Posts

Showing posts from April, 2024

ಏಕರೂಪ ನಾಗರೀಕ ಸಂಹಿತೆಯ ಮೇಲೆ ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಯ ವಿವರಗಳು

   ಏಕರೂಪ ನಾಗರಿಕ ಸಂಹಿತೆಯ ಚರ್ಚೆಯು ಸಂವಿಧಾನ ರಚನಾ ಪ್ರಕ್ರಿಯೆಯ ಸಮೀತಿಗಳ ಹಂತದಲ್ಲಿಯೇ ಕಾಣಿಸಿಕೊಂಡಿತ್ತು. ಭಾರತ ಸಂವಿಧಾನದಲ್ಲಿ ಅಳವಡಿಸಲಾಗುವ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಅಂತಿಮಗೊಳಿಸುವ ಜವಾಬ್ದಾರಿ ಹೊತ್ತಿದ್ದ ಮೂಲಭೂತ ಹಕ್ಕುಗಳ ಉಪ ಸಮೀತಿಯಲ್ಲಿ ಇದನ್ನು ಕುರಿತಂತೆ ಮೊದಲು ಪ್ರಸ್ತಾಪಿಸಲಾಗಿತ್ತು. ಏಕರೂಪ ನಾಗರಿಕ ಸಂಹಿತೆಯನ್ನು ಕೆ. ಎಂ. ಮುನ್ಶಿ ಮತ್ತು ಮಿನೂ ಮಸಾನಿ ಪ್ರತಿಪಾದಿಸಿದಾಗ ಸಮೀತಿಯ ಸದಸ್ಯರು ಸಮ್ಮತಿಸದೇ ನ್ಯಾಯಾಂಗ ರಕ್ಷಣೆಯುಳ್ಳ ಮತ್ತು ನ್ಯಾಯಾಂಗ ರಕ್ಷಣೆಯಿಲ್ಲದ ಹಕ್ಕುಗಳೆಂದು ಮೂಲಭೂತ ಹಕ್ಕುಗಳನ್ನು ವಿಂಗಡಿಸಲು ಮುಂದಾದರು. ಒಂದೆರಡು ಸಭೆಗಳಲ್ಲಿ ಚರ್ಚಿಸಿದ ಬಳಿಕ ಉಪ ಸಮೀತಿಯು ಸರ್ದಾರ್‌ ಪಟೇಲ್‌ ನೇತೃತ್ವದ ಮೂಲಭೂತ ಹಕ್ಕುಗಳ ಸಮೀತಿಗೆ ತನ್ನ ವರದಿಯನ್ನು ನೀಡಿತು. ಆ ವರದಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ನ್ಯಾಯಾಂಗ ರಕ್ಷಣೆಯಿಲ್ಲದ ಹಕ್ಕುಗಳ ಗುಂಪಿಗೆ ಸೇರಿಸಿತ್ತು. ಈ ನಿರ್ಧಾರವನ್ನು ಉಪ ಸಮೀತಿಯ ಸರ್ವ ಸದಸ್ಯರೂ ಒಪ್ಪಿರಲಿಲ್ಲ. ಎಂ. ಆರ್‌. ಮಸಾನಿ, ಹಂಸಾ ಮೆಹತಾ ಮತ್ತು ಅಮೃತ್‌ ಕೌರ್‌ ಎಂಬ ಮೂವರು ಸದಸ್ಯರು ಧಾರ್ಮಿಕ ತಳಹದಿಯ ವೈಯಕ್ತಿಕ ಕಾನೂನುಗಳು ದೇಶದ ರಾಷ್ಟ್ರೀಯತೆಯ ಭಾವನೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಅಧಿಕವಾಗಿರುವುದರಿಂದ ಐದು ಅಥವಾ ಹತ್ತು ವರ್ಷಗಳ ನಂತರವಾದರೂ ಏಕರೂಪ ನಾಗರಿಕ ಸಂಹಿತೆ ಭಾರತಕ್ಕೆ ಅತ್ಯಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕ್ರಮೇಣ ಏಕರೂಪ ನಾಗ...

