Posts

ಮರಣದಂಡನೆಯ ಮೇಲಿನ ಚರ್ಚೆ - Debate on Abolition of Death Penalty

   ಸಂವಿಧಾನ ರಚನಾ ಸಭೆಯು 1947-49 ರ ನಡುವೆ ಮರಣ ದಂಡನೆಯ ಮೇಲಿನ ಚರ್ಚೆಯನ್ನು ಕೈಗೊಂಡಿತ್ತು.  ಚರ್ಚೆಯು ಮರಣ ದಂಡನೆಯ ನ್ಯಾಯಾಧೀಶ ಕೇಂದ್ರಿತ ಸ್ವಭಾವ , ಅದ ನ್ನು ಬಳಸುವಲ್ಲಿ ಉಂಟಾಗಬಹುದಾದ ಸಂಭವನೀಯ ಅನಿಶ್ಚಿತತೆ , ಬಡವರು ಮತ್ತು ತುಳಿತಕ್ಕೊಳಗಾದ ವರ್ಗಗಳ ವಿರುದ್ಧ ಅದನ್ನು ಬಳಸುವಲ್ಲಿ ತಾರತಮ್ಯದ ಪ್ರಭಾವ ಮತ್ತು ಅಂತಿಮ ತೀರ್ಪಿನಲ್ಲಿ ದೋಷದ ಸಾಧ್ಯತೆಯ ಕುರಿತು ನಡೆಯಿತು . Z.H. ಲಾರಿ ಅವರು ಪ್ರಸ್ತಾಪಿತ ವಿಧಿಗೆ ಉಪವಿಧಿ 11(B) ಸೇರಿಸುವಂತೆಯು, ಅದರಲ್ಲಿ ಹಿಂಸಾತ್ಮಕ ರಾಷ್ಟ್ರದ್ರೋಹದ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ಪ್ರಕರಣಗಳಲ್ಲಿ ಮರಣದಂಡನೆಯ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸೂಚಿಸಿದರು. ಏಕೆಂದರೆ ಜಗತ್ತಿನ ಸುಮಾರು 30 ದೇಶಗಳಲ್ಲಿ ಮರಣದಂಡನೆಯು ರದ್ದಾಗಿದ್ದು, ಅಲ್ಲಿನ ಸಮಾಜ ಮತ್ತು ವ್ಯಕ್ತಿಗಳು ಈ ಶಿಕ್ಷೆ ಇಲ್ಲದೆಯೂ ರಕ್ಷಿಸಲ್ಪಡುತ್ತಿವೆ. ಅಲ್ಲದೇ ಸದರಿ ಶಿಕ್ಷೆಯು ಜಾರಿಗೊಂಡ ನಂತರ ನ್ಯಾಯಾಲಯಕ್ಕೆ ಅಪರಾಧಿಯು ತಪ್ಪು ಮಾಡಿರಲಿಲ್ಲವೆಂಬ ಸತ್ಯ ಮನವರಿಕೆಯಾದರೂ ಸಹ   ಶಿಕ್ಷಿತನು   ಜೀವಂತವಾಗಿರುವುದಿಲ್ಲವಾದ್ದರಿಂದ ನ್ಯಾಯಾಲಯವು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ ಮಾನವ ಜನ್ಮವು ಅಮೂಲ್ಯವಾಗಿದ್ದು, ಅವನು ಸಮಾಜ ಮತ್ತು ಇತರರ ಜೀವಗಳಿಗೆ ಅಪಾಯಕಾರಿಯಾಗಿದ್ದಲ್ಲಿ ಮಾತ್ರವೇ ಒಬ್ಬ ವ್ಯಕ್ತಿಯ ಜೀವವನ್ನು ಕಾನೂನಾತ್ಮಕ ಶಿಕ್ಷೆಯ ಮೂಲಕ ತೆಗೆ...

ತುರ್ತು ಪರಿಸ್ಥಿತಿಯನ್ನು ಸಾಮಾನ್ಯ ಜನತೆ ನಂತರದಲ್ಲಿ ವಿರೋಧಿಸಲು ಕಾರಣವಾದ ಅಂಶಗಳು

      ತುರ್ತು ಪರಿಸ್ಥಿತಿಯು ಕೆಲವೇ ಕೆಲವು ತಿಂಗಳುಗಳಲ್ಲಿ ಜನರನ್ನು ಭ್ರಮನಿರಸನ ಗೊಳಿಸಿತು. ಅತೃಪ್ತಿಯ ಹೊಗೆ 1976ರ ಮಧ್ಯದಲ್ಲಿ ಕಾಣಿಸಿಕೊಂಡಿತು. ಆದರೂ 06 ತಿಂಗಳಲ್ಲಿ ಅದು ತುತ್ತತುದಿಯನ್ನು ಮುಟ್ಟಿತು. ಅದಕ್ಕೆ ಕೆಳಕಂಡ ಕಾರಣಗಳನ್ನು ನೀಡಬಹುದು. A. ಜನತೆಗೆ ನೀಡಿದ ಪರಿಹಾರಗಳು ಶಾಶ್ವತವಾಗಿರಲಿಲ್ಲ. ತುರ್ತುಪರಿಸ್ಥಿತಿ ಜಾರಿಗೆ ಬಂದ ಮೊದಲ ವರ್ಷದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲಾಗಲಿಲ್ಲ. ಕೃಷಿ ಹುಟ್ಟುವಳಿ ಗಣನೀಯ ಪ್ರಮಾಣದಲ್ಲಿ ಕುಸಿಯಿತು. 1976ರ ಅಂತ್ಯದ ವೇಳೆಗೆ ಬೆಲೆಗಳು ಶೇ.10ರಷ್ಟು ಅಧಿಕವಾದವು. ತುರ್ತುಪರಿಸ್ಥಿತಿಯ ಆಘಾತ ಅಳಿಸಿಹೋಗುತ್ತಿದ್ದಂತೆ, ಭ್ರಷ್ಟರು, ಕಾಳಸಂತೆಕೋರರು ಮತ್ತು ಕಳ್ಳ ಸಾಗಾಣಿಕೆ ದಾರರು ತಮ್ಮ ಚಟುವಟಿಕೆಗಳಲ್ಲಿ ನಿರತರಾದರು. ಬಡವರು ತಮ್ಮ ಕಲ್ಯಾಣ ಕೇವಲ ಭ್ರಮೆ ಎಂದು ಭಾವಿಸಿದರು. ಕಾರ್ಮಿಕರ ಕೂಲಿ (Wage), ಲಾಭಾಂಶ (Bonus), ತುಟ್ಟಿಭತ್ಯೆ (Dearness allowance) ಮತ್ತು ಹರತಾಳ (Strike)ಗಳ ಮೇಲೆ ಮಿತಿಯನ್ನು ಹಾಕಿದ್ದರಿಂದ ಅತೃಪ್ತರಾದರು. ಸರಕಾರಿ ಅಧಿ ಕಾರಿಗಳು ಮತ್ತು ಶಿಕ್ಷಕರೂ ಕೂಡ ಅತೃಪ್ತರಾದರು. ಕಾರಣ, ಅವರು ತಮ್ಮ ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡುವಂತೆ ನೋಡಿಕೊಂಡಿದ್ದಲ್ಲದೆ, ನಿಗದಿತ ಗುರಿಯನ್ನು ತಲುಪಲು ಕೆಲವರನ್ನು ಸಂತಾನಹರಣ ಕ್ರಿಯೆಗೆ ಒಳಪಡಿಸಲಾಯಿತು. B. 20 ಅಂಶಗಳ ಕಾರ್ಯಕ್ರಮಗಳು ಹಾಗೂ ಇತರೇ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಕ...

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿನ ಪರಿಸ್ಥಿತಿ

     ತುರ್ತು ಪರಿಸ್ಥಿತಿಯ ಘೋಷಣೆಯಿಂದ ಸಂವಿಧಾನದ ಸಂಯುಕ್ತ ವ್ಯವಸ್ಥೆಯ ನಿಬಂಧನೆಗಳು, ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ ಗಳು ರದ್ದಾದವು. ಪತ್ರಿಕೆಗಳನ್ನು ಕಟ್ಟುನಿಟ್ಟಾದ ದೋಷವಿಮರ್ಶಾನ ಅಧಿಕಾರ (Censorship) ಕ್ಕೆ ಒಳಪಡಿಸಲಾಯಿತು. ಸರಕಾರದ ವಿರುದ್ಧದ ಪ್ರತಿಭಟನೆ ಮತ್ತು ವಿರೋಧಗಳನ್ನು ತಡೆಹಿಡಿಯಲಾಯಿತು. 26ನೇ ಜೂನ್ 1975ರ ಬೆಳಗಿನ ಜಾವ ವಿರೋಧಪಕ್ಷದ ಮುಖಂಡರುಗಳನ್ನು MISA (Maintenance of Internal Security Act)ಅಡಿಯಲ್ಲಿ ಬಂಧನಕ್ಕೆ ಗುರಿಪಡಿಸಲಾಯಿತು. ಅವರುಗಳಲ್ಲಿ JP, ಮೊರಾರ್ಜಿ ದೇಸಾಯ್, ಅಟಲ್‌ ಬಿಹಾರಿ ವಾಜ್‌ಪೇಯ್ ಮತ್ತು ಕಾಂಗ್ರೆಸ್‌ನ ಭಿನ್ನಮತೀಯರಾಗಿದ್ದ ಚಂದ್ರಶೇಖರ್‌ರವರೂ ಸೇರಿದ್ದರು. Academicians, ಪತ್ರಕರ್ತರು, ವ್ಯಾಪಾರಿ ಮುಖಂಡರು ಮತ್ತು ವಿದ್ಯಾರ್ಥಿ ಮುಖಂಡರನ್ನು ಸೆರೆಮನೆಗೆ ತಳ್ಳಲಾಯಿತು. ಅನಾರೋಗ್ಯದ ಆಧಾರದ ಮೇಲೆ 1975ರಲ್ಲಿ JPಯವರನ್ನು ಬಿಡುಗಡೆಗೊಳಿಸಿದರೆ, 1976ರಲ್ಲಿ ಚರಣ್‌ಸಿಂಗ್‌ ಮತ್ತು ವಾಜ್‌ಪೇಯ್‌ರವರನ್ನು ಬಂಧನದಿಂದ ವಿಮುಕ್ತಿಗೊಳಿಸಲಾಯಿತು. ಮತೀಯ ಹಾಗೂ ಎಡ ಪಂಥೀಯ ಸಂಘಟನೆಗಳಾದ RSS, ಅನಂದ ಮಾರ್ಗ್, ಜಮಾತ್-ಇ-ಇಸ್ಲಾಮಿ ಮತ್ತು ಮಾವೋ CP(ML) ಸಂಘಟನೆಗಳನ್ನು ನಿಷೇಧಿಸಲಾಯಿತು. ತುರ್ತು ಪರಿಸ್ಥಿತಿ ಇರುವವರೆಗೂ (19 ತಿಂಗಳು) ಪ್ರತಿಭಟನಾಕಾರರ ಬಂಧನ ಮುಂದುವರೆಯಿತು. ಬಂಧನಕ್ಕೆ ಒಳಗಾಗುತ್ತಿದ್ದ ವ್ಯಕ್ತಿಗಳನ್ನು ಕೆಲವು ದಿನಗಳಲ್ಲಿ ಅಥವಾ ಒಂದ...

ಬ್ಯಾಂಕುಗಳ ರಾಷ್ಟ್ರೀಕರಣದ ಪರ-ವಿರೋಧ ವಾದಗಳು ಮತ್ತು ಲಾಭಗಳು

ರಾಷ್ಟ್ರೀಕರಣದ ಪರವಾದ ವಾದಗಳು ಬ್ಯಾಂಕುಗಳ ರಾಷ್ಟ್ರೀಕರಣದ ಪರವಾಗಿ ಕೆಳಗಿನ ವಾದಗಳನ್ನು ಮಂಡಿಸಲಾಯಿತು:- 1. ಭಾರತದಲ್ಲಿರುವ ವಾಣಿಜ್ಯ ಬ್ಯಾಂಕುಗಳು ಹೆಚ್ಚಾಗಿ ಕೆಲವೇ ಜನ ಶ್ರೀಮಂತರ ಒಡೆತನದಲ್ಲಿವೆ. ಬ್ಯಾಂಕಿನ ವ್ಯವಸ್ಥೆಯಲ್ಲಿ ಇರುವಷ್ಟು ಏಕಸ್ವಾಮ್ಯತೆಯು ಬೇರಾವ ಉದ್ದಿಮೆಯಲ್ಲಿಯೂ ಇಲ್ಲ. ಈ ಶ್ರೀಮಂತರು ತಮ್ಮ ಹಿತಾಸಕ್ತಿಯ ದೃಷ್ಟಿಯಿಂದ ಮಾತ್ರ ಬ್ಯಾಂಕಿನ ವ್ಯವಹಾರ ನಡೆಸುತ್ತಿದ್ದುದರಿಂದ ದೇಶದ ಆರ್ಥಿಕ ಶಕ್ತಿಯೆಲ್ಲವೂ ಅವರಲ್ಲಿಯೇ ಕೇಂದ್ರೀಕೃತವಾಗಿತ್ತು. ಒಡೆತನದ ಕೇಂದ್ರೀಕರಣ ಹಾಗೂ ಆರ್ಥಿಕ ಶಕ್ತಿಯ ಕೇಂದ್ರೀಕರಣಗಳು ನಮ್ಮ ದೇಶದ ಆರ್ಥಿಕ ನೀತಿಗೂ ಮತ್ತು ಸಂವಿಧಾನಕ್ಕೂ ವಿರುದ್ಧವಾಗಿವೆ. ಆರ್ಥಿಕ ಶಕ್ತಿಯ ಕೇಂದ್ರಿಕರಣವನ್ನು ತೊಡೆದು ಹಾಕುವುದು, ಆದಾಯ ಮತ್ತು ಸಂಪತ್ತಿನ ಹಂಚಿಕೆಯಲ್ಲಿರುವ ಅಸಮಾನತೆಯನ್ನು ಕಡಿಮೆ ಮಾಡುವುದು ನಮ್ಮ ಸಂವಿಧಾನದ ಮುಖ್ಯ ಗುರಿಯಾಗಿದೆ. 2. ಭಾರತದಲ್ಲಿನ ವಾಣಿಜ್ಯ ಬ್ಯಾಂಕುಗಳ ಆಡಳಿತವು ಕೆಲವೇ ಜನ ಶ್ರೀಮಂತ ಉದ್ದಿಮೆದಾರರ ಕೈಯಲ್ಲಿತ್ತು. ಇದರಿಂದಾಗಿ ಅವರು ಠೇವಣಿದಾರರ ಹಣವನ್ನು ಕೇವಲ ತಮ್ಮ ಉದ್ದಿಮೆಗಳ ಅಭಿವೃದ್ಧಿಗಾಗಿ ಮಾತ್ರ ಬಳಸಿಕೊಳುತ್ತಿದ್ದರು. ಪರಿಣಾಮವಾಗಿ ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗಲು ಸಾಧ್ಯವಾಯಿತು. ಸಾರ್ವಜನಿಕ ಹಣದಿಂದ ಸ್ವಂತ ಲಾಭ ಪಡೆದುಕೊಳ್ಳುವುದು ಸಾಮಾಜಿಕ ಅನ್ಯಾಯ. ಇದರಿಂದ ಆರ್ಥಿಕ ಅಸಮಾನತೆ ಹೆಚ್ಚಾಗುತ್ತ ಹೋಗುತ್ತದೆ. ಬ್ಯಾಂಕುಗಳ ರಾಷ್ಟ್ರೀಕರಣವು ಇಂತಹ ಸಾಮಾಜ...

ಸಮಕಾಲೀನ ಭಾರತದಲ್ಲಿನ ರೈತರ ಚಳವಳಿಗಳಿಗೆ ಕಾರಣಗಳು, ಪ್ರಮುಖ ಚಳವಳಿಗಳು ಮತ್ತು ಅವುಗಳ ಪರಿಣಾಮಗಳು

ರೈತರ ಚಳವಳಿಗಳಿಗೆ ಕಾರಣಗಳು: ಪ್ರತಿಯೊಂದು ಚಳವಳಿಗೆ ನಿರ್ದಿಷ್ಟ  ಕಾರಣಗಳಿದ್ದು ಭಾರತದಲ್ಲಿನ ರೈತರ ಚಳವಳಿಗಳೂ ಸಹ  ವಿಶಿಷ್ಟ ಕಾರಣಗಳನ್ನು ಆಧರಿಸಿವೆ. ರೈತರ ಚಳವಳಿಗಳ ಕಾರಣಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುದು ಗಮನಾರ್ಹ. ಬ್ರಿಟಿಷ್‌ ವಸಾಹತು ಕಾಲದಲ್ಲಿನ ಕಾರಣಗಳಿಗಿಂತ ಪ್ರಸ್ತುತ ರೈತರ ಚಳವಳಿಗಳ ಕಾರಣಗಳು ಸಾಕಷ್ಟು ಭಿನ್ನವಾಗಿವೆ. ಈ ಅಂಶವನ್ನು ಕೆಳಗಿನ ವಿವರಣೆಯ ಮೂಲಕ ಅರ್ಥೈಸಿಕೊಳ್ಳಬಹುದಾಗಿದೆ.   ಅ. ಬ್ರಿಟಿಷರ ಕಂದಾಯ ನೀತಿ: ಆರಂಭದಲ್ಲಿ ಬ್ರಿಟಿಷರು ತಮ್ಮ ನಿಯಂತ್ರಣಕ್ಕೊಳಪಟ್ಟ ಪ್ರದೇಶಗಳ ರೈತರಿಂದ ಕಂದಾಯ ವಸೂಲಿ ಹಕ್ಕನ್ನು ಪಡೆದರು. ಮುಂದೆ ಭಾರತದಲ್ಲಿ ಪ್ರಬಲರಾಗುತ್ತಿದ್ದಂತೆ ಖಚಿತ ಕಂದಾಯ ಕ್ರೋಢೀಕರಣಕ್ಕಾಗಿ ರೈತ ವಿರೋಧಿ ಕಂದಾಯ ನೀತಿಗಳನ್ನು ಬ್ರಿಟಿಷರು ಅನುಷ್ಟಾನಕ್ಕೆ ತಂದರು. ಖಾಯಂ ಗುತ್ತಾ ಪದ್ಧತಿ, ರೈತವಾರಿ ಪದ್ಧತಿ ಹಾಗು ಮಹಲ್ವಾರಿ ಪದ್ಧತಿಗಳು ಭಾರತೀಯ ರೈತರನ್ನು ಹಲವು ವಿಧದಲ್ಲಿ ಶೋಷಣೆಗೆ ಗುರಿಪಡಿಸಿದವು. ಬ್ರಿಟಿಷರ ಕಂದಾಯ ನೀತಿ ಮಧ್ಯವರ್ತಿಗಳ ವರ್ಗಗಳನ್ನು ಸೃಷ್ಟಿಸಿ ಅವರಿಂದ ರೈತರ ಕಿರುಕುಳಕ್