಿಕ ಚಟುವಟಿಕೆಗಳಿಗೂ ಅನ್ವಯಿಸುವ ಒಂದು ವಿಶಾಲವಾದ ಕಾರ್ಯಕ್ರಮವಾಗಿದೆ.”
1. 1947-1965ರ
ನಡುವಿನ ಭಾರತದ ಆರ್ಥಿಕತೆ: ನೆಹರು ಪರಂಪರೆ
ಭಾರತವು ಆಂಗ್ಲರು ಸೃಷ್ಟಿಸಿದ ಆರ್ಥಿಕ ದುಸ್ಥಿತಿಯಿಂದ
ಹೊರಬಂದು ಪ್ರಗತಿಯತ್ತ ಸಾಗಬೇಕಾಗಿತ್ತು. ಆದರೆ ನಾವು ಸ್ವತಂತ್ರಗೊಳ್ಳುವ ವೇಳೆಗಾಗಲೇ ಭಾರತದ ಕೆಲವು
ಕೈಗಾರಿಕೋದ್ಯಮಿಗಳು ಇಲ್ಲಿನ ಆಂತರಿಕ ಆರ್ಥಿಕ ಚಟುವಟಿಕೆಗಳ ಮೇಲೆ ಶೇ. 75ರಷ್ಟು ಹಿಡಿತ ಸಾಧಿಸಿದ್ದಲ್ಲದೇ
ರಫ್ತು ವ್ಯಾಪಾರದಲ್ಲೂ ಸಾಕಷ್ಟು ಪ್ರಾಬಲ್ಯ ಸಾಧಿಸಿದ್ದರು. ಇದರಿಂದ ನಮ್ಮ ಆರ್ಥಿಕತೆಯ ಮೇಲಿನ ಯೂರೋಪಿಯನ್ನರ
ಹಿಡಿತವು ಸಡಿಲಗೊಳ್ಳತೊಡಗಿತ್ತು. ದೇಶೀಯ ಕೈಗಾರಿಕೋದ್ಯಮಿಗಳು ಬ್ಯಾಂಕಿಂಗ್ ಮತ್ತು ವಿಮೆಯಂತಹ ಆರ್ಥಿಕ
ಕ್ಷೇತ್ರಗಳಲ್ಲೂ ಸಹ ಸಾಕಷ್ಟು ಪ್ರಾಬಲ್ಯ ಸಾಧಿಸಿದ್ದರು. ಇದರಿಂದಾಗಿ ಭಾರತವು ಕ್ಷಿಪ್ರ ಕೈಗಾರಿಕರಣಕ್ಕೆ
ಕೆಲವು ಕ್ರಮ ಕೈಗೊಳ್ಳಲು ಸಾಧ್ಯವಾಯಿತು. ಬಿರ್ಲಾ, ಟಾಟಾ, ಸಿಂಘಾನಿಯಾ, ಗೊದ್ರೆಜ್, ಕಿರ್ಲೋಸ್ಕರ್ಇವರೇ ಮೊದಲಾದ ಉದ್ಯಮಿಗಳು ಸಾರಿಗೆ, ಕೈಗಾರಿಕೆ,
ವಾಣಿಜ್ಯ, ಬ್ಯಾಂಕಿಂಗ್, ವಿಮೆ ಮೊದಲಾದ ಕ್ಷೇತ್ರಗಳಲ್ಲಿ ತಮ್ಮ ಅಧಿಪತ್ಯ ಸಾಧಿಸಿದ್ದರು. ಮತ್ತೊಂದೆಡೆ,
ಸ್ವಾತಂತ್ರ್ಯಾನಂತರ ಆರ್ಥಿಕ ಅಭಿವೃದ್ಧಿಗಾಗಿ ಅನುಸರಿಸಬೇಕಾದ ವಿಧಾನದ ಕುರಿತು ಭಾರತದ ಸಮಾಜವು ಮುಕ್ತ
ಅಭಿಪ್ರಾಯವನ್ನು ಹೊಂದಿತ್ತು. ಏಕೆಂದರೆ, ಗಾಂಧಿವಾದಿಗಳು, ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಸ್ವಾವಲಂಬಿ
ಆಧಾರಿತ ಬಹುವಿಧದ ಆರ್ಥಿಕ ಅಭಿವೃದ್ಧಿ ಯೋಜನೆ, ಪ್ರಮುಖ ವಸ್ತುಗಳ ಆಮದು ಕಡಿಮೆ ಮಾಡುವಂತಹ ಕ್ಷಿಪ್ರ
ಕೈಗಾರಿಕೀಕರಣ, ಸಾಮ್ರಾಜ್ಯಶಾಹಿಯನ್ನು ಅಥವಾ ವಿದೇಶೀ ಬಂಡವಾಳ ಪ್ರಭಾವವನ್ನು ತಡೆಗಟ್ಟುವುದು ಮತ್ತು ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸುವ,
ಹಿಡುವಳಿಗಳ ಸುಧಾರಣೆ ಮತ್ತು ಸಹಕಾರಿ ಸಂಘಗಳ ಸ್ಥಾಪನೆಗಳನ್ನೊಳಗೊಂಡ ಭೂಸುಧಾರಣೆಗಳಂತಹ ಕ್ರಮಗಳಿಗೆ
ಬೆಂಬಲ ನೀಡಿದರು. ಅಲ್ಲದೇ ಬಹಳ ಮುಖ್ಯವಾಗಿ ಈ ರೀತಿಯ ಕ್ಷಿಪ್ರ ಆರ್ಥಿಕ ಅಭಿವೃದ್ದಿಯನ್ನು ಪ್ರಜಾಸತ್ತಾತ್ಮಕ
ಮಾರ್ಗದಲ್ಲಿ ಯೋಜನೆಗಳ ಮೂಲಕ ಮಾಡಬೇಕಾಗಿತ್ತು. ಈ ತೆರನಾದ ಆರ್ಥಿಕ ಅಭಿವೃದ್ಧಿಯ ಯೋಜನಾ ವಿಧಾನವು
ಭಾರತಕ್ಕೆ ಹೊಸದಾದುದು ಎಂಬ ಅಂಶವು ನೆಹರು ಮತ್ತು ಇನ್ನಿತರ ಕೈಗಾರಿಕೋದ್ಯಮಿಗಳ ಗಮನದಲ್ಲಿ ಇತ್ತು.
ಭಾರತದಲ್ಲಿ ಆರ್ಥಿಕ
ಯೋಜನೆಗಳ ಹಿನ್ನೆಲೆ:
1938ರಷ್ಟು ಹಿಂದೆಯೇ ಜವಾಹರಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ
ಕಾಂಗ್ರೆಸ್ ಪಕ್ಷವು “ರಾಷ್ಟ್ರೀಯ ಯೋಜನಾ ಆಯೋಗ” (National Planning Commission) ಎಂಬ ಸಂಸ್ಥೆಯನ್ನು
ಸ್ಥಾಪಿಸಿತ್ತು. ಆ ಆಯೋಗವು ದೇಶದ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಶಿಫಾರಸ್ಸುಗಳನ್ನು ಸು. 29 ಸಂಪುಟಗಳ
ರೂಪದಲ್ಲಿ ನೀಡಿತ್ತು. ರ.ಯೋ.ಆಯೋಗದವರು ನೀಡಿದ ವರದಿಯಲ್ಲಿ ಸಾರ್ವಜನಿಕ ವಲಯಗಳ ಅಭಿವೃದ್ಧಿಯ ಜೊತೆಗೆ
ಖಾಸಗೀ ಕೈಗಾರಿಕೆಗಳ ಭಾಗಶಃ ರಾಷ್ಟ್ರೀಕರಣದ ಶಿಫಾರಸ್ಸುಗಳು ಇದ್ದವು. ಆ ಶಿಫಾರಸ್ಸುಗಳನ್ನು ಅಂದಿನ
ಕೆಲವು ಭಾರತೀಯ ವ್ಯಾಪಾರೋದ್ಯಮಿಗಳೂ ಸಹ ಬೆಂಬಲಿಸಿದ್ದರು. ಸಾರ್ವಜನಿಕ ವಲಯದ ವ್ಯಾಪಾರ ಮತ್ತು ವಾಣಿಜ್ಯಗಳ ಅಭಿವೃದ್ಧಿಗೆ
ನೀಡಿದ ಬೆಂಬಲದ ಕಾರಣವನ್ನು 1945ರಲ್ಲಿ
ರೂಪಿಸಿದ “ಭಾರತದ ಆರ್ಥಿಕಾಭಿವೃದ್ಧಿಯ ಯೋಜನೆ”ಯಲ್ಲಿ ವಿವರಿಸಲಾಗಿತ್ತು. ಈ ಯೋಜನೆಯು “ಬಾಂಬೆ ಯೋಜನೆ”
ಎಂದೂ ಸಹ ಜನಪ್ರಿಯತೆ ಗಳಿಸಿತ್ತು. ಈ ಯೋಜನೆಯಲ್ಲಿ ಭಾರತವು ಕೈಗಾರಿಕಾ ಉತ್ಪನ್ನಗಳ ವಿಷಯದಲ್ಲಿ ಹೊರರಾಷ್ಟ್ರಗಳ
ಮೇಲೆ ಅವಲಂಬಿತವಾಗಿರುವುದಕ್ಕೆ ದೇಶದಲ್ಲಿ ಸ್ವದೇಶಿ ವಸ್ತುಗಳ ಉತ್ಪನ್ನದ ಕೊರತೆಯೇ ಕಾರಣ ಎಂಬುದನ್ನು
ವಿವರಿಸಲಾಗಿತ್ತು. ಮುಂದೆ 1947ರಲ್ಲಿ
ಕಾಂಗ್ರೆಸ್ಸಿನ ವತಿಯಿಂದ ಸ್ಥಾಪಿಸಿದ ಆರ್ಥಿಕ ಕಾರ್ಯಕ್ರಮಗಳ ಸಮಿತಿಗೆ ಜವಾಹರಲಾಲ್ ನೆಹರು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಅಲ್ಲದೇ 1948ರಲ್ಲಿ
ಪ್ರಕಟಿಸಿದ ಕೈಗಾರಿಕಾ ನೀತಿಯ ಮೇಲಿನ ನಿರ್ಣಯದಲ್ಲಿ ಯಾವ ಕ್ಷೇತ್ರಗಳನ್ನು ಸಾರ್ವಜನಿಕ ವಲಯಕ್ಕೆ ಸೇರಿಸಬೇಕು
ಮತ್ತು ಖಾಸಗಿ ವಲಯದಲ್ಲಿ ಉಳಿಸಬೇಕು ಎಂಬ ಅಂಶಗಳು ಚರ್ಚೆಗೆ ಒಳಗಾಗಿದ್ದವು. ಪರಿಣಾಮವಾಗಿ 1950ರ ಮಾರ್ಚ್ 15ರಂದು ಭಾರತದ ಯೋಜನಾ ಆಯೋಗವು
ಅಸ್ಥಿತ್ವಕ್ಕೆ ಬಂದಿತು. ಇದರ ಮೊದಲ ಅಧ್ಯಕ್ಷರಾಗಿ ನೆಹರು ಅವರೇ ಆಯ್ಕೆಯಾದರು. ಏಕೆಂದರೆ ಯೋಜನಾ ಆಯೋಗದ
ಪದನಿಮಿತ್ತ ಅಧ್ಯಕ್ಷರು ಯಾವಾಗಲೂ ಪ್ರಧಾನಮಂತ್ರಿಗಳೇ ಆಗಿರುತ್ತಾರೆ. ಆದರೆ ಈ ಯೋಜನಾ ಆಯೋಗವು ಸಾಂವಿಧಾನಿಕ
ಸಂಸ್ಥೆಯಲ್ಲ ಎಂಬುದು ಗಮನಾರ್ಹ.
ಆರ್ಥಿಕ ಯೋಜನೆ ಎಂದರೆ ಜನರ ಸಮಸ್ತ ಆರ್ಥಿಕ ಜೀವನಕ್ಕೆ, ಅಂದರೆ
ಉತ್ಪಾದನೆ ವಿತರಣೆ ಹಾಗೂ ಬಂಡವಾಳ ವಿನಿಯೋಗ ಮುಂತಾದ ಎಲ್ಲ ಆರ್ಥಿಕ ಚಟುವಟಿಕೆಗಳಿಗೂ ಅನ್ವಯಿಸುವ ಒಂದು
ವಿಶಾಲವಾದ ಕಾರ್ಯಕ್ರಮವಾಗಿದೆ.
ಭಾರತ
ಅಳವಡಿಸಿಕೊಂಡ ಆರ್ಥಿಕ ಮಾದರಿ:
ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳೆರಡೂ ಅಸ್ಥಿತ್ವದಲ್ಲಿರುವುದು
ಮತ್ತು ಅವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಬೇಕು ಹಾಗೂ ರಾಷ್ಟ್ರೀಯ ಯೋಜನೆಗಳ ಗುರಿ-ಉದ್ದೇಶಗಳಿಗೆ
ಪೂರಕವಾಗಿ ಖಾಸಗಿ ಕ್ಷೇತ್ರಗಳ ಬೆಳವಣಿಗೆಗೆ ಪ್ರೋತ್ಸಾಹ
ನೀಡುವುದು ಸರ್ಕಾರದ ನೀತಿಯಾಯಿತು. ಇದನ್ನು “ಮಿಶ್ರ ಆರ್ಥಿಕ ವ್ಯವಸ್ಥೆ”
(Mixed Economy) ಎಂದು ಕರೆಯುವರು.
1.2.
ನೆಹರು ಮತ್ತು ಮಹಲನೊಬಿಸ್ ಯೋಜನೆ
ಪ್ರಥಮ ಯೋಜನೆಯಲ್ಲಿ ದ್ವಿತೀಯ ಜಾಗತಿಕ ಯುದ್ಧದ ಪರಿಣಾಮವಾಗಿ
ದೇಶದ ತುರ್ತು ಅವಶ್ಯಕತೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಯಿತು. ಎರಡನೆ ಯೋಜನೆಯಲ್ಲಿ ಮಹಲನೊಬಿಸ್
ಅವರ ಯೋಜನೆಯಂತೆ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು ಮತ್ತು ಅದನ್ನು ಮೂರನೇ ಯೋಜನೆಯಲ್ಲಿಯೂ
ಮುಂದುವರಿಸಲಾಯಿತು. ಮಹಲನೊಬಿಸ್ ಯೋಜನೆಯ ಪ್ರಕಾರ ಸಾರ್ವಜನಿಕ ವಲಯದಲ್ಲಿ ಬೃಹತ್ ಮತ್ತು ಮೂಲಭೂತ
ಕೈಗಾರಿಕೆಗಳ ಶೀಘ್ರ ಅಬಿವೃದ್ಧಿಗೆ ಆದ್ಯತೆ ನೀಡಲಾಯಿತು. ಸಾರ್ವಜನಿಕ ವಲಯದಲ್ಲಿ ಮೂರು ಬೃಹತ್ ಉಕ್ಕು
ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಯಿತು. ಹೀಗೆ ಬೃಹತ್ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಸಣ್ಣ ಮತ್ತು
ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಉದ್ಯೋಗ ಸೃಷ್ಟಿಯನ್ನು ಮಾಡಲಾಯಿತು. 1951-1965ರ
ನಡುವಿನ ಕೈಗಾರಿಕೆಗಳ ಬೆಳವಣಿಗೆಯು ಶೇ. 7.1 ರಷ್ಟಿದ್ದು, ಇದು ಕೃಷಿ ಕ್ಷೇತ್ರದ ಬೆಳವಣಿಗೆಗಿಂತ ಅಧಿಕವಾಗಿತ್ತು.
ಸಮುದಾಯ ಅಬಿವೃದ್ಧಿ ಕಾರ್ಯಕ್ರಮಗಳು ಮತ್ತು ಕೃಷಿಯಲ್ಲಿನ ಸಹಕಾರ ಸಂಗಗಳ ಮೂಲಕ ನಿರುದ್ಯೋಗ ಸಮಸ್ಯೆಗೆ
ಪರಿಹಾರಗಳನ್ನು ಕಂಡುಕೊಳ್ಳಲಾಯಿತು. ಆದರೆ ಇಲ್ಲಿ ಸರ್ಕಾರ ಯಾವುದೇ ನೇರ ಹೂಡಿಕೆಯನ್ನು ಮಾಡಲಿಲ್ಲ.
ಆರಂಭಿಕ ಆರ್ಥಿಕ ಯೋಜನೆಕಾರರಿಗೆ ಭಾರತವು ವಿಜ್ಞಾನ ಮತ್ತು
ತಂತ್ರಜ್ಞಾನದಲ್ಲಿ ಹಿಂದುಳಿದಿರುವುದು ತಿಳಿದಿತ್ತು. ಅದಕ್ಕಾಗಿ ಅವರು ಉನ್ನತ ಶಿಕ್ಷಣ ಕೇಂದ್ರಗಳು
ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿನ ಪ್ರಯೋಗಾಲಯಗಳ ಅಭಿವೃದ್ಧಿಗೂ ಗಮನ ಹರಿಸಿದರು. ಭೌತಶಾಸ್ತ್ರ, ರಸಾಯನಶಾಸ್ತ್ರ,
ಇಂಧನ, ಗಾಜು, ಪಿಂಗಾಣಿ, ಆಹಾರ ತಂತ್ರಜ್ಞಾನ, ಔಷಧಿಗಳು, ರಸ್ತೆ, ಚರ್ಮ ಮತ್ತು ಕಟ್ಟಡ ನಿರ್ಮಾಣದಂತಹ
ಕ್ಷೇತ್ರಗಳಲ್ಲದೇ 1948 ರಲ್ಲಿಯೇ ಅಣುಶಕ್ತಿ ಆಯೋಗವನ್ನು ರಚಿಸಿದ್ದರು. 1956 ರಲ್ಲಿ ವಿಶ್ವ ವಿದ್ಯಾಲಯ
ಧನಸಹಾಯ ಆಯೋಗ ಆರಂಭಿಸುವುದರ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಯಿತು.
ಒಟ್ಟಿನಲ್ಲಿ ಸಮಾನತೆಯ ಆಧಾರದಲ್ಲಿ ಅಭಿವೃದ್ಧಿಯನ್ನು ಸಾದಿಸುವುದು ನೆಹರು-ಮಹಲನೊಬಿಸ್ ಯೋಜನೆಯ ಪ್ರಮುಖ
ಲಕ್ಷಣವಾಗಿತ್ತು.
1.3.
ಭಾರತದ ಪಂಚ ವಾರ್ಷಿಕ ಯೋಜನೆಗಳು ಮತ್ತು ಅವಧಿ
1ನೇ ಯೋಜನೆ (೧೯೫೧-೧೯೫೬)
2ನೇ ಯೋಜನೆ (೧೯೫೬-೧೯೬೧)
3ನೇ ಯೋಜನೆ (೧೯೬೧-೧೯೬೬)
4ನೇ ಯೋಜನೆ (೧೯೬೯-೧೯೭೪)
5ನೇ ಯೋಜನೆ (೧೯೭೪-೧೯೭೯)
ಪರಿವರ್ತನ ಯೋಜನೆ
6ನೇ ಯೋಜನೆ (೧೯೮೦-೧೯೮೫)
7ನೇ ಯೋಜನೆ (೧೯೮೫-೧೯೮೯)
8ನೇಯ ಯೋಜನೆ (೧೯೯೨-೧೯೯೭)
9ನೇಯ ಯೋಜನೆ (೧೯೯೭-೨೦೦೨)
10ನೇ ಯೋಜನೆ (೨೦೦೨-೨೦೦೭)
11ನೇ ಯೋಜನೆ (೨೦೦೭-೨೦೧೨)
12ನೆ ಯೋಜನೆ
1.4
ಜಮೀನುದಾರಿ ಪದ್ಧತಿಯ ರದ್ದತಿ
ಮಧ್ಯವರ್ತಿಗಳ ರದ್ದತಿ [Abolition of
Intermediaries]:
ಆಂಗ್ಲರು ಭಾರತದಲ್ಲಿ ಆಡಳಿತದ ಜವಬ್ದಾರಿಯನ್ನು ವಹಿಸಿಕೊಂಡಾಗ ಸರಕಾರ ಮತ್ತು
ಕೃಷಿಕರ ನಡುವೆ ಜಮೀನ್ದಾರರು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದರು. ಇವರು ಕೃಷಿಕರ ಸಂಕಷ್ಟಗಳಿಗೆ
ಕಾರಣರಾಗಿದ್ದರು. ಹಾಗಾಗಿ, ಮಧ್ಯವರ್ತಿಗಳ - ಚಟುವಟಿಕೆಗಳನ್ನು ನಿಲುಗಡೆಗೊಳಿಸಿ ಕೃಷಿಕರನ್ನು ಸ್ವತಂತ್ರರನ್ನಾಗಿ
ಮಾಡಲು ಸರಕಾರ ತೀರ್ಮಾನಿಸಿತು. ಫಲವಾಗಿ, 1948ರಲ್ಲಿ ಜವಾಹರಲಾಲ್ ನೆಹರು ನೇತೃತ್ವದಲ್ಲಿ "ಉನ್ನತಾಧಿಕಾರದ
ಸಮಿತಿ" (High-Power Committee) ಯನ್ನು ಹಾಗೂ ನಂತರದಲ್ಲಿ ಜೆ.ಸಿ. ಕುಮಾರಪ್ಪನವರ ಅಧ್ಯಕ್ಷತೆಯಲ್ಲಿ
ಭೂ ಸುಧಾರಣಾ ಸಮಿತಿ (Land Reform Committee) ಯನ್ನು ರಚಿಸಲಾಯಿತು. ಈ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಭೂ ಸುಧಾರಣಾ
ಕಾಯ್ದೆ (ಜಮೀನ್ದಾರಿ, ರದ್ದತಿಯ ಕಾಯ್ದೆ) ಯನ್ನು ಜಾರಿಗೊಳಿಸಲಾಯಿತು.
ಕಾಯ್ದೆಯ ಪ್ರಕಾರ,
1958ರ ವೇಳೆಗೆ ಸರಕಾರ ಜಮೀನ್ದಾರರ ಅಧೀನದಲ್ಲಿದ್ದ ಭೂಮಿಯನ್ನು (ಸು. 175 ಮಿಲಿಯನ್ ಎಕರೆ) ತನ್ನ
ವಶಕ್ಕೆ ತೆಗೆದುಕೊಂಡಿತು. ಈ ರೀತಿ ವಶಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಜಮೀನ್ದಾರರಿಗೆ ಸು. 670
ಕೋಟಿ ರೂ.ಗಳನ್ನು ಸಂದಾಯ ಮಾಡಿತು. ಅಲ್ಲದೆ, ವಶಪಡಿಸಿಕೊಂಡ ಭೂಮಿಯನ್ನು ಸಾಗುವಳಿದಾರರಿಗೆ (ಸು.
20 ದಶಲಕ್ಷ) ವಿತರಿಸಿ ಭೂ ಮಾಲೀಕತ್ವದ ಹಕ್ಕನ್ನು ಕೃಷಿಕರಿಗೆ ನೀಡಲಾಯಿತು.
ಈ ಕ್ರಮದಿಂದ ಕೃಷಿಕರನ್ನು
ಜಮೀನ್ದಾರರ ಶೋಷಣೆಯಿಂದ ರಕ್ಷಿಸಿದ್ದಲ್ಲದೆ, ಅವರನ್ನು ಭೂ ಮಾಲೀಕರನ್ನಾಗಿ ಪರಿವರ್ತಿಸಲಾಯಿತು. ಅಲ್ಲದೆ,
ಸರಕಾರದ ಆದಾಯವೂ ಅಧಿಕಗೊಂಡಿತು. ಉದಾ: 1951-52 ರಲ್ಲಿ ಸರಕಾರಕ್ಕೆ ಸಂದಾಯವಾಗುತ್ತಿದ್ದ ಕಂದಾಯದ
ಪ್ರಮಾಣ 48 ಕೋಟಿ ರೂ. ಗಳಾಗಿತ್ತು. ಆದರೆ, 1959-60 ರ ವೇಳೆಗೆ ಕಂದಾಯದ ಪ್ರಮಾಣ 182 ಕೋಟಿ ರೂ.ಗಳನ್ನು
ಮುಟ್ಟಿತು.
೨. ಭೂದಾನ ಚಳವಳಿ
ಮತ್ತು ವಿನೋಬಾ ಭಾವೆ
ಭೂದಾನ ಚಳವಳಿ
ಯು ಭಾರತದ ಭೂಹೀನರ ಸಮಸ್ಯೆಯನ್ನು
ಗಾಂಧಿ
ಮಾರ್ಗದಲ್ಲಿ
ಸತ್ಯ
ಮತ್ತು
ಅಹಿಂಸಾ
ತತ್ತ್ವಗಳ
ಮೂಲಕ
ಪರಿಹರಿಸುವ
ಒಂದು
ಪ್ರಯತ್ನವಾಗಿತ್ತು.
ಗಾಂಧೀಜಿಯವರ
ಹಿರಿಯ
ಅನುಯಾಯಿಗಳಾಗಿದ್ದ
ಆಚಾರ್ಯ
ವಿನೋಬಾ
ಭಾವೆಯವರು
ಹೈದರಾಬಾದಿನ
ಶಿವರಾಮಪಲ್ಲಿಯಲ್ಲಿ
1951 ಮಾರ್ಚ್ 8 ರಂದು ಈ
ಚಳವಳಿ
ಪ್ರಾರಂಭಿಸಿದರು.
ಗಾಂಧೀಜಿಯವರ
ರಚನಾತ್ಮಕ
ಕಾರ್ಯಕ್ರಮದಲ್ಲಿ
ನಿರತರಾಗಿದ್ದ
ಆಚಾರ್ಯ
ವಿನೋಬಾ
ಭಾವೆಯವರು
ಸ್ವಾತಂತ್ರ್ಯೋತ್ತರ
ಭಾರತದ
ಕ್ಲಿಷ್ಟ
ಆರ್ಥಿಕ
ಮತ್ತು
ಸಾಮಾಜಿಕ
ಸಮಸ್ಯೆಗಳಿಗೆ
ಅಹಿಂಸಾತ್ಮಕ
ಪರಿಹಾರದ
ಶೋಧನೆಯಲ್ಲಿದ್ದರು.
ಈ
ಶೋಧನೆಯ
ಮಧ್ಯದಲ್ಲಿ
ಭೂದಾನದ
ಆವಿರ್ಭಾವವಾಯಿತು.
ಇದನ್ನು
ಅವರು
ಭೂದಾನ ಯಜ್ಞವೆಂದು ಕರೆದರು.
ಹಿಂದಿನ ಹೈದರಾಬಾದು
ರಾಜ್ಯದ
ತೆಲಂಗಾಣ
ಭಾರತದ
ಅತಿ
ಹಿಂದುಳಿದ
ಪ್ರದೇಶಗಳಲ್ಲಿ
ಒಂದಾಗಿತ್ತು.
ಅಲ್ಲಿ
ಜಮೀನ್ದಾರಿ
ಪದ್ಧತಿ
ವ್ಯಾಪಕವಾಗಿದ್ದು,
ಹಲವು
ಮಂದಿ
ಜಮೀನ್ದಾರರು
ಅಲ್ಲಿಯ
ಇಡೀ
ಭೂಮಿಯಮೇಲೆ
ಸರ್ವಸ್ವಾಮ್ಯ
ಪಡೆದಿದ್ದರು.
ಲಕ್ಷಾಂತರ
ಭೂಹೀನ
ಕಾರ್ಮಿಕರೂ
ಗೇಣಿದಾರರೂ
ಬಡತನ,
ಶೋಷಣೆಗಳಿಂದ
ಕಷ್ಟ
ಪರಿಸ್ಥಿತಿಯಲ್ಲಿದ್ದರು.
ಈ
ಪರಿಸ್ಥಿತಿಯನ್ನು
ಉಪಯೋಗಿಸಿಕೊಂಡು
ಕೆಲವರು
ರೈತರನ್ನು
ಹಿಂಸಾಮಾರ್ಗಕ್ಕೆ
ಪ್ರಚೋದಿಸಿದರು.
ಅನೇಕ
ಕಡೆ
ಜಮೀನ್ದಾರರ
ಕೊಲೆ,
ಆಸ್ತಿಪಾಸ್ತಿಗಳ
ಲೂಟಿ
ಆದುವು.
ಪರಿಸ್ಥಿತಿಯನ್ನು
ಹತೋಟಿಗೆ
ತರಲು
ಸರ್ಕಾರ
ವಿಶೇಷ
ಪೊಲೀಸ್
ಮತ್ತು
ಮಿಲಿಟರಿ
ಕಾರ್ಯಾಚರಣೆಯನ್ನು
ಕೈಗೊಳ್ಳಬೇಕಾಯಿತು.
ಹೀಗಾಗಿ
ತೆಲಂಗಾಣ
ಪ್ರದೇಶ
ಹಿಂಸಾಕಾಂಡವಾಗಿ
ಜನ
ಬಹಳ
ಭಯಗ್ರಸ್ತರಾಗಿದ್ದರು.
ಈ
ಸನ್ನಿವೇಶದಲ್ಲಿ
ಅಹಿಂಸೆಯ
ಸಂದೇಶವನ್ನು
ಬೀರಲು
ಮತ್ತು
ಪರಿಸ್ಥಿತಿಯ
ಅಧ್ಯಯನ
ಮಾಡಲು
ಆಚಾರ್ಯವಿನೋಬಾ
ಭಾವೆಯವರು
ನಾಲ್ಕೈದು
ಮಂದಿ
ಶಿಷ್ಯರೊಡಗೂಡಿ
ಕಾಲ್ನಡಿಗೆಯಲ್ಲಿ
ತೆಲಂಗಾಣದ
ಪ್ರವಾಸ
ಕೈಗೊಂಡರು.
ಹೋದೆಡೆಯಲೆಲ್ಲ
ಹಿಂಸಾಮಾರ್ಗ
ಯಾವ
ಸಮಸ್ಯೆಯನ್ನೂ
ಬಗೆಹರಿಸುವುದಿಲ್ಲ
ಎಂದು
ಹೇಳಿ
ಅಹಿಂಸಾತತ್ತ್ವದ
ಅನುಸರಣೆಯ
ಅಗತ್ಯತೆಯನ್ನು
ಬೋಧಿಸಿದರು.
ಪೋಚಂಪಳ್ಳಿ
ಎಂಬ
ಊರಿಗೆ
ಹೋದಾಗ
ಅಲ್ಲಿಯ
ಭೂಹೀನ
ಹರಿಜನರ
ಬಡತನದ
ಭೀಕರತೆ
ಕಂಡು
ಆ
ಸಂಜೆ
ಗ್ರಾಮಸ್ಥರ
ಸಭೆಯಲ್ಲಿ
ಸಮಸ್ಯೆಯನ್ನು
ಪ್ರಸ್ತಾವಿಸಿ
ಎಂಬತ್ತು
ಎಕರೆ
ಜಮೀನನ್ನು
ಯಾಚಿಸಿದರು.
ಆಗ
ಸಭೆಯಲ್ಲಿದ್ದ
ಜಮೀನ್ದಾರ್
ಶ್ರೀರಾಮಚಂದ್ರರೆಡ್ಡಿ
ಒಂದು
ನೂರು
ಎಕರೆ
(40.47 ಹೆಕ್ಟೇರ್ಗಳು) ಭೂಮಿಯನ್ನು
ದಾನ
ಮಾಡಿದರು.
ಆ
ಭೂಮಿಯ
ಹಂಚಿಕೆಯೂ
ಆಯಿತು.
ಅದೊಂದು
ರೋಮಾಂಚಕಾರಿ
ಘಟನೆ.
ಅದೇ
ಭೂ
ಸಮಸ್ಯೆಯ
ನಿವಾರಣೆಗೆ
ಒಂದು
ನೂತನ
ವಿಧಾನವಾಗಿ
ಪರಿಣಮಿಸಿತು.
ವಿನೊಬಾ
ಭಾವೆಯವರು
ಮಾರನೆದಿನ
ಮತ್ತೊಂದು
ಹಳ್ಳಿಗೆ
ಹೋದರು.
ಹಿಂದಿನ
ದಿನದ
ತಮ್ಮ
ಅನುಭವವನ್ನು
ತಿಳಿಸಿದರು.
ಅಲ್ಲಿಯೂ
ಭೂದಾನ
ದೊರಕಿತು.
ಈ
ರೀತಿ
ಎರಡು
ತಿಂಗಳ
ಕಾಲ
ತೆಲಂಗಾಣದಲ್ಲಿ
ಅವರು
ಕಾಲ್ನಡಿಗೆಯಲ್ಲಿ
ಪ್ರವಾಸಮಾಡಿದರು.
ಭೂದಾನದ
ಸಂದೇಶವನ್ನು
ಬೀರಿದರು.
ಗಾಳಿ
ನೀರು,
ಆಕಾಶ
ಹೇಗೆ
ಭಗವಂತನ
ಸಾಮ್ಯಕ್ಕೆ
ಒಳಪಟ್ಟವೋ
ಭೂಮಿಯೂ
ಹಾಗೆಯೇ
ದೇವರ
ಸ್ವತ್ತು.
ಭಗವಂತನ
ಕೊಡುಗೆಯಾದ
ಭೂಮಿಯ
ಮೇಲೆ
ಸರ್ವರಿಗೂ
ಹಕ್ಕಿದೆ.
ಭೂಮಿಯುಳ್ಳವರು
ಭೂಹೀನರಿಗೆ
ಒಂದು
ಭಾಗವನ್ನು
ಹಂಚಿಕೊಡಬೇಕು.
ನಿಮ್ಮ
ಕುಟುಂಬದಲ್ಲಿ
ಐದು
ಮಕ್ಕಳಿದ್ದರೆ
ಭೂಹೀನ
ರೈತನನ್ನು
ಆರನೆಯ
ಮಗನೆಂದು
ತಿಳಿಯಿರಿ.
ನಿಮ್ಮ
ಭೂಮಿಯ
ಆಸ್ತಿಯಲ್ಲಿ
ಆರನೆಯ
ಭಾಗವನ್ನು
ಅವನಿಗೂ
ಕೊಡಿ
ಎಂಬ
ಸಂದೇಶವನ್ನು
ಪ್ರಸಾರಮಾಡುತ್ತ
ನಡೆದರು
ವಿನೋಬಾ.
ಹೋದೆಡೆಯೆಲ್ಲ
ದಾನಗಂಗೆ
ಹರಿಯಿತು.
ತೆಲಂಗಾಣದಲ್ಲಿ
ಪ್ರವಾಸಮಾಡಿದ
ಎರಡು
ತಿಂಗಳ
ಅವಧಿಯಲ್ಲಿ
ಒಟ್ಟು
ಹನ್ನೆರಡು
ಸಾವಿರ
ಎಕರೆಯಷ್ಟು
(4856.4 ಹೆಕ್ಟೇರ್) ಭೂಮಿಯನ್ನು
ದಾನವಾಗಿ
ಪಡೆದರು.
ಭೂಹೀನರ
ಮತ್ತು
ಜಮೀನ್ದಾರರ
ನಡುವೆ
ಸೌಹಾರ್ದ
ಮೂಡಿಸಿ
ತೆಲಂಗಾಣದಲ್ಲಿ
ಶಾಂತಿ
ಮತ್ತು
ನೆಮ್ಮದಿ
ಬಹುಮಟ್ಟಿಗೆ
ನೆಲೆಗೊಳ್ಳುವಂತೆ
ಮಾಡಿದರು.
ವಿನೋಬಾಭಾವೆಯವರ
ಈ
ಸಾಧನೆಯ
ಫಲಶ್ರುತಿ
ದೇಶಾದ್ಯಂತ
ಪ್ರಸಿದ್ಧವಾಯಿತು.
ದೇಶದ
ಆರ್ಥಿಕ
ಮತ್ತು
ಸಾಮಾಜಿಕ
ಸಮಸ್ಯೆಗಳ
ಪರಿಹಾರಕ್ಕೆ
ಅಹಿಂಸಾಮಾರ್ಗದ
ಶೋಧವಿದೆಂದು
ಅನೇಕರು
ಹೇಳಿದರೆ
ಕೆಲವರು
ಉಪಟಳದಿಂದ
ಬೇಸತ್ತಿದ್ದ
ಜನ
ಅನುಸರಿಸಿದ
ಪಲಾಯನ
ನೀತಿಯಿದು.
ಬೇರೆ
ರಾಜ್ಯಗಳಲ್ಲಿ
ಈ
ವಿಧಾನ
ಯಶಸ್ವಿಯಾಗದು
ಎಂದು
ಸಂದೇಹಪಟ್ಟರು.
ದೆಹಲಿಯಲ್ಲಿ
ಎರಡು
ತಿಂಗಳ
ಅವಧಿಯಲ್ಲಿ
ಭೂದಾನಕ್ಕೆ
ತೆಲಂಗಾಣದಲ್ಲಿ
ದೊರೆತದ್ದಕ್ಕಿಂತ
ಹೆಚ್ಚು
ಭೂಮಿ
ದೊರಕಿತು.
ಈ
ಸಾಧನೆ
ಬೇರೆ
ರಾಜ್ಯಗಳ
ಕಾರ್ಯಕರ್ತರನ್ನು
ಹುರಿದುಂಬಿಸಿತು.
ಸರ್ವಸೇವಾ
ಸಂಘದ
ನೇತೃತ್ವದಲ್ಲಿ
ಸರ್ವೋದಯ
ಕಾರ್ಯಕರ್ತರು
ಭೂದಾನ
ಪಡೆಯಲು
ಕಾಲ್ನಡಿಗೆಯ
ಪ್ರವಾಸವನ್ನು
ಎಲ್ಲ
ರಾಜ್ಯಗಳಲ್ಲೂ
ಕೈಗೊಂಡರು.
ಕೆಲವು
ತಿಂಗಳುಗಳಲ್ಲೇ
ಭೂದಾನ
ಸಾರ್ವತ್ರಿಕ
ಚಳವಳಿಯೇ
ಆಯಿತು.
ವಿನೋಬಾ
ಭಾವೆಯವರು
ಉತ್ತರ
ಪ್ರದೇಶ
ರಾಜ್ಯದಲ್ಲಿ
ಪ್ರವಾಸಮಾಡಿ
ಐದು
ಲಕ್ಷ
ಎಕರೆಗಳಷ್ಟು
ಭೂಮಿ
ಸಂಗ್ರಹಿಸಿದರು.
ಬಿಹಾರದಲ್ಲಿ
ಭೂಸಮಸ್ಯೆಯ
ನಿವಾರಣೆಗಾಗಿ
ಭೂದಾನ
ಯಜ್ಞಕಾರ್ಯವನ್ನು
ಇತರ
ಕಾರ್ಯಕರ್ತರೊಂದಿಗೆ
ವ್ಯಾಪಕವಾಗಿ
ಹಾಗು
ಸತತವಾಗಿ
ಇಪ್ಪತ್ತೆಂಟು
ತಿಂಗಳ
ಕಾಲ
ಕೈಗೊಂಡರು.
ಈ
ಅವಧಿಯಲ್ಲಿ
ಒಟ್ಟು
ಇಪ್ಪತ್ತುಮೂರು
ಲಕ್ಷ
ಎಕರೆಗಳನ್ನು
ಸಂಗ್ರಹಿಸಿದ್ದು
ಒಂದು
ಅದ್ಭುತ
ದಾಖಲೆಯೇ
ಆಯಿತು.
ಅಲ್ಲದೆ
ವಿನೋಬಾರವರು
ಪಶ್ಚಿಮ
ಬಂಗಾಳ,
ಒರಿಸ್ಸಾ,
ಆಂಧ್ರ,
ತಮಿಳುನಾಡು,
ಕೇರಳ,
ಕರ್ನಾಟಕ,
ಮಹಾರಾಷ್ಟ್ರ,
ಗುಜರಾತು,
ರಾಜಸ್ಥಾನ,
ಪಂಜಾಬು,
ಕಾಶ್ಮೀರ
ಮತ್ತು
ಅಸ್ಸಾಂಗಳಲ್ಲಿ
ಪಾದಯಾತ್ರೆ
ನಡೆಸಿ
ಭೂದಾನ
ಹಾಗೂ
ಸರ್ವೋದಯ
ಸಂದೇಶವನ್ನು
ಹಳ್ಳಿಹಳ್ಳಿಗೂ
ಸಾರಿದರು.
ಭೂದಾನ ಚಳವಳಿ
ಆರಂಭವಾದ
ಮೇಲೆ
ಮೊದಲ
ಹತ್ತು
ವರ್ಷಗಳಲ್ಲಿ
ಸುಮಾರು
ಐವತ್ತು
ಲಕ್ಷ
ಎಕರೆಗಳಷ್ಟು
ಜಮೀನು
ಸಂಗ್ರಹವಾಯಿತು.
ಅನಂತರ
ಭೂದಾನ
ದೊರಕಿದ
ಗ್ರಾಮದಲ್ಲಿ
ಗ್ರಾಮಸ್ಥರ
ಸಭೆಯನ್ನು
ಕರೆದು
ಆ
ಗ್ರಾಮದ
ಭೂಹೀನ
ಬಡ
ಕೃಷಿ
ಕಾರ್ಮಿಕರ
ಮಾಹಿತಿ
ಸಂಗ್ರಹಿಸಿ
ಗ್ರಾಮಸ್ತರ
ಅಭಿಪ್ರಾಯದಂತೆ
ಅರ್ಹರಾದ
ಭೂಹೀನ
ಕಾರ್ಮಿಕರಿಗೆ
ಭೂಮಿ
ಹಂಚುವ
ಕೆಲಸ
ವ್ಯವಸ್ಥಿತವಾಗಿ
ನಡೆಯಿತು.
ಈ
ಕಾರ್ಯಕ್ಕೆ
ಸರ್ಕಾರದ
ಸಹಕಾರ
ಹಾಗೂ
ಕಾನೂನು
ಅಂಗೀಕಾರ
ದೊರೆಯಿತು.
ಹಲವಾರು
ರಾಜ್ಯಸರ್ಕಾರಗಳು
ಭೂದಾನ
ಕಾನೂನುಗಳನ್ನು
ಮಾಡಿವೆ.
ಭೂದಾನ
ಆರಂಭವಾದ
ಒಂದು
ದಶಕದಲ್ಲಿ
ಸುಮಾರು
ಮೂರುಲಕ್ಷ
ಭೂಹೀನ
ಕೃಷಿ
ಕಾರ್ಮಿಕ
ಕುಟುಂಬಗಳಿಗೆ
ಜಮೀನನ್ನು
ಹಂಚಲಾಯಿತು.
ಭೂದಾನ ಚಳವಳಿ
ಗುರಿಯಂತೆ
ಭೂಹೀನ
ಕೃಷಿ
ಕಾರ್ಮಿಕರಿಗೆಲ್ಲ
ಭೂಮಿಯನ್ನು
ಒದಗಿಸುವ
ಕಾರ್ಯದಲ್ಲಿ
ಪೂರ್ಣಯಶಸ್ಸನ್ನು
ಪಡೆಯದಿರಬಹುದಾದರೂ
ಈ
ಚಳವಳಿ
ದೇಶದಲ್ಲಿ
ಭೂಸುಧಾರಣೆಗೆ
ತಕ್ಕ
ವಾತಾವರಣ
ಉಂಟುಮಾಡಿದೆ.
ಮೇಲಾಗಿ
ಭೂದಾನದ
ತಾತ್ತ್ವಿಕ
ಧ್ಯೇಯಗಳ
ಪ್ರಚಾರದಿಂದಾಗಿ
ಭೂಮಾಲೀಕತ್ವದ
ಕಲ್ಪನೆಬಗ್ಗೆ
ಮೌಲಿಕ
ಬದಲಾವಣೆಯಾಗಲು
ಬಹುಮಟ್ಟಿಗೆ
ಕಾರಣವಾಯಿತು.
ಭೂದಾನ
ಕೇವಲ
ಭೂಪ್ರಾಪ್ತಿಯ
ಹಾಗೂ
ಹಂಚಿಕೆಯ
ಕಾರ್ಯಕ್ರಮವಷ್ಟೇ
ಅಲ್ಲ;
ಶ್ರೇಷ್ಠ
ಸಾಮಾಜಿಕ
ಹಾಗೂ
ಆರ್ಥಿಕ
ಮೌಲ್ಯಗಳ
ಪ್ರಸಾರ
ಹಾಗೂ
ಅನ್ವಯದ
ಮೂಲಕ
ಸಮಾಜದ
ಸರ್ವಾಂಗೀಣ
ಪ್ರಗತಿಯ
ಸಾಧನೆಯೇ
ಅದರ
ಅಂತಿಮಗುರಿ.
ಭೂದಾನದ
ವಿಸ್ತೃತ
ಪ್ರಕಾರಗಳಾಗಿ
ಶ್ರಮದಾನ,
ಸಂಪತ್ತಿನ ದಾನ, ಬುದ್ಧಿದಾನ
ಮತ್ತು
ಗ್ರಾಮದಾನ-ಇವು
ಬೆಳೆದುಬಂದಿವೆ.
ಇವುಗಳೆಲ್ಲದರ
ಮೂಲ
ಉದ್ದೇಶ
ವ್ಯಕ್ತಿಯಲ್ಲಿ
ಧರ್ಮದರ್ಶಿತ್ವ
ಭಾವನೆಯ
ಪ್ರತಿಷ್ಠಾಪನೆ.
ವ್ಯಕ್ತ್ತಿ
ತನ್ನಲ್ಲಿರುವ
ಭೂಮಿ,
ಸಂಪತ್ತು,
ವಿದ್ಯೆ,
ಶಕ್ತಿ
ಮುಂತಾದವೆಲ್ಲಕ್ಕೂ
ತಾನು
ಧರ್ಮದರ್ಶಿಯೆಂದು
ಭಾವಿಸಿ
ಅವನ್ನು
ಸಮಾಜದ
ಹಿತಕ್ಕಾಗಿ
ಬಳಸಬೇಕು.
ಇದರಿಂದಲೇ
ವ್ಯಕ್ತಿಯ
ವಿಕಾಸ
ಮತ್ತು
ಸಮಾಜದ
ಉನ್ನತಿ.
ವಿನೋಬಾರ
ಈ
ಚಳವಳಿಯನ್ನು
1952ರಲ್ಲಿ ಜಯಪ್ರಕಾಶ ನಾರಾಯಣರು
ಸೇರಿ
ಮುಂದೆ
ಸರ್ವೋದಯ
ಸಾಧನೆಗಾಗಿ
ದುಡಿದರು.
(ಬಿ.ಆರ್.ಪಿ.)
೨.೧. ವಿನೋಬಾ ಭಾವೆ
ಅವರ ವ್ಯಕ್ತಿ ಪರಿಚಯ:-
1895-1982. ಭೂದಾನ
ಚಳವಳಿಯ
ಆದ್ಯ
ಪ್ರವರ್ತಕ.
ನಿಷ್ಠಗಾಂಧೀವಾದಿ.
ಗಾಂಧಿಯೋತ್ತರ
ಭಾರತದಲ್ಲಿ
ಸರ್ವೋದಯ
ಚಳವಳಿಗೆ
ಹೊಸ
ಆಯಾಮವನ್ನಿತ್ತವರು.
ಗಾಂಧೀಜಿಯವರ
ಅಸಂಖ್ಯಾತ
ಅನುಯಾಯಿಗಳಲ್ಲಿ
ಸಂತ
ಎನಿಸಿಕೊಂಡವರು
ಇವರೊಬ್ಬರೇ.
ಇವರ
ಪೂರ್ಣ
ಹೆಸರು
ವಿನಾಯಕ
ನರಹರಿ
ಭಾವೆ.
ಮಹಾರಾಷ್ಟ್ರದ
ಕೊಲಾಬ
ಜಿಲ್ಲೆಯ
ಗಗೋಡೆ
ಗ್ರಾಮದಲ್ಲಿ
1895 ಸೆಪ್ಟೆಂಬರ್ 11ರಂದು ಜನಿಸಿದರು.
ತಂದೆ
ನರಹರಿ
ಶಂಭುರಾವ್
ಭಾವೆ;
ತಾಯಿ
ರುಕ್ಮಿಣೀದೇವಿ.
ತಂದೆ
ಆಗಿನ
ಬರೋಡ
ರಾಜ್ಯದಲ್ಲಿ
ಜವಳಿ
ಉದ್ಯಮ
ಸಂಸ್ಥೆಯಲ್ಲಿ
ತಂತ್ರಜ್ಞರಾಗಿದ್ದರು.
ತಾಯಿ,
ದೈವದಲ್ಲಿ
ಅಪಾರ
ಶ್ರದ್ಧೆಯಿರಿಸಿಕೊಂಡಿದ್ದ
ಸಾತ್ವಿಕ
ಮಹಿಳೆ.
ಇವರು ಗಾಂಧೀಜಿಯವರನ್ನು
ಮೊದಲು
1916 ಜೂನ್ 7ರಂದು ಅಹಮದಾಬಾದಿಗೆ
ಹತ್ತಿರವಿದ್ದ
ಕೊಚರಬ್
ಸತ್ಯಾಗ್ರಹ
ಆಶ್ರಮದಲ್ಲಿ
ಭೇಟಿಯಾದರು.
ಅನಂತರ
ಗಾಂಧೀಜಿಯವರ
ಅಪ್ಪಣೆ
ಪಡೆದು
ಸತ್ಯಾಗ್ರಹ
ಆಶ್ರಮವಾಸಿಯಾದರು.
ರಾಷ್ಟ್ರಕ್ಕಾಗಿ
ತಮ್ಮನ್ನು
ಅರ್ಪಿಸಿಕೊಂಡರು.
ಇವರು
ಚಿಕ್ಕವಯಸ್ಸಿನಲ್ಲಿಯೇ
ಆಧ್ಯಾತ್ಮಿಕ
ಶಕ್ತಿಗಳಿಸಿದ್ದರು.
ಸಬರಮತಿ
ಆಶ್ರಮದಲ್ಲಿನ
ಇವರ
ಬದುಕು
ಮಹಾನ್
ಕರ್ಮಯೋಗಿಯ
ಬದುಕೇ
ಆಗಿತ್ತು.
ಇವರ
ಓದು,
ಬರೆಹ,
ದೈಹಿಕ
ಪರಿಶ್ರಮಗಳ
ಕೆಲಸಗಳನ್ನು
ನೋಡಿ
ಆಶ್ರಮವಾಸಿಗಳು
ಬೆಕ್ಕಸಬೆರಗಾಗಿದ್ದರು.
ಇವರ
ಕಾಯಕನಿಷ್ಠೆ,
ಆಚಾರ
ವಿಚಾರಗಳು
ಗಾಂಧೀಜಿಯವರಿಗೆ
ಬಹಳ
ಪ್ರಿಯವಾಗಿದ್ದವು.
ದುರ್ಬಲ
ಶರೀರದವರಾದರೂ
ದಿನಕ್ಕೆ
ಎಂಟುಗಂಟೆ
ಚರಕದಲ್ಲಿ
ನೂಲುತ್ತಿ
ದ್ದರು.
ಚರಕಗಳು
ಆಗ
ಹೆಚ್ಚು
ಸುಧಾರಣೆಗೊಂಡಿರಲಿಲ್ಲ.
ನೂಲುವುದು
ತ್ರಾಸದಾಯಕವಾಗಿತ್ತು.
ಶ್ರಮವಹಿಸಿ
ಕೆಲಸ
ಮಾಡುವ
ಸಂಕಲ್ಪಶಕ್ತಿ-ಇಚ್ಛಾಶಕ್ತಿಗಳು
ಇವರಿಗಿದ್ದುವು.
ಇವರು
ಅಧ್ಯಯನಶೀಲರೂ
ಆಗಿದ್ದರು.
ಅರ್ಥಶಾಸ್ತ್ರ,
ಗಣಿತ,
ಖಗೋಳವಿಜ್ಞಾನ,
ಭೂಗೋಳಶಾಸ್ತ್ರ,
ಭಾಷಾವಿಜ್ಞಾನದಂತಹ
ವಿಷಯಗಳಲ್ಲಿ
ಆಳವಾದ
ಜ್ಞಾನ
ಹೊಂದಿದ್ದರು.
ಶಬ್ದಕೋಶದ
ಆಸಕ್ತಿಯಿಂದಾಗಿ
ಕೋಶಾನಂದರೇ
ಆಗಿದ್ದರು.
ಇವರು
ಗಾಂಧೀ
ವಿಚಾರ
ಗಳನ್ನು
ಪ್ರಚಾರಮಾಡಿದರು.
ಕೇರಳದ
ವೈಕೋಮ್
ದೇವಾಲಯಕ್ಕೆ
ಹರಿಜನರ
ಪ್ರವೇಶದ
ಜವಾಬ್ದಾರಿಯನ್ನು
ಗಾಂಧೀಜಿ
ಇವರಿಗೆ
ವಹಿಸಿ
ದ್ದರು(1924).
ವಾರ್ಧಾದಲ್ಲಿ
ಜರುಗಿದ
ನಾಗರಿಕ
ಅಸಹ
ಕಾರ
ಚಳವಳಿಯಲ್ಲಿ
ಭಾಗವ
ಹಿಸಿದರು(1930).
ಗಾಂಧೀಜಿ
ವೈಯಕ್ತಿಕ
ಸತ್ಯಾಗ್ರಹ
ಸಂದರ್ಭದಲ್ಲಿ
ಇವರನ್ನು
ಪ್ರಥಮ
ಸತ್ಯಾಗ್ರಹಿಯನ್ನಾಗಿ
ಮಾಡಿ
ನೆಹರೂ
ಅವರನ್ನು
ಎರಡನೆಯ
ಸತ್ಯಾಗ್ರಹಿಯನ್ನಾಗಿ
ಮಾಡಿದ್ದು
ಆಗ
ಗಮನಾರ್ಹ
ಸುದ್ದಿಯಾಯಿತು.
ಗಾಂಧೀಜಿಯವರ
ಹತ್ಯೆಯ
ಅನಂತರ
ರಚನಾತ್ಮಕ
ಕಾರ್ಯಕರ್ತರ
ದೃಷ್ಟಿ
ಇವರೆಡೆಗೆ
ಹೊರಳಿತು
(1948). ದೇಶದ ವಿವಿಧ ಕಡೆಗಳಿಂದ
ಬಂದ
ಕಾರ್ಯಕರ್ತರು
ಸೇವಾಗ್ರಾಮದಲ್ಲಿ
ಸಭೆ
ಸೇರಿ,
ಸರ್ವೋದಯ
ಸಮಾಜ,
ಸರ್ವಸೇವಾ
ಸಂಘಗಳ
ಸ್ಥಾಪನೆ,
ವರ್ಷಕ್ಕೊಮ್ಮೆ
ಸರ್ವೋದಯ
ಸಮ್ಮೇಳನ
ನಡೆಸುವ
ತೀರ್ಮಾನ
ಕೈಗೊಂಡರು(1948).
ಕೋಮು
ಸೌಹಾರ್ದ
ಮೂಡಿಸುವಲ್ಲಿ
ಇವರು
ಬಹುವಾಗಿ
ಶ್ರಮಿಸಿದರು.
ರಾಷ್ಟ್ರ
ವಿಭಜನೆಯ
ಪರಿಣಾಮವಾಗಿ,
ಪಾಕಿಸ್ತಾನದಿಂದ
ನಿರಾಶ್ರಿತರ
ಪುನರ್ವಸತಿಯಂತಹ
ಗುರುತರ
ಕಾರ್ಯದಲ್ಲಿ
ಪ್ರಧಾನಮಂತ್ರಿ
ನೆಹರೂ
ಅವರಿಗೆ
ಬಹುವಾಗಿ
ನೆರವಾದರು.
ವಿವಿಧೆಡೆ
ಶಾಂತಿಯಾತ್ರೆ
ಕೈಗೊಂಡರು.
ವೈಯಕ್ತಿಕ
ಸತ್ಯಾಗ್ರಹ,
ಕ್ವಿಟ್
ಇಂಡಿಯ
ಚಳವಳಿಯಲ್ಲಿ
ಸಕ್ರಿಯವಾಗಿ
ಭಾಗವಹಿಸಿದ್ದ
ಇವರು
ಅನೇಕ
ವರ್ಷಗಳ
ಜೈಲುವಾಸ
ಅನುಭವಿಸಿದರು.
ಜೈಲಿನಿಂದ
ಬಿಡುಗಡೆಯಾದ
ಅನಂತರ
ಪವನಾರ್
ಆಶ್ರಮದ
ಸುತ್ತುಮುತ್ತಲ
ಗ್ರಾಮಗಳಲ್ಲಿ
ರಚನಾತ್ಮಕ
ಕಾರ್ಯಕ್ರಮಗಳನ್ನು
ಕೈಗೊಂಡರು.
ಇವರನ್ನು
ಭೂದಾನ
ಚಳವಳಿಯ
ಮೂಲಕ
ಗುರುತಿಸಲಾಗುತ್ತದೆ.
ರಾಷ್ಟ್ರದ
ಭೂ
ಸಮಸ್ಯೆಯನ್ನು
ಶಾಂತಯುತವಾಗಿ
ಅಹಿಂಸಾಮಾರ್ಗದಿಂದ
ಬಗೆಹರಿಸಲು
ಈ
ಚಳವಳಿ
ಒಂದು
ವಿನೂತನ
ಮತ್ತು
ಮಹತ್ತ್ವದ
ಕಾರ್ಯಕ್ರಮವಾಯಿತು.
ಇದು
ಭಾರತ
ಇತಿಹಾಸದಲ್ಲಿ
ಚಿರಸ್ಥಾಯಿಯಾಗಿ
ಉಳಿದಿದೆ.
ಇವರು
ಗ್ರಾಮೀಣ
ಪ್ರದೇಶಗಳಲ್ಲಿ
ರಚನಾತ್ಮಕ
ಕಾರ್ಯಗಳಲ್ಲಿ
ತೊಡಗಿದ್ದಾಗ
ಹೈದರಾಬಾದ್
ಬಳಿಯ
ಶಿವರಾಮಪಲ್ಲಿಯಲ್ಲಿ
ನಡೆಯುತ್ತಿದ್ದ
ಎರಡನೆಯ
ಅಖಿಲಭಾರತ
ಸರ್ವೋದಯ
ಸಮ್ಮೇಳನದಲ್ಲಿ
482 ಕಿಮೀ ದೂರ ಪಾದಯಾತ್ರೆ
ನಡೆಸಿ
ಭಾಗವಹಿಸಿದ್ದರು.
ಅನಂತರ
ತೆಲಂಗಾಣದ
ಹಿಂಸಾಗ್ರಸ್ತ
ಪ್ರದೇಶಗಳಿಗೆ
ಪಾದಯಾತ್ರೆ
ನಡೆಸಿದರು.
1951 ಏಪ್ರಿಲ್ 15ರಂದು ಪೋಚಮ್ಪಲ್ಲಿ
ತಲಪಿ
ಅಲ್ಲಿ
40 ಬಡ ಹರಿಜನ ಕುಟುಂಬದವರಿಗೆ
100 ಎಕರೆ ಭೂಮಿಯನ್ನು ದಾನ
ಕೊಡಿಸಿದರು.
ಇದು
ಭೂದಾನ
ಚಳವಳಿಗೆ
ನಾಂದಿಯಾಯಿತು.
ವಿಭಜಿತ
ಪೂರ್ವಭಾರತದ
ಪೂರ್ವ
ಪಾಕಿಸ್ತಾನವೂ
ಸೇರಿದಂತೆ
ಭಾರತದ
ಅನೇಕ
ಭಾಗಗಳನ್ನು
(13 ವರ್ಷ ಒಂದು ತಿಂಗಳು
ಮೂರು
ದಿನ)
ಕಾಲ್ನಡಿಗೆಯಲ್ಲೇ
ಸಂಚರಿಸಿ
ಒಟ್ಟು
40 ಲಕ್ಷ ಎಕರೆ ಭೂಮಿಯನ್ನು
ದಾನವಾಗಿ
ಸಂಗ್ರಹಿಸಿದರು.
ಇದನ್ನು
ಗ್ರಾಮೀಣ
ಭೂರಹಿತರಿಗೆ
ಉತ್ಪಾದನೆಯ
ಸಾಧನವನ್ನಾಗಿ
ವಿತರಿಸಿದರು.
ಇವರನ್ನು
ಪ್ರಥಮ
ಪಂಚವಾರ್ಷಿಕ
ಯೋಜನೆ
ಬಗ್ಗೆ
ಚರ್ಚಿಸಲು
ಪ್ರಧಾನಿ
ನೆಹರೂ
ದೆಹಲಿಗೆ
ಆಹ್ವಾನಿಸಿದಾಗ
ವಿಮಾನ
ಬಳಸದೆ
ಕಾಲ್ನಡಿಗೆಯಲ್ಲಿ
ಪ್ರಯಾಣ
ಮಾಡಿದರು.
ಪವನಾರ್ನಿಂದ
ದೆಹಲಿಗೆ
645 ಕಿಮೀ. ಈ ಪಾದಯಾತ್ರೆಯ
ಸಂದರ್ಭದಲ್ಲಿ
ಮಹಾರಾಷ್ಟ್ರ,
ಮಧ್ಯಪ್ರದೇಶ
ಹಾಗೂ
ಉತ್ತರಪ್ರದೇಶ
ರಾಜ್ಯಗಳಲ್ಲಿ
7,000 ಎಕರೆ ಭೂಮಿ ದಾನ
ರೂಪವಾಗಿ
ದೊರೆಯಿತು.
ಇವರು
ದೆಹಲಿಯ
ರಾಜಘಾಟ್ನ
ಒಂದು
ಸಣ್ಣ
ಗುಡಿಸಿಲಿನಲ್ಲಿ
ತಂಗಿದ್ದಾಗ
ರಾಷ್ಟ್ರಪತಿ
ರಾಜೇಂದ್ರಪ್ರಸಾದ್,
ಪ್ರಧಾನಿ
ನೆಹರೂ,
ಕೇಂದ್ರ
ಮಂತ್ರಿಗಳು,
ಯೋಜನಾ
ಆಯೋಗದವರು
ಭೇಟಿಮಾಡಿ
ಸಲಹೆ
ಪಡೆದರು.
“ಹೊಟ್ಟೆ
ಹೊರೆಯಲು
ಅಪೇಕ್ಷೆ
ಪಡುವ
ಎಲ್ಲರನ್ನೂ
ಒಂದಲ್ಲಾ
ಒಂದು
ಕೆಲಸದಲ್ಲಿ
ತೊಡಗಿಸಬೇಕು.
ಆಹಾರದ
ಉತ್ಪಾದನೆಯಲ್ಲಿ
ಸ್ವಾವಲಂಬನೆ
ಸಾಧಿಸಿದರೆ
ನೇರವಾಗಿ
ರಾಷ್ಟ್ರೀಯ
ರಕ್ಷಣೆಯನ್ನು
ಭದ್ರಗೊಳಿಸಿದಂತೆ”ಎಂಬುದು ಇವರ
ವಿಚಾರವಾಗಿತ್ತು.
ಇವರು
ರಾಷ್ಟ್ರಕ್ಕೆ
ಸಲ್ಲಿಸಿದ
ಸೇವೆಗಾಗಿ
ಮ್ಯಾಗ್ಸೇಸೆ
ಪ್ರಶಸ್ತಿ
ದೊರೆಯಿತು(1950).
ಇವರಿಗೆ
1983ರಲ್ಲಿ ಭಾರತದ ಅತ್ಯುನ್ನತ
“ಭಾರತರತ್ನ” ಪ್ರಶಸ್ತಿಯನ್ನು ಮರಣೋತ್ತರವಾಗಿ
ನೀಡಲಾಯಿತು.
ಬಿಹಾರ
ರಾಜ್ಯದಲ್ಲಿ
ವೈದ್ಯನಾಥ
ದೇವಾಲಯಕ್ಕೆ
ಹರಿಜನರೊಂದಿಗೆ
ಪ್ರವೇಶಿಸುವ
ಕಾರ್ಯ,
ಚಂಬಲ್
ಡಕಾಯಿತರು
ನೆಲಸಿದ್ದ
ಪ್ರದೇಶಗಳಲ್ಲಿ
ಸಂಚಾರ
ಮಾಡಿದ್ದು
ಮುಂತಾದವು
ಇವರ
ಮಹತ್ತ್ವದ
ಕಾರ್ಯಗಳಾಗಿವೆ.
ಭೂದಾನ,
ಗ್ರಾಮದಾನ
ಚಳವಳಿಯಿಂದ
ಇವರನ್ನು
ಅಂತಾರಾಷ್ಟ್ರೀಯ
ಮಟ್ಟದಲ್ಲಿಯೂ
ಗುರುತಿಸಲಾಗಿದೆ.
ಇವರ
ದೃಷ್ಟಿಯಲ್ಲಿ
ಭೂದಾನ,
ಗ್ರಾಮದಾನ
ಸಾಧನಗಳು
ಮಾತ್ರ.
ಅಂತಿಮ
ಗುರಿ
ಶೋಷಣೆರಹಿತ
ಸ್ವಾವಲಂಬಿ
ಗ್ರಾಮ
ಸ್ವರಾಜ್ಯದ
ನಿರ್ಮಾಣ.
ಭಾರತ
ಸರ್ವೋದಯ
ಗ್ರಾಮ
ಗಣರಾಜ್ಯಗಳ
ಒಕ್ಕೂಟವಾಗಬೇಕು
ಎಂದು
ಬಯಸಿದರು.
ಜೈಜಗತ್
ಎಂಬ
ಘೋಷಣೆ
ನೀಡಿ
ಸ್ವಾತಂತ್ರ್ಯ,
ಸಮಾನತೆ,
ಭ್ರಾತೃತ್ವ
ಭಾವನೆ,
ಆರ್ಥಿಕ
ಮತ್ತು
ರಾಜಕೀಯ
ವಿಕೇಂದ್ರೀಕರಣದ
ಆಧಾರ
ಸ್ತಂಭಗಳ
ಮೇಲೆ
ಸರ್ವೋದಯ
ಗಣರಾಷ್ಟ್ರಗಳ
ಸಮುದಾಯಒಕ್ಕೂಟದ
ಜಾಗತಿಕ
ಸರ್ಕಾರ
ರೂಪುಗೊಳ್ಳಬೇಕು
ಎಂದು
ಕರೆಯಿತ್ತರು.
ಇವರು
ತಮ್ಮ
ಕೊನೆಯ
ದಿನಗಳನ್ನು
ಪವನಾರ್
ಆಶ್ರಮದಲ್ಲಿ
ಕಳೆದರು.
ಇಂದಿರಾಗಾಂಧಿ
ಸರ್ಕಾರ
ಘೋಷಿಸಿದ
ತುರ್ತುಪರಿಸ್ಥಿತಿಯನ್ನು
ಅನುಶಾಸನ
ಪರ್ವ
ಎಂದು
ಬಣ್ಣಿಸಿದ
ಕಾರಣದಿಂದಾಗಿ
ಸರ್ಕಾರಿ
ಸಂತ
ಎಂಬ
ಟೀಕೆಗೆ
ಗುರಿಯಾದರು.
ಇವರು
“ಸಲ್ಲೇಖನ” ವ್ರತ ಕೈಗೊಂಡು
1982 ನವೆಂಬರ್ 15ರಂದು ನಿಧನರಾದರು.
*****
3.
ಹಸಿರು ಕ್ರಾಂತಿ
3.1
ಹಸಿರು ಕ್ರಾಂತಿ ಎಂದರೇನು ?
1965–66
ಮತ್ತು 1966–67 ರಲ್ಲಿ ಮಳೆಯ ಅಭಾವದ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯು ಬಹಳಷ್ಟು ಕಡಿಮೆಯಾಯಿತು.
ಇದರಿಂದ ದೇಶದಲ್ಲಿ ಆಹಾರದ ಕೊರತೆಯು ವಿಪರೀತವಾಯಿತು. ಆದ್ದರಿಂದ ಆಹಾರ ಧಾನ್ಯಗಳ ಬೆಲೆಗಳು ತೀವ್ರವಾಗಿ
ಏರತೊಡಗಿದವು. ಈ ಎರಡು ವರ್ಷಗಳಲ್ಲಿ ಆಹಾರದ ವಿಷಯದಲ್ಲಿ ಸರಕಾರವು ಅತ್ಯಂತ ಕಠಿಣ ಪರಿಸ್ಥಿತಿಯನ್ನೆದುರಿಸ
ಬೇಕಾಯಿತು. ಈ ಕಟು ಅನುಭವದ ಪರಿಣಾಮವಾಗಿ ಸರಕಾರವು ಆಹಾರ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು
1967 ರಲ್ಲಿ ಹೊಸ ಪ್ರಯೋಗವೊಂದನ್ನು ಪ್ರಾರಂಭಿಸಿತು. ಮಂಡಲ್ ಅನುವಂಶಿಕತೆಯ ನಿಯಮ'ದ ಪ್ರಕಾರ ಕೈಕೊಂಡ
ಸಂಶೋಧನೆಯ ಪರಿಣಾಮವಾಗಿ ಹೆಚ್ಚು ಇಳುವರಿ ಕೊಡುವ ಮಿಶ್ರತಳಿಯ ಬೀಜಗಳನ್ನು ಉಪಯೋಗಿಸಲು ಪ್ರಾರಂಭಿಸಲಾಯಿತು.
ಜೊತೆಗೆ ಕಳೆದ ಶತಮಾನದಲ್ಲಿ ಜರ್ಮನಿಯು ಸಂಶೋಧನೆ ನಡೆಸಿ ಕಂಡು ಹಿಡಿದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ
ರಾಸಾಯನಿಕ ಗೊಬ್ಬರವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲು ಪ್ರಾರಂಭಿಸಲಾಯಿತು. ಅಲ್ಲದೇ ಕ್ರಿಮಿನಾಶಕ
ಔಷಧಿಗಳನ್ನೂ ಸಹ ಉಪಯೋಗಿಸಲಾಯಿತು. ಭತ್ತ, ಗೋಧಿ, ಜೋಳ ಮೊದಲಾದ ಆಹಾರ ಧಾನ್ಯಗಳ ಹೊಸ ಮಿಶ್ರ ತಳಿಯ
ಬೀಜಗಳನ್ನು ಉಪಯೋಗಿಸಲಾಯಿತು. ಆ ವರ್ಷ ಮಳೆಯೂ ಅನುಕೂಲವಾಗಿದ್ದರಿಂದ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ
ಅಧಿಕ ಪ್ರಮಾಣದಲ್ಲಿ ಹೆಚ್ಚಳವು ಕಂಡು ಬಂದಿತು. 1966-67 ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು ಕೇವಲ
74 ದಶಲಕ್ಷ ಟನ್ನುಗಳಷ್ಟಿದ್ದುದು 1967-68 ರಲ್ಲಿ ಅದು ಒಮ್ಮೆಲೇ 95 ದಶಲಕ್ಷ ಟನ್ನುಗಳಿಗೇರಿತು.
ಒಂದೇ ವರ್ಷದಲ್ಲಿ ಇಷ್ಟು ಅಧಿಕ ಉತ್ಪಾದನೆಯನ್ನು ಸಾಧಿಸಿದುದರ ಪರಿಣಾಮವಾಗಿ ಕೃಷಿ ಉತ್ಪಾದನೆಯಲ್ಲಿ
ಕ್ರಾಂತಿಯನ್ನೇ ಆರಂಭಿಸಲಾಗಿದೆಯೆಂದು ತಿಳಿದುಕೊಳ್ಳಲಾಯಿತು. ಈ ಕ್ರಾಂತಿಯು ಹಸಿರು ಬೆಳೆಗಳಿಗೆ ಸಂಬಂಧಿಸಿದ್ದರಿಂದ
ಆ ಕ್ರಾಂತಿಗೆ 'ಹಸಿರು ಕ್ರಾಂತಿ' ಎಂದು ಹೆಸರಿಡಲಾಯಿತು.
ಈ
ಹಸಿರು ಕ್ರಾಂತಿಗೆ ಒಂದು ಮಹತ್ವದ ಹಿನ್ನೆಲೆ ಇತ್ತು, ಭಾರತ ಸರಕಾರವು 1962 ರಲ್ಲಿಯೇ ಒಂದು ಹೊಸ ಕೃಷಿ
ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದಕ್ಕಾಗಿ ಹಲವಾರು ಜಿಲ್ಲೆಗಳನ್ನು ಆಯ್ದುಕೊಳ್ಳಲಾಗಿತ್ತು,
ಆಯ್ದ ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿಗಾಗಿ ವ್ಯಾಪಕವಾದ ಮತ್ತು ತೀಷ್ಣವಾದ ಕ್ರಮಗಳನ್ನು ಅನುಸರಿಸುವುದು
ಈ ಹೊಸ ಕಾರ್ಯಕ್ರಮದ ಗುರಿಯಾಗಿತ್ತು. ಈ ಕಾರ್ಯಕ್ರಮವನ್ನು ' ತೀಕ್ಷ್ಣ ಕೃಷಿ ಜಿಲ್ಲಾ ಕಾರ್ಯಕ್ರಮ'
(Intensive Agricultural District Programme -IADP) ಎಂದು ಕರೆಯಲಾಯಿತು. ಈ ಕಾರ್ಯಕ್ರಮದೊಂದಿಗೆ,
ಹೊಸ ಕಾರ್ಯಕ್ರಮಕ್ಕೆ ಸರಕಾರ 'ಹೆಚ್ಚು ಇಳುವರಿ ನೀಡುವ ತಳಿಗಳ ಕಾರ್ಯಕ್ರಮ'ವನ್ನೂ (High –
Yielding Varieties Programme (HYVP) ಕೈಗೆತ್ತಿಗೊಂಡಿತು.
ನಿಜ
ಹೇಳಬೇಕೆಂದರೆ, ಹೆಚ್ಚು ಇಳುವರಿ ನೀಡುವ ತಳಿಗಳ ಕಾರ್ಯಕ್ರಮವು ತೀಕ್ಷ್ನ ಕೃಷಿ ಜಿಲ್ಲಾ ಕಾರ್ಯಕ್ರಮದ
ಒಂದು ಅಂಗವಾಯಿತು. ಈ ಕಾರ್ಯಕ್ರಮದ ಮೂಲಕವೇ 1967-68 ರಲ್ಲಿ ಹಸಿರು ಕ್ರಾಂತಿ ಸಂಭವಿಸಿತೆಂದು ಪರಿಗಣಿಸಲಾಗಿದೆ.
ಈ
ಹಸಿರು ಕ್ರಾಂತಿಗೆ ಒಳಗಾದ ಬೆಳೆಗಳಲ್ಲಿ ಗೋದಿಯು ಪ್ರಥಮ ಸ್ಥಾನವನ್ನು, ಭತ್ತವು ದ್ವಿತೀಯ ಸ್ಥಾನವನ್ನು
ಪಡೆದವು, ಹೆಚ್ಚು ಇಳುವರಿ ನೀಡುವ ಮಿಶ್ರ ತಳಿಯ ಹೊಸ ಸುಧಾರಿತ ಬೀಜಗಳನ್ನು ಉಪಯೋಗಿಸಿದ್ದೇ ಇಂಥ ಅಧಿಕ
ಉತ್ಪಾದನೆಗೆ ಮೂಲ ಕಾರಣವಾಯಿತು. ಗೋದಿಯ ಉತ್ಪಾದನೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಳವಾಯಿತು.
ನಂತರದ ಸ್ಥಾನ ಭತ್ತಕ್ಕೆ ಸಿಕ್ಕಿತು. ಜೋಳ ಮತ್ತು ಮೆಕ್ಕೆ ಜೋಳಗಳ ಉತ್ಪಾದನೆಯೂ ಸಾಕಷ್ಟು ಅಧಿಕವಾಯಿತು.
ಆಹಾರ ಧಾನ್ಯಗಳ ಒಟ್ಟು ಉತ್ಪಾದನೆಯು 1978-79 ರಲ್ಲಿ 132 ದಶಲಕ್ಷ ಟನ್ನುಗಳಿಗೇರಿತು. 1983-84 ರಲ್ಲಿ
ಅದು 152 ದಶಲಕ್ಷ ಟನ್ನುಗಳಿಗೇರಿತು. ಆದರೆ 1987-88 ರಲ್ಲಿ ಅದು 140 ದಶಲಕ್ಷ ಟನ್ನುಗಳಷ್ಟಾಯಿತು.
ಆದರೆ 1988-89 ರಲ್ಲಿ ಅದು 170 ದಶಲಕ್ಷ ಟನ್ನುಗಳಿಗೇರಿತು. ಅಂದರೆ ಒಂದೇ ವರ್ಷದಲ್ಲಿ ಅದು 30 ದಶಲಕ್ಷ
ಟನ್ನುಗಳಷ್ಟು ಅಧಿಕವಾದದ್ದು ಇನ್ನೊಂದು ಹಸಿರು ಕ್ರಾಂತಿಯೆಂದೇ ಭಾವಿಸಲಾಯಿತು. 1994-95 ರಲ್ಲಿ ಅದು
191 ದಶಲಕ್ಷ ಟನ್ನು, 1995-96 ರಲ್ಲಿ ಅದು 192 ದಶಲಕ್ಷಟನ್ನು ಹಾಗೂ 1996-97 ರಲ್ಲಿ 199 ದಶಲಕ್ಷ
ಟನ್ನುಗಳಷ್ಟಾಯಿತು. 1998-99 ರಲ್ಲಿ ಅದು 203.5 ದಶಲಕ್ಷಟನ್ನು ಇದ್ದರೆ 1999-2000 ಅದು 209 ದಶಲಕ್ಷಟನ್ನುಗಳಿಗೂ
ಮತ್ತು 2001-02, 2002-03 ಮತ್ತು 2003-04 ರಲ್ಲಿ ಅದು 212 ದಶಲಕ್ಷಟನ್ನುಗಳಷ್ಟಾಗಿದೆ.
2008-2009 ರಲ್ಲಿ ಅದು 232 ದಶಲಕ್ಷ ಟನ್ನುಗಳಷ್ಟಾಯಿತು. ಈ ಪ್ರಕಾರ ಹೊಸ ಮಿಶ್ರತಳಿಯ ಬೀಜಗಳನ್ನುಪಯೋಗಿಸಿ
ರೈತರು ಅಲ್ಪಾವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ಅಧಿಕ ಪ್ರಮಾಣದ ಉತ್ಪಾದನೆಯನ್ನು ಪಡೆಯಲು ಸಾಧ್ಯವಾಗಿದ್ದರಿಂದ
ಇದೊಂದು ಕ್ರಾಂತಿಯಂದೇ ಸಾರಲಾಯಿತು. ಈ ಕ್ರಾಂತಿಯು ಹಸಿರು ಬೆಳೆಗೆ ಸಂಬಂಧಿಸಿದ್ದರಿಂದ ಇದಕ್ಕೆ 'ಹಸಿರು
ಕ್ರಾಂತಿ' ಎಂದು ಕರೆಯಲಾಗಿದೆ.
3.2
ಹಸಿರು ಕ್ರಾಂತಿಯ ಕಾರಣಗಳು
1.
ಅಧಿಕ ಇಳುವರಿ ನೀಡುವ ತಳಿಗಳು : ವಿವಿಧ ಬೆಳೆಗಳ ಅಧಿಕ ಇಳುವರಿ ನೀಡುವ ತಳಿಗಳನ್ನು ಉಪಯೋಗಿಸಲು ಪ್ರಾರಂಭಿಸಿದ್ದರಿಂದ
ಕೃಷಿ ಉತ್ಪಾದನೆಯು ಅಧಿಕ ಪ್ರಮಾಣದಲ್ಲಿ ಹೆಚ್ಚಾಯಿತು. 19660 ಚಳಿಗಾಲದ ಬೆಳೆಯ ಸಮಯದಿಂದ ಈ ಕಾರ್ಯಕ್ರಮಗಳನ್ನು
ಅನುಷ್ಠಾನದಲ್ಲಿ ತರಲಾಯಿತು. ಈವರೆಗೆ ಗೋದಿ, ಭತ್ತ, ಜೋಳ, ಸಜ್ಜೆ, ಮುಸುಕಿನ ಜೋಳ ಈ ಐದು ಬೆಳೆಗಳಿಗೆ
ಅಧಿಕ ಇಳುವರಿ ನೀಡುವ ತಳಿಗಳನ್ನು ಉಪಯೋಗಿಸಲಾಗಿದೆ. ಈ ಐದು ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ಸಂಶೋಧನೆಯ
ಮೂಲಕ ಹೊಸ ತಳಿಗಳನ್ನು ಕಂಡುಹಿಡಿಯಲಾಗಿದೆ.
2.
ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ತೆಗೆದುಕೊಳ್ಳುವದು : ಒಂದು ಜಮೀನಿನಲ್ಲಿ ವರ್ಷಕ್ಕೆ ಕೇವಲ ಒಂದೇ
ಬೆಳೆಯನ್ನು ತೆಗೆದುಕೊಳ್ಳದೆ ಎರಡು ಅಥವಾ ಮೂರು ಬೆಳೆಗಳನ್ನು ತೆಗೆದುಕೊಳ್ಳಲು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಯಿತು.
ಇದು ಕೇವಲ ನೀರಾವರಿ ಸೌಲಭ್ಯಗಳಿರುವ ಪ್ರದೇಶಗಳಲ್ಲಿ ಮಾತ್ರ ಸಾಧ್ಯ. ಆದುದರಿಂದ ಇಂಥ ಪ್ರದೇಶಗಳಲ್ಲಿ
ಅಧಿಕ ಇಳುವರಿ ನೀಡುವ ತಳಿಗಳನ್ನು ಉಪಯೋಗಿಸಿ, ಹೆಚ್ಚು ಉತ್ಪಾದಿಸಲು ಪ್ರಯತ್ನಗಳನ್ನು ಮಾಡಲಾಯಿತು.
1987-88ರ ವೇಳೆಗೆ ಸುಮಾರು 61 ದಶಲಕ್ಷ ಹೆಕ್ಟೇರು ಭೂಮಿಯಲ್ಲಿ ಎರಡು ಅಥವಾ ಮೂರು ಬೆಳೆಗಳನ್ನು ತೆಗೆದುಕೊಳ್ಳುವಂತೆ
ವ್ಯವಸ್ಥೆ ಮಾಡಲಾಯಿತು. ಈ ಕಾರ್ಯಕ್ರಮವು ತೀವ್ರವಾಗಿ ಅಭಿವೃದ್ಧಿಯಾಗುವದಕ್ಕಾಗಿ ಕೇಂದ್ರ ಸರಕಾರವು
3 ಕೋಟಿ ರೂ. ಗಳ ವೆಚ್ಚದಿಂದ 51 ಪೈಲಟ್ ಪ್ರೊಜೆಕ್ಟಗಳನ್ನು ಕೈಕೊಂಡಿತು. ಈ ಪೈಲಟ್ ಪ್ರೊಜೆಕ್ಟಗಳ
ಪ್ರಕಾರ, ರೈತರಿಗೆ ಅನುಕೂಲವಾಗುವ ಜ್ಞಾನದ ಪ್ರಸಾರ, ಬೇಸಾಯ ಸಂಬಂಧವಾದ ಕಾರ್ಯಕ್ರಮದ ಪ್ರಸಾರ, ರೈತರಿಗೆ
ತರಬೇತಿ, ನೀರನ್ನು ಬಳಸುವ ವಿಧಾನ, ರೈತರಿಗೆ ಸಾಗುವಳಿಗಾಗಿ ಬೇಕಾಗುವ ಬೀಜ, ರಸಗೊಬ್ಬರ ವಿತರಣೆ ಮೊದಲಾದವುಗಳ
ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ.
3. ನೀರಾವರಿ
ಸೌಲಭ್ಯಗಳು : ಭಾರತದಲ್ಲಿ ನೀರಾವರಿಯ ಅವಶ್ಯಕತೆಯು ಬಹಳಷ್ಟಿರುವದರಿಂದ ಸರಕಾರವು ಹೆಚ್ಚು ಹೆಚ್ಚು
ನೀರಾವರಿ ಸೌಲಭ್ಯಗಳನ್ನು ಒದಗಿಸಲು ಕ್ರಮಗಳನ್ನು ಕೈಕೊಂಡಿರುತ್ತದೆ.
4. ರಾಸಾಯನಿಕ ಗೊಬ್ಬರದ ಬಳಕೆ : ಹಸಿರು ಕ್ರಾಂತಿಯ ಯಶಸ್ಸಿಗಾಗಿ
ರೈತರು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರವನ್ನು ಬಳಸಲು ಪ್ರಾರಂಭಿಸಿದರು. ಆಹಾರ ಧಾನ್ಯಗಳಿಗೆ ಸಂಬಂಧಿಸಿದ
ಹೊಸ ತಳಿಗಳ ಬೆಳೆಗಳಿಗೆ ಸಾಕಷ್ಟು ರಾಸಾಯನಿಕ ಗೊಬ್ಬರ ಬೇಕಾಗುವದರಿಂದ ರೈತರು ಅಧಿಕ ಪ್ರಮಾಣದಲ್ಲಿ
ಅದನ್ನು ಉಪಯೋಗಿಸಲು ಪ್ರಾರಂಭಿಸಿದರು.
5.
ಪತ್ತಿನ ಸೌಲಭ್ಯ : ಅಧಿಕ ಇಳುವರಿ ನೀಡುವ ಹೊಸ ತಳಿಗಳ ಉಪಯೋಗ ಇವೇ ಮೊದಲಾದವುಗಳಿಗಾಗಿ ಉತ್ಪಾದನೆಯನ್ನು
ಹೆಚ್ಚಿಸಲು ಅಗತ್ಯವಿದ್ದ ಪತ್ತಿನ ಸೌಲಭ್ಯಗಳನ್ನು ರೈತರಿಗೆ ಒದಗಿಸಲಾಯಿತು. ಸಹಕಾರಿ ಸಂಘ, ಭೂ-ಅಭಿವೃದ್ಧಿ
ಬ್ಯಾಂಕು ವಾಣಿಜ್ಯ ಬ್ಯಾಂಕು ಇವೇ ಮೊದಲಾದವುಗಳ ಮೂಲಕ ರೈತರಿಗೆ ಸಾಗುವಳಿ ಅಭಿವೃದ್ಧಿಗಾಗಿ ಅಧಿಕ ಪ್ರಮಾಣದಲ್ಲಿ
ಸಾಲಗಳನ್ನು ನೀಡಲಾಯಿತು.
6.
ಆಧುನಿಕ ಯಂತ್ರೋಪಕರಣಗಳ ಬಳಕೆ : ನೀರಾವರಿಯ ಸೌಲಭ್ಯ, ರಾಸಾಯನಿಕ ಗೊಬ್ಬರ ಮತ್ತು ಅಧಿಕ ಇಳುವರಿ ಕೊಡುವ
ಹೊಸ ತಳಿಗಳ ಉಪಯೋಗಗಳಿಗಾಗಿ ರೈತರು ಆಧುನಿಕ ಯಂತ್ರೋಪಕರಣಗಳನ್ನು ಬಳಸತೊಡಗಿದರು. ಟ್ರಾಕ್ಟರ್, ಹಾರ್ವೆಸ್ಟರ್,
ಪಂಪ್ಸೆಟ್ ಮೊದಲಾದ ಯಾಂತ್ರಿಕ ಸಲಕರಣೆಗಳ ಉಪಯೋಗದಿಂದ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಯಿತು.
7.
ಆಕರ್ಷಕವಾದ ಬೆಲೆಗಳ ಧೋರಣೆ : ರೈತರು ಹೊಸ ತಳಿಗಳನ್ನುಪಯೋಗಿಸಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಮಾಡಲು
ಸರಕಾರವು ಆಕರ್ಷಕವಾದ ಬೆಲೆಗಳ ಧೋರಣೆಯನ್ನು ಅನುಸರಿಸಿತು. ತಮ್ಮ ಕೃಷಿ ಹುಟ್ಟುವಳಿಗೆ ಒಳ್ಳೆಯ ಬೆಲೆ
ಸಿಗುವದೆಂಬುದು ಖಚಿತವಾಗಿದ್ದರಿಂದ ರೈತರು ಹಸಿರು ಕ್ರಾಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾದರು.
ಹೀಗೆ
ಹಸಿರು ಕ್ರಾಂತಿಯ ಯಶಸ್ಸಿಗಾಗಿ ಮೇಲೆ ಹೇಳಿದ ಕಾರಣಗಳಲ್ಲದೆ, ಕೃಷಿ ಸಂಶೋಧನೆ, ಗ್ರಾಮಾಂತರ ವಿದ್ಯುಚ್ಛಕ್ತಿ
ಕೃಷಿ ವಸ್ತುಗಳ ಮಾರಾಟ, ಸಂಘಟನೆ, ಇವೇ ಮೊದಲಾದ ಕಾರ್ಯಕ್ರಮಗಳೂ ಮತ್ತು ಅವುಗಳಲ್ಲಿ ಸಾಧಿಸಿದ ಪ್ರಗತಿಯೂ
ಸಹ ಕಾರಣವಾಗಿವೆ.
3.3
ಕೃಷಿ ಕ್ರಾಂತಿ ಅಥವಾ ಹಸಿರು ಕ್ರಾಂತಿಯ ವಿಮರ್ಶೆ :
ಕೃಷಿಯ
ಹೊಸ ತಾಂತ್ರಿಕ ವಿಧಾನವನ್ನು ಹಲವಾರು ಬೆಳೆಗಳಿಗೆ ಅನ್ವಯಿಸಿದರೂ ಪ್ರಗತಿ ಕಂಡು ಬಂದದ್ದು ಕೇವಲ ಎರಡೇ
ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ -ಗೋದಿ ಮತ್ತು ಭತ್ತ, ಗೋದಿಯ ಉತ್ಪಾದನೆಯು 1960-61 ರಲ್ಲಿ 11 ದಶಲಕ್ಷ
ಟನ್ನು ಇದ್ದುದು, 1996-97 ರಲ್ಲಿ ಅದು 65 ದಶಲಕ್ಷ ಟನ್ನುಗಳಷ್ಟಾಯಿತು. ಅಕ್ಕಿಯ ಉತ್ಪಾದನೆಯು
1960-61 ರಲ್ಲಿ 14.3 ದಶಲಕ್ಷ ಟನ್ನು ಇದ್ದುದು, 1996-97 ರಲ್ಲಿ ಅದು 81 ದಶಲಕ್ಷ ಟನ್ನುಗಳಷ್ಟಾಯಿತು.
ಗೋದಿ, ಅಕ್ಕಿ, ಜೋಳ ಮೊದಲಾದ ಏಕದಳ ಧಾನ್ಯಗಳ ಉತ್ಪಾದನೆಯು 1960-61 ರಲ್ಲಿ 69 ದಶಲಕ್ಷ ಟನ್ನು ಇದ್ದುದು
1996-97 ರಲ್ಲಿ ಅದು 184 ದಶಲಕ್ಷ ಟನ್ನುಗಳಿಗೇರಿತು. ಆದರೆ ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸಾಕಷ್ಟು
ಹೆಚ್ಚಳ ಆಗಲಿಲ್ಲ. ಅದು ಸ್ವಲ್ಪ ಹೆಚ್ಚಾಯಿತು. 1960-61 ರಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯು
(Pulses) 13 ದಶಲಕ್ಷ ಟನ್ನು ಇದ್ದುದು, ಅದು 1996-97 ರಲ್ಲಿ 15 ದಶಲಕ್ಷ ಟನ್ನುಗಳಷ್ಟಾಯಿತು. ಅಂದರೆ
1960-61 ರಿಂದ 1996-97 ವರೆಗಿನ 36 ವರ್ಷಗಳ ಅವಧಿಯಲ್ಲಿ ಅದು ಕೇವಲ ಎರಡು ದಶಲಕ್ಷ ಟನ್ನಿನಷ್ಟು
ಹೆಚ್ಚು ಆಯಿತು. ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯು 1960-61 ರಲ್ಲಿ 82 ದಶಲಕ್ಷ ಟನ್ನುಗಳಿದ್ದುದು,
1980-81 ರಲ್ಲಿ 130 ದಶಲಕ್ಷ ಟನ್ನುಗಳಿಗೂ ಹಾಗೂ 1996-97 ರಲ್ಲಿ 199 ದಶಲಕ್ಷ ಟನ್ನುಗಳಿಗೂ ಏರಿ
1997-98 ರಲ್ಲಿ 194 ದಶಲಕ್ಷ ಟನ್ನುಗಳಿಗೆ ಇಳಿಯಿತು. ಆದರೆ 1999-00 ರಲ್ಲಿ ಅದು ಪುನಃ ಅತ್ಯದಿಕ
ಮಟ್ಟಕ್ಕೆ ಅಂದರೆ 209 ದಶಲಕ್ಷ ಟನ್ನುಗಳಿಗೆ ಏರಿ ಹಿಂದಿನ ದಾಖಲೆಗಳನ್ನು ಮುರಿಯಿತು. 2003-2004
ದಲ್ಲಿ ಅದು 201 ದಶಲಕ್ಷ ಟನ್ನುಗಳಿಗೇರಿತು. ಆದರೆ 2008-09 ರಲ್ಲಿ ಅದು 232 ದಶಲಕ್ಷ ಟನ್ನುಗಳಾಯಿತು.
ಮುಖ್ಯ
ಆಹಾರಧಾನ್ಯಗಳಾದ ಅಕ್ಕಿ ಮತ್ತು ಗೋದಿ ಇವೆರಡರ ನಡುವಿನ ಉತ್ಪಾದನೆಯ ಪ್ರಮಾಣ 1960-61 ರಲ್ಲಿ ಒಂದು
ಮೂರಾಂಶದಷ್ಟಿತ್ತು. ಆದರೆ 2006-07 ರ ಸುಮಾರಿಗೆ ಪ್ರತಿಶತ 81 ರಷ್ಟಾಯಿತು. ಅಕ್ಕಿಯ ಉತ್ಪಾದನೆಯು
1960-61 ರಲ್ಲಿ 35 ದಶಲಕ್ಷ ಟನ್ನುಗಳಿದ್ದುದು 2008-09 ರಲ್ಲಿ ಅದು 99 ದಶಲಕ್ಷಟನ್ನುಗಳಿಗೇರಿತು.
ಆದರೆ ಹತ್ತಿ ಮುಸುಕಿನ ಜೋಳ ಮೊದಲಾದವುಗಳ ಉತ್ಪಾದನೆಯು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿರುವದು.
ಹೊಸ ಕೃಷಿ ತಾಂತ್ರಿಕ ವಿಧಾನವು ಹಸಿರು ಕ್ರಾಂತಿಯನ್ನುಂಟು ಮಾಡಿದ್ದು ಕೇವಲ ಎರಡೇ ಧಾನ್ಯಗಳಲ್ಲಿ ಗೋದಿ
ಮತ್ತು ಅಕ್ಕಿ, ಆದರೆ ಇತರ ಆಹಾರ ಧಾನ್ಯಗಳಲ್ಲಿ ಅದರ ಪ್ರಗತಿಯು ಕಂಡುಬರಲಿಲ್ಲ.
ಆದರೆ ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯದ ಬೆಳೆಗಳಲ್ಲಿಯೂ
ಹಸಿರು ಕ್ರಾಂತಿಯ ಪರಿಣಾಮ ಕಂಡು ಬರುತ್ತದೆ. ಮುಖ್ಯವಾಗಿ ಎಣ್ಣೆ ಕಾಳುಗಳು, ಕಬ್ಬು, ಹತ್ತಿ ಸಣಬು
ಮೊದಲಾದವುಗಳಲ್ಲಿ ಉತ್ಪಾದನೆಯು ಅಧಿಕವಾಗಿದೆ.
ಹಸಿರು ಕ್ರಾಂತಿಯ ಸಾಧನೆಗಳು
(Achievements of Green Revolution) :
1. ಆಹಾರ ಧಾನ್ಯಗಳ ಉತ್ಪಾದನೆಯು ದೊಡ್ಡ ಪ್ರಮಾಣದಲ್ಲಿ ಅಧಿಕವಾಗಿದೆ
(ಪಟ್ಟಿ 5.4).
2. ವಾಣಿಜ್ಯ ಬೆಳೆಗಳ ಉತ್ಪಾದನೆಯೂ ಬಹಳಷ್ಟು ಅಧಿಕವಾಗಿದೆ.
(ಪಟ್ಟಿ 5.5)
3. ಕೃಷಿ
ಉತ್ಪಾದನೆಯು ಸಾಕಷ್ಟು ಅಧಿಕವಾಗಿದ್ದು ತನ್ಮೂಲಕ ಉದ್ಯೋಗಾವಕಾಶಗಳೂ ಅಧಿಕವಾಗಿವೆ.
4. ಹಸಿರು
ಕ್ರಾಂತಿಯಿಂದ ಕೃಷಿ ಮತ್ತು ಕೈಗಾರಿಕೆಗಳ ನಡುವಿನ ಪರಸ್ಪರ ಸಂಬಂಧವು ಮೊದಲಿಗಿಂತಲೂ ಬಲವಾಗಿದೆ.
5. ಆಹಾರ
ಧಾನ್ಯಗಳ ಉತ್ಪಾದನೆಯ ಸ್ವರೂಪದಲ್ಲಿ ಬದಲಾವಣೆಯಾಗಿದ್ದು ಅದು ಬಹಳಷ್ಟು ಅನುಕೂಲವಾಗಿದೆ.
3.4
ಪ್ರಯೋಜನಗಳು :
ಹಸಿರು
ಕ್ರಾಂತಿಯನ್ನುಂಟು ಮಾಡಿದೆಯೆಂದು ಹೇಳಲಾಗಿದ್ದ ಹೊಸ ಕೃಷಿ ತಾಂತ್ರಿಕ ವಿಧಾನವು ಕೆಲವು ಇತಿ-ಮಿತಿಗಳನ್ನು
ಹೊಂದಿದ್ದರೂ ಪ್ರಯೋಜನಗಳನ್ನು ಹೊಂದಿದೆ. ಈ ಪ್ರಯೋಜನಗಳು ಇಂತಿವೆ :
1. ಅದು
ಹಲವು ರೀತಿಯಲ್ಲಿ ಹೊಸ ಕೃಷಿ ತಾಂತ್ರಿಕ ವಿಧಾನವು (IADP ಮತ್ತು HYVP) ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ
ಹೆಚ್ಚಿಸುವ ಉಪಾಯವಾಗಿದೆ. ಆದುದರಿಂದ ದೇಶವು ಆಹಾರೋತ್ಪಾದನೆಯಲ್ಲಿ
ಸ್ವಾವಲಂಬನ ಹೊಂದುವ ಆಸೆ ಇದೆ.
2.
ಅದು ಬೇಸಾಯದ ವಿಧಾನದಲ್ಲಿ ಬದಲಾವಣೆಗಳನ್ನು ತಂದಿದೆಯಲ್ಲದೆ, ರೈತರು ಅದನ್ನು ಅನುಸರಿಸುವಂತೆ ಅವರಿಗೆ
ಅದು ಆಕರ್ಷಕವಾಗುವಂತಹ ವಿಧಾನವಾಗಿದೆ.
3. ಈ
ಹೊಸ ವಿಧಾನವು ಉದ್ಯೋಗಾವಕಾಶಗಳನ್ನು ಒದಗಿಸುವದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗವನ್ನು
ಕಡಿಮೆ ಮಾಡಬಹುದಾಗಿದೆ.
4. ಈ
ಹೊಸ ವಿಧಾನದಿಂದ ರೈತರ ಹಾಗೂ ರೈತ ಕಾರ್ಮಿಕರ ಆದಾಯವು ಅಧಿಕವಾಗಿರುವದರಿಂದ ಅವರು ತಮ್ಮ ಜೀವನಮಟ್ಟವನ್ನು
ಸುಧಾರಿಸಬಹುದಾಗಿದೆ.
5. ಅದು ಕೇವಲ ಮಳೆಯನ್ನೇ ಅವಲಂಬಿಸಿದ ಅಥವಾ ನೀರಾವರಿ
ಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ರೈತರಿಗೆ ವರವಾಗಿದೆ. ರೈತರು ಈ ವಿಧಾನದ ಮೂಲಕ ಮಳೆಯ ಮೇಲಿನ ಅವಲಂಬನವನ್ನು
ಸಾಕಷ್ಟು ಕಡಿಮೆ ಮಾಡಿಕೊಂಡಿದ್ದಾರೆ.
3.5
ಇತಿ-ಮಿತಿಗಳು :
ಹೊಸ
ಕೃಷಿ ತಾಂತ್ರಿಕ ವಿಧಾನವು ಹಲವಾರು ಇತಿ-ಮಿತಿಗಳನ್ನು ಹೊಂದಿದೆ. ಅವು ಕೆಳಗಿನಂತಿವೆ :
1.
ಬಂಡವಾಳಶಾಹಿ ಸ್ವರೂಪ : ಹೊಸ ಕೃಷಿ-ತಾಂತ್ರಿಕ ವಿಧಾನವು ಬಂಡವಾಳಶಾಹಿ ಸ್ವರೂಪದ್ದಾಗಿದೆ. ಏಕೆಂದರೆ
ರೈತರು ಈ ವಿಧಾನವನ್ನನುಸರಿಸಬೇಕಾದರೆ, ಸುಧಾರಿಸಿದ ಬೀಜ, ಯಾಂತ್ರಿಕ ಉಪಕರಣ, ನೀರಾವರಿ, ಸೌಕರ್ಯ,
ಕ್ರಿಮಿನಾಶಕ ಔಷಧಿ ಮೊದಲಾದವುಗಳಿಗಾಗಿ ಬಹಳಷ್ಟು ಹಣವನ್ನು ವೆಚ್ಚ ಮಾಡಬೇಕಾಗುತ್ತದೆ. ಅಂದರೆ ಕೇವಲ
ಶ್ರೀಮಂತ ರೈತರು ಮಾತ್ರ ಈ ವಿಧಾನವನ್ನು ಸುಲಭವಾಗಿ ಬಳಸಬಹುದಾಗಿದೆ. ಆದರೆ ದೇಶದಲ್ಲಿ ಶೇಕಡಾ 90 ರಷ್ಟು
ಇರುವ ಸಾಮಾನ್ಯ ರೈತರಿಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುವದು ಸಾಧ್ಯವಿಲ್ಲವಾಗಿದೆ. ಹೀಗಾಗಿ
ಸಾಮಾನ್ಯ ರೈತರಿಗೆ ಕೃಷಿ ಕ್ರಾಂತಿಯ ಲಾಭ ಪಡೆಯಲು ಅಸಾಧ್ಯವಾಗಿದೆ.
2. ಪ್ರಾದೇಶಿಕ ಅಭಿವೃದ್ಧಿಯ ಅಸಮತೋಲನ : ಹೊಸ ಕೃಷಿ-ತಾಂತ್ರಿಕ
ವಿಧಾನವು ಕೆಲವೇ ಪ್ರದೇಶಗಳಲ್ಲಿ ಯಶಸ್ವಿಯಾಗಿದೆ. ಉದಾಹರಣೆಗೆ ಪಂಜಾಬ, ಹರಾಣಾ, ಗುಜರಾತ ಮತ್ತು ತಮಿಳುನಾಡುಗಳಲ್ಲಿ
ಮಾತ್ರ ಅದು ಬಹಳೇ ಯಶಸ್ವಿಯಾಗಿದೆ. ಆದರೆ ಇತರ ರಾಜ್ಯಗಳಲ್ಲಿ ಅದು ಇನ್ನೂ ಯಶಸ್ಸನ್ನು ಸಾಧಿಸಬೇಕಾಗಿದೆ.
ಇದರಿಂದ ಕೃಷಿಯ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನ ಉಂಟಾಗಿದೆ.
3.
ಕೃಷಿ ಉತ್ಪಾದನೆಯಲ್ಲಿ ಅಸಮತೋಲನ : ಹೊಸ ಕೃಷಿ ತಾಂತ್ರಿಕ ವಿಧಾನವು ಕೇವಲ ಗೋದಿಯ ಉತ್ಪಾದನೆಯಲ್ಲಿ
ಮಾತ್ರ ಅತ್ಯಂತ ಯಶಸ್ವಿಯಾಗಿದೆ. ಆದರೆ ಅಕ್ಕಿ, ಜೋಳ, ಬಾಜ್ರಾ, ಮೆಕ್ಕಜೋಳ ಮೊದಲಾದವುಗಳಲ್ಲಿ ಅದರ
ಯಶಸ್ಸು ಬಹಳ ಕಡಿಮೆಯಾಗಿದೆ. ಅಲ್ಲದೆ ಈ ಹೊಸ ತಂತ್ರವನ್ನು ಹತ್ತಿ ಸಣಬು, ಎಣ್ಣೆಕಾಳು, ಕಬ್ಬು ಮೊದಲಾದ
ಹಣದ ಬೆಳೆಗಳಿಗೂ ಹಾಗೂ ಅಕ್ಕಡಿಕಾಳು ಅಂದರೆ ದ್ವಿ-ದಳ ಧಾನ್ಯಗಳಿಗೂ ಅನ್ವಯಿಸಿಲ್ಲ. ಇದರಿಂದ ಕೃಷಿ
ವಸ್ತುಗಳ ಉತ್ಪಾದನೆಯಲ್ಲಿ ಬಹಳಷ್ಟು ಅಸಮತೋಲನವಾಗಿದೆ. ನಿಜ ಹೇಳಬೇಕೆಂದರೆ ಬೇಳೆ ಕಾಳುಗಳ ಉತ್ಪಾದನೆಯು
1949-50 ರಲ್ಲಿ ಶೇಕಡಾ 16 ಇದ್ದುದು, 2006-07 ರಲ್ಲಿ ಅದು ಶೇಕಡಾ || ಕ್ಕೆ ಇಳಿಯಿತು.
4. ಕಾರ್ಮಿಕರ ನಿರುದ್ಯೋಗ : ಹೊಸ ಕೃಷಿ ತಂತ್ರದಿಂದ ಗ್ರಾಮೀಣ
ಪ್ರದೇಶಗಳಲ್ಲಿ ನಿರುದ್ಯೋಗ ಹೆಚ್ಚುವ ಸಂಭವವಿದೆ. ಏಕೆಂದರೆ ಈ ತಂತ್ರದಲ್ಲಿ ಯಂತ್ರೋಪಕರಣಗಳ ಬಳಕೆ
ಅಧಿಕವಾಗಿರುವದರಿಂದ ಹಲವಾರು ಕಾರ್ಮಿಕರು ಉದ್ಯೋಗವನ್ನು ಕಳೆದುಕೊಳ್ಳಬಹುದಾಗಿದೆ.
ಕಳೆದುಕೊಂಡರೆಂದು
ಅಂದಾಜು ಮಾಡಲಾಗಿದ್ದು, 1983-84 ರಲ್ಲಿ ಅದು ಪ್ರತಿಶತ 17.5ಕ್ಕೇರಿರುವ ಅಂದಾಜಿದೆ. ಇದರಲ್ಲಿ ಪ್ರತಿಶತ
55 ರಷ್ಟು ಕಾರ್ಮಿಕರು ಟ್ರಾಕ್ಟರು ಮತ್ತು ಪಂಪಸೆಟ್ಟುಗಳ ಬಳಕೆಯಿಂದ ನಿರುದ್ಯೋಗಿಗಳಾದರೆ, ಪ್ರತಿಶತ
37 ರಷ್ಟು ಕಾರ್ಮಿಕರು ಊಳುವ ಯಂತ್ರೋಪಕರಣಗಳ ಬಳಕೆಯಿಂದ ನಿರುದ್ಯೋಗಿಗಳಾಗಿರುವದು ಕಂಡುಬಂದಿದೆ. ಹೀಗೆ
ಹೊಸ ಕೃಷಿ ತಂತ್ರದಿಂದ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗವು ಅಧಿಕವಾಗುವದೆಂದೂ, ಈ ನಿರುದ್ಯೋಗವನ್ನು
ಹೋಗಲಾಡಿಸಲು ಪಯಾರ್ಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿದ್ದಲ್ಲಿ ಪರಿಸ್ಥಿತಿ ಗಂಭೀರವಾಗುವದೆಂದೂ
ತಜ್ಞರು ಎಚ್ಚರಿಸಿದ್ದಾರೆ.
5.
ಲಾಭಕ್ಕಿಂತ ನಷ್ಟ ಹೆಚ್ಚು : ಸಾಂಸ್ಥಿಕ ಸುಧಾರಣೆಗಳನ್ನು ಜಾರಿಗೆ ತರದೇ ಹೊಸ ಕೃಷಿ ತಂತ್ರವನ್ನು ಬಳಕೆಯಲ್ಲಿ
ತಂದರೆ, ಲಾಭಕ್ಕಿಂತ ನಷ್ಟವೇ ಅಧಿಕವಾಗುತ್ತದೆ. ಸಾಂಸ್ಥಿಕ ಸುಧಾರಣೆಗಳೆಂದರೆ ಗೇಣಿದಾರರಿಗೆ ಭೂ-ಒಡೆತನ,
ಭೂ-ಹಿಡುವಳಿಗಳ ಮೇಲೆ ಗರಿಷ್ಟ ಮಿತಿಯ ಹೇರಿಕೆ, ಭೂ-ರಹಿತರಿಗೆ ಮತ್ತು ಅತಿ ಚಿಕ್ಕಹಿಡುವಳಿದಾರಿಗೆ
ಹೆಚ್ಚಿನ ಭೂಮಿಯ ವಿತರಣೆ, ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಕಷ್ಟು ಪತ್ತಿನ ಸೌಲಭ್ಯ ನೀಡುವ ಸಹಕಾರಿ
ಪತ್ತಿನ ಸಂಘಗಳು, ಮತ್ತಿತರ ಸಂಘ-ಸಂಸ್ಥೆಗಳ ಅಭಿವೃದ್ಧಿ, ಈ ಸುಧಾರಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ
ಜಾರಿಗೆ ತಂದರೆ ಮಾತ್ರ ಅಧಿಕ ಇಳುವರಿ ನೀಡುವ ತಳಿಗಳ ಬಳಕೆಯು ಯಶಸ್ವಿಯಾಗುತ್ತದೆ.
6.
ಹೊಸ ತಳಿಗಳ ಇತಿ-ಮಿತಿಗಳು : ಸುಧಾರಿತ ಬೀಜಗಳನ್ನು ಬಹಳ ವರ್ಷಗಳವರೆಗೆ ಉಪಯೋಗಿಸಲು ಬರುವದಿಲ್ಲ. ಅವುಗಳನ್ನು
ಹೆಚ್ಚೆಂದರೆ ಎರಡು ಅಥವಾ ಮೂರು ದಶಕಗಳವರೆಗೆ ಮಾತ್ರ ಉಪಯೋಗಿಸಬಹುದಾಗಿದೆ. ನಂತರ ಅವು ಕ್ರಿಮಿ-ಕೀಟಗಳಿಗೆ
ಇಲ್ಲವೆ ರೋಗಾಣುಗಳಿಗೆ ಬಲಿಯಾಗುತ್ತವೆ. ಅನಂತರ ಹೊಸ ತಳಿಗಳನ್ನು ಕಂಡುಹಿಡಿಯ ಬೇಕಾಗುತ್ತದೆ. ಆದ್ದರಿಂದ
ಹೊಸ ತಳಿಗಳನ್ನು ಕಂಡುಹಿಡಯದಿದ್ದರೆ ಹಸಿರು ಕ್ರಾಂತಿಯು ಶಾಶ್ವತವಾಗಿ ಮುಂದುವರೆಯಲಾರದು. ಇದೂ ಅಲ್ಲದೆ
ಕ್ರಿಮಿನಾಶಕ ರಾಸಾಯನಿಕಗಳನ್ನು ಉಪಯೋಗಿಸುವದು ಮಾನವನ ಆರೋಗ್ಯಕ್ಕೆ ಬಹಳ ಅಪಾಯಕರವೆಂದು ಪರಿಗಣಿಸಲಾಗಿದೆ.
ಒಟ್ಟಿನಲ್ಲಿ
ಈಗ ಸಂಭವಿಸಿದ ಹಸಿರು ಕ್ರಾಂತಿಯು ಸಂಪೂರ್ಣವಾಗಿ ತೃಪ್ತಿಕರವಾಗಿಲ್ಲ. ಅದು ಬಹುಕಾಲ ಮುಂದುವರೆಯುವ
ಬಗ್ಗೆ ಭರವಸೆಯಿಲ್ಲದಾಗಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಬಹಳಷ್ಟು ಏರಿಳಿತಗಳಾಗುತ್ತಿರುವದೇ
ಇದಕ್ಕೆ ಒಂದು ಮಹತ್ವದ ಪುರಾವೆಯಾಗಿದೆ. ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು ತಾಂತ್ರಿಕ ಅಂಶಗಳಿಗೆ
ಬದಲಾಗಿ ನೈಸರ್ಗಿಕ ಅಂಶಗಳನ್ನೇ ಅವಲಂಬಿಸಿದೆಯೆಂಬುದನ್ನು ಇದು ಎತ್ತಿ ತೋರಿಸುತ್ತಿದೆ.
3.6
ಹಸಿರು ಕ್ರಾಂತಿಯಿಂದ ಕಲಿಯಬೇಕಾದ ಪಾಠ
ಹಸಿರು
ಕ್ರಾಂತಿಯು ಶಾಶ್ವತವಾಗಿ ಮುಂದುವರಿಯಬೇಕಾದರೆ ಹಾಗೂ ಆಹಾರ ಧಾನ್ಯಗಳ ಉತ್ಪಾದನೆಯು ಗಣನೀಯ ಪ್ರಮಾಣದಲ್ಲಿ
ಅಧಿಕವಾಗಬೇಕಾದರೆ, ಕೆಳಗೆ ಕೊಟ್ಟ ಕ್ರಮಗಳನ್ನು ಅನುಸರಿಸುವುದು ಅತ್ಯವಶ್ಯವಾಗಿದೆ :
1. ಹೊಸ ತಳಿಗಳನ್ನು ಎಲ್ಲ ಪ್ರಮುಖ ಕೃಷಿ ಬೆಳೆಗಳಿಗೂ ಕಂಡುಹಿಡಿಯಬೇಕು.
2.
ನೀರಾವರಿ ಸೌಕಯ್ಯಗಳ ಮೂಲಕ ಸಾಗುವಳಿ-ಭೂಮಿಗೆ ನೀರಿನ ಪೂರೈಕೆಯನ್ನು ಶಾಶ್ವತಗೊಳಿಸಬೇಕು.
3. ಮಾರಾಟ
ಸೌಲಭ್ಯಗಳನ್ನು ಒದಗಿಸಬೇಕು ಮತ್ತು ರಾಸಾಯನಿಕ ಗೊಬ್ಬರ ಮತ್ತು ಸುಧಾರಿತ ಬೀಜಗಳ ಸರಿಯಾದ ವಿತರಣೆಯಾಗಬೇಕು.
4. ಹೊಸ
ಕೃಷಿ ತಂತ್ರವನ್ನು ಇಡಿಯ ದೇಶದ ತುಂಬಾ ಅನ್ವಯಿಸಬೇಕು. ಅಂದರೆ ಅದನ್ನು ದೇಶದ ಎಲ್ಲ ಭಾಗಗಳಿಗೂ ಅನ್ವಯಿಸಬೇಕು.
5.
ಹೊಸ ತಳಿಗಳ ಸಂಶೋಧನೆಯು ಶಾಶ್ವತವಾಗಿ ಮುಂದುವರಿಯಬೇಕು.
6.
ಸದ್ಯಕ್ಕೆ ಕೇವಲ ಶ್ರೀಮಂತ ರೈತರು ಮಾತ್ರ ಹಸಿರು ಕ್ರಾಂತಿಯ ಲಾಭವನ್ನು ಪಡೆಯುತ್ತಿದ್ದಾರೆ. ಈ ಲಾಭವು
ಪ್ರತಿಶತ 90 ರಷ್ಟಿದ್ದ ಸಾಮಾನ್ಯ ರೈತರಿಗೂ ಮುಟ್ಟಿಸಬೇಕಾದರೆ ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಕಷ್ಟು
ಪತ್ತಿನ ಸೌಲಭ್ಯ ಒದಗಿಸಬೇಕು.
7.
ಗ್ರಾಮೀಣ ಪ್ರದೇಶಗಳ ಅಶಿಕ್ಷಿತರ ಪ್ರಮಾಣ ಬಹಳಷ್ಟಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ರೈತರಿಗೆ ಹೊಸ
ಕೃಷಿ-ತಂತ್ರದ ವಿಧಾನ ತಿಳಿಯದು. ಇದನ್ನು ಅವರಿಗೆ ತಿಳಿಸಲು ಅವರಿಗೆ ಶಿಕ್ಷಣ ಮತ್ತು ತರಬೇತಿಯ ಸೌಕಯ್ಯಗಳನ್ನು
ವ್ಯಾಪಕ ಪ್ರಮಾಣದಲ್ಲಿ ಒದಗಿಸುವುದು ಅವಶ್ಯವಾಗಿದೆ.
*****
Comments
Post a Comment