ಸುಗ್ರಿವಾಜ್ಞೆ ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರದ ಮೇಲಿನ ಚರ್ಚೆ

   ರಾಷ್ಟ್ರಪತಿಗಳ ಸುಗ್ರಿವಾಜ್ಞೆ ಹೊರಡಿಸುವ ಕರಡು ಸಂವಿಧಾನದ ವಿದಿ 102ರ ಮೇಲಿನ ಚರ್ಚೆಯು ಮೆ 23, 1949ರಂದು ನಡೆಯಿತು. ಪ್ರಸ್ತುತ ನಮ್ಮ ಸಂವಿಧಾನದ 123 ನೆ ವಿಧಿಯು ಈ ಅವಕಾಶವನ್ನು ರಾಷ್ಟ್ರಪತಿಗಳಿಗೆ ನೀಡುತ್ತದೆ. ಅದರ ಪ್ರಕಾರ ರಾಷ್ಟ್ರಪತಿಗಳು ಸಂಸತ್ತು ಅಧಿವೇಶನದಲ್ಲಿ ಇಲ್ಲದಿದ್ದಾಗ ಸುಗ್ರಿವಾಜ್ಞೆಗಳನ್ನು   ಹೊರಡಿಸಬಹುದು. ವಿಧಿ 102, ಕರಡು ಸಂವಿಧಾನ , 1948 (1) ಯಾವುದೇ ಸಮಯದಲ್ಲಿ, ಆದರೆ ಸಂಸತ್ತಿನ ಎರಡೂ ಸದನಗಳು ಅಧಿವೇಶನದಲ್ಲಿ ಇಲ್ಲದಿದ್ದಾಗ, ಸುಗ್ರಿವಾಜ್ಞೆಯನ್ನು ಹೊರಡಿಸುವ   ಸನ್ನಿವೇಶವು ಉಂಟಾಗಿದ್ದು ಮತ್ತು ರಾಷ್ಟ್ರಪತಿಗಳಿಗೆ   ಅದು ಮನವರಿಕೆಯಾಗಿದ್ದಲ್ಲಿ ಮತ್ತು ತಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯವಿದ್ದಾಗ ಸುಗ್ರಿವಾಜ್ಞೆಗಳನ್ನು ಹೊರಡಿಸಬಹುದು. ಪ್ರಸ್ತಾಪಿತ ವಿಧಿಗೆ ಸದಸ್ಯರೊಬ್ಬರು ಸಂಸತ್ತಿನ ಎರಡೂ ಸದನಗಳು ಅಧಿವೇಶನದಲ್ಲಿ ಇರದಿದ್ದಾಗ ಸುಗ್ರಿವಾಜ್ಞೆ ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರವನ್ನು ಮೊಟಕುಗೊಳಿಸುವ ತಿದ್ದುಪಡಿಯೊಂದನ್ನು ಸೂಚಿಸಿದರು. ಏಕೆಂದರೆ ಸುಗ್ರಿವಾಜ್ಞೆ ಹೊರಡಿಸುವ ಅವಕಾಶ ನೀಡುವ ವಿಧಿಯು ಅಧಿಕ ವೆಚ್ಚದಾಯಕವಾಗಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಡಾ. ಅಂಬೇಡ್ಕರ್ ಅವರು ಇದಕ್ಕೆ ಪ್ರತ್ಯುತ್ತರವಾಗಿ ಶಾಸನವೊಂದರ ಜಾರಿಗೆ ಎರಡೂ ಸದನಗಳ ಅನುಮೋದನೆಯು ಅಗತ್ಯವಾಗಿರುವುದರಿಂದ ಸದರಿ ಅಧಿಕಾರವು ನಿರುಪಯುಕ್ತವಾಗುತ್ತದೆ. ಆದ್ದರಿಂದ ಒಂದು ಸದನವು ಅಧಿವೇ...

ಏಕರೂಪ ನಾಗರೀಕ ಸಂಹಿತೆಯ ಮೇಲಿನ ಚರ್ಚೆ - Debate on Uniform Civil Code

    ಸ್ವಾತಂತ್ರ್ಯಾನಂತರ ವೈಯುಕ್ತಿಕ ಕಾನೂನಿನ ಪ್ರಶ್ನೆಯು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣವಾಯಿತು.   ಸುಮಾರು ಎರಡು ವರ್ಷಗಳ ಕಾಲ ಸಾಂವಿಧಾನಿಕ ಸಭೆಯಲ್ಲಿ ಪ್ರಗತಿಪರ ಸದಸ್ಯರ ಮಾತುಗಳು , ಸಂಪ್ರದಾಯವಾದಿ ಸದಸ್ಯರೆಂದು ಕರೆಯಲ್ಪಡುವವರ ಭಿನ್ನಾಭಿಪ್ರಾಯದ ಧ್ವನಿಗಳು , ಅಲ್ಪಸಂಖ್ಯಾತ ಸಮುದಾಯಗಳ ವ್ಯಕ್ತಪಡಿಸಿದ ಆತಂಕಗಳು ಮತ್ತು ಹೊರಗಿನ ಕಾನೂನು ತಜ್ಞರು ಮತ್ತು ಸಾಮಾನ್ಯರಿಂದ ಉಂಟಾದ ಒತ್ತಡಗಳಿಂದ ಈ ವಿಷಯವು ಹೆಚ್ಚು ಚರ್ಚೆಗೆ ಕಾರಣವಾಯಿತು .    ಈ ನಿಟ್ಟಿನಲ್ಲಿ   ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿನ ಚರ್ಚೆಗಳು ಸಂವಿಧಾನ ರಚನಾಕಾರರು ಏಕರೂಪ ನಾಗರಿಕ ಸಂಹಿತೆಯ ಪರಿಕಲ್ಪನೆ , ಪ್ರಸ್ತುತತೆ ಮತ್ತು ಉಪಯುಕ್ತತೆಯನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ ಎಂದು ತಿಳಿಸುತ್ತವೆ .    ಸಂವಿಧಾನ ರಚನಾ ಸಭೆಯಲ್ಲಿದ್ದ ಮುಸ್ಲಿಂ ಸದಸ್ಯರು ವೈಯುಕ್ತಿಕ ಕಾನೂನುಗಳ ಮೇಲಿನ ಪ್ಪ್ರಸ್ತಾವನೆಯನ್ನು ಒಟ್ಟಾಗಿ ಪ್ರತಿಭಟಿಸಿದರು. ಸದರಿ ಚರ್ಚೆಯು ಸಂವಿಧಾನದ ವಿಧಿ 35ರ ಅಡಿಯಲ್ಲಿ ನಡೆಯಿತು. ಅಂದಿನಿಂದ ಇಂದಿನವರೆಗೂ ಈ ವಿಷಯದ ಮೇಲಿನ ಚರ್ಚೆಯು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಏಕೆಂದರೆ ಈ ಅಂಶವು ಭಾರತದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಅದರ ಭಾಷಾ ವೈವಿಧ್ಯತೆಯ ಮೇಲೆ ಕೇಂದ್ರೀಕೃತವಾಗಿದೆ.    ನಮ್ಮ ಸಂವಿಧಾನದ ರಚನ...

ಸಮುದ್ರಗುಪ್ತನ ಕುರಿತ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ

  ಯಾವ ಶಾಸನದಲ್ಲಿ ಸಮುದ್ರನ ದಿಗ್ವಿಜಯಗಳನ್ನು ನಾಲ್ಕು ಭಾಗಗಳಾಗಿ ವಿವರಿಸಲಾಗಿದೆ? ಶಾಸನದಲ್ಲಿ ವಿವರಿಸಿರುವ ನಾಲ್ಕು ದಿಗ್ವಿಜಯಗಳು ಯಾವುವು? ಉತ್ತರ ಭಾರತದಲ್ಲಿ ಸಮುದ್ರನು ಜಯಿಸಿದ ರಾಜರ ಸಂಖ್ಯೆ ಎಷ್ಟು? ಅವರಲ್ಲಿ ನಾಲ್ಕು ಅರಸರನ್ನು ಹೆಸರಿಸಿ. ದಕ್ಷಿಣದಲ್ಲಿ ಅವನು ಜಯಿಸಿದ ಮನೆತನಗಳ ಸಂಖ್ಯೆ ಎಷ್ಟು? ಅವುಗಳಲ್ಲಿ ಆರು ಮನೆತನಗಳನ್ನು ಹೆಸರಿಸಿರಿ. ದಿಗ್ವಿಜಯಾನಂತರ ಸಮುದ್ರನು ಅನುಸರಿಸಿದ ಎರಡು ನೀತಿಗಳು ಯಾವುವು? ಧರ್ಮವಿಜಯ ಎಂದರೇನು? ಎರಾನ್‌ ಶಾಸನದಲ್ಲಿ ತಿಳಿಸಿರುವ ಸಮುದ್ರನ ದಿಗ್ವಿಜಯದ ಮಾಹಿತಿ ಯಾವುದು? ಸಮುದ್ರಗುಪ್ತನ ಪರಾಕ್ರಮಕ್ಕೆ ಶರಣಾದ ಗಡಿನಾಡುಗಳು ಯಾವುವು? ಸಮುದ್ರನಿಗೆ ಶರಣಾದ ಗಣರಾಜ್ಯಗಳನ್ನು ಹೆಸರಿಸಿ. ಇವನ ಅಶ್ವಮೇಧದ ಮಾಹಿತಿಯ ಮೂಲ ಯಾವುದು? ಸಮುದ್ರನ ಕಲಾಪೋಷಣೆಯ ಕುರಿತು ಬರೆಯಿರಿ. ಇವನು ಟಂಕಿಸಿದ ನಾಣ್ಯಗಳನ್ನು ಹೆಸರಿಸಿ.  

ಅಧ್ಯಾಯ 3: ಪ್ರಸ್ತಾವನೆ ಮತ್ತು ಭಾರತ ಸಂವಿಧಾನದ ಪ್ರಧಾನ ಲಕ್ಷಣಗಳು

[I. ಭಾರತ ಸಂವಿಧಾನದ ಪ್ರಸ್ತಾವನೆ [Preamble of Indian Constitution]:   ಪೀಠಿಕೆ: ಸಾಮಾನ್ಯವಾಗಿ ಎಲ್ಲ ಗ್ರಂಥಗಳು ಗ್ರಂಥದ ಆರಂಭದಲ್ಲಿ ಪೀಠಿಕೆಯ ಭಾಗವನ್ನು ಒಳಗೊಂಡಿರುತ್ತವೆ. ಪೀಠಿಕೆಯು ಓದುಗರಿಗೆ ಆ ಗ್ರಂಥದ  ಮುನ್ನೋಟವನ್ನು ಒದಗಿಸುತ್ತದೆ. ಅದೇ ರೀತಿ ಜಗತ್ತಿನ ಪ್ರತಿಯೊಂದು ಲಿಖಿತ ಸಂವಿಧಾನಗಳು ಪೀಠಿಕೆ ರೂಪದಲ್ಲಿ ಪ್ರಸ್ತಾವನೆಯನ್ನು ಹೊಂದಿರುತ್ತವೆ. ಸಂವಿಧಾನಗಳ ಪ್ರಸ್ತಾವನೆಯು ಆಯಾ ಸಂವಿಧಾನದ ವಿವರಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಭಾಗವಾಗಿರುತ್ತದೆ.  ಹೀಗಾಗಿ ಸಂವಿಧಾನವೊಂದರ ಪ್ರಸ್ತಾವನೆಯನ್ನು ಪೂರ್ವ ಪೀಠಿಕೆ ಎಂದೂ ಕರೆಯಲಾಗುತ್ತದೆ. ಭಾರತ ಸಂವಿಧಾನ ರಚನಾಕಾರರು ಬೃಹತ್‌ ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ನಿರ್ದೇಶಿಸಲು ಹಾಗೂ ನಿಯಂತ್ರಿಸಲು ತಯಾರಿಸಿದ ಭಾರತ ಸಂವಿಧಾನದಲ್ಲೂ ಪ್ರಸ್ತಾವನೆಯನ್ನು ಅಳವಡಿಸಲು ಮುಂದಾದರು. ಅಮೇರಿಕ ಸಂವಿಧಾನದ ಪ್ರಸ್ತಾವನೆಯ ಪ್ರಭಾವದಿಂದ ಭಾರತ ಸಂವಿಧಾನವೂ ಸಹ ಪ್ರಸ್ತಾವನೆಯನ್ನು ಹೊಂದಿದೆ. ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ರಷ್ಯಾ ಹಾಗೂ ಫ್ರಾನ್ಸ್‌ ಕ್ರಾಂತಿಗಳ ಸಮಯದಲ್ಲಿ ಮುನ್ನೆಲೆಗೆ ಬಂದ ಮೌಲ್ಯಗಳನ್ನು ಕಾಣಬಹುದಾಗಿದೆ. ಜೊತೆಗೆ ಪ್ರಸ್ತಾವನೆಯಲ್ಲಿ ಪ್ರಜೆಗಳ ಸರ್ವತೋಮುಖ ಕಲ್ಯಾಣಕ್ಕಾಗಿ ಸಾಧಿಸಬೇಕಾದ ಗುರಿಗಳು ಮತ್ತು ರಾಷ್ಟ್ರ ಜೀವನದಲ್ಲಿ ಪಾಲಿಸಬೇಕಾದ ತತ್ವಗಳನ್ನು ಗುರುತಿಸಬಹುದಾಗಿದೆ. ಭಾರತದ ಭವಿಷ್ಯದ ನೀಲಿ ನಕ್ಷೆಯಾಗಿರುವ ಪ್ರಸ್ತಾವನ...

Code of conduct for college staff under Criterion 7.

   ಆತ್ಮೀಯ ವೃತ್ತಿಬಾಂಧವರೇ, ಮಹಾವಿದ್ಯಾಲಯದ ಸುಗಮ ಕಾರ್ಯಾಚರಣೆಗಾಗಿ ಕೆಳಗಿನ ನಡತೆ ನಿಯಮಗಳನ್ನು ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ Criterion 7ರ ಅಡಿಯಲ್ಲಿ ರಚಿಸಲಾಗಿದ್ದು, ಈ ಮೂಲಕ ತಮ್ಮ ಗಮನಕ್ಕೆ ತರಲಾಗುತ್ತಿದೆ.   Code of conduct for teaching faculty : Every faculty:- shall discharge his/her duties efficiently and diligently to match with the academic standards and performance norms laid down by the College Management/university/department from time to time. Shall update his/her knowledge and skills to equip himself/herself professionally for the proper discharge of duties assigned to him/her. Shall conduct himself/herself with absolute dignity and decorum in his/her dealing with the superiors, colleagues and students every time. No faculty shall absent himself/herself from duties at any time without prior permission from higher-authority. No faculty shall accept any honorary or other assignment given to him/her by any ...

ಸಂವಿಧಾನ ರಚನಾ ಸಭೆಯಲ್ಲಿನ ಪ್ರಮುಖ ಚರ್ಚೆಗಳು ಮತ್ತು ತಿದ್ದುಪಡಿಗಳು - Constituent Assembly Debates and amendments

ಅಧ್ಯಾಯ 2. ಕರಡು ಸಂವಿಧಾನದ ಮೇಲಿನ ಪ್ರಮುಖ ಚರ್ಚೆಗಳು ಮತ್ತು ತಿದ್ದುಪಡಿಗಳು. Chapter 2. Important Debates on Draft Constitution and ammendments. ಪೀಠಿಕೆ: ನಮ್ಮ ಸಂವಿಧಾನಕಾರರು ಅದನ್ನು ರಚಿಸುವಾಗ ಸುಧೀರ್ಘ ಚರ್ಚೆ ಮತ್ತು ವಿಮರ್ಶೆಗಳನ್ನು ಮಾಡಿದ್ದರು. ಅಂದರೆ ಪ್ರತಿಯೊಂದು ವಿಧಿಯನ್ನು ಅನುಮೋದಿಸುವಾಗ ಅದರ ವರ್ತಮಾನದ ಪರಿಣಾಮಗಳು ಮತ್ತು ಭವಿಷ್ಯದ ಆಗು-ಹೋಗುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇವಲ ವಿಧಿಗಳ ರಚನೆಯಷ್ಟೇ ಅಲ್ಲ ಅವುಗಳಲ್ಲಿ ಬಳಸಲ್ಪಡುವ ಪದಗಳನ್ನೂ ಸಹ ಆಳವಾದ ಚರ್ಚೆಗೆ ಒಳಪಡಿಸಿದ್ದರು. ಇದರಿಂದಾಗಿ ನಮ್ಮ ಸಂವಿಧಾನದ ವಿಧಿಗಳು ಅಂದಿ ಕಾಲಕ್ಕೆ ಅಷ್ಟೇ ಅಲ್ಲ ಬದಲಾಗುತ್ತಿರುವ ಸಮಕಾಲೀನ ಪರಿಸ್ಥಿತಿಗೂ ಸಹ ಹೊಂದಿಕೊಳ್ಳುತ್ತಿರುವುದನ್ನು ನಾವು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಕರಡು ಸಂವಿಧಾನದ ಮೇಲೆ ನಡೆದ ಕೆಲವು ಪ್ರಮುಖ ಚರ್ಚೆಗಳನ್ನು ಇಲ್ಲಿ ವಿವರಿಸಲಾಗಿದೆ. ಬಹುತೇಕ ಈ ಚರ್ಚೆಗಳ ಸಮಯದಲ್ಲಿ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ್ದ ಡಾ. ಅಂಬೇಡ್ಕರ್‌ ಅವರು ಸದಸ್ಯರು ಕೇಳುವ ಪ್ರಶ್ನೆ ಮತ್ತು ಸ್ಪಷ್ಟೀಕರಣಗಳಿಗೆ ಸೂಕ್ತ ವಿವರಣೆಗಳನ್ನು ಒದಗಿಸಿದ್ದನ್ನು ಇಲ್ಲಿ ಗಮನಿಸಬಹುದು. ನಮ್ಮ ಕರಡು ಸಂವಿಧಾನದ ಮೇಲೆ 1. ಪ್ರಸ್ತಾವನೆಯ ಮೇಲಿನ ಚರ್ಚೆ, 2. ಸಂಯುಕ್ತ (ಒಕ್ಕೂಟ) ವ್ಯವಸ್ಥೆಯ ಮೇಲಿನ ಚರ್ಚೆ , 3. ಸಮಾನತೆಯ ಹಕ್ಕು ಮತ್ತು ತಾರತಮ್ಯ ನಿರ್ಬಂಧದ ಮೇಲಿನ ಚರ್ಚೆ, 4. ಏಕರೂಪ ನಾಗರೀಕ ಸಂಹಿತೆಯ ಮೇಲಿನ ಚರ್ಚೆ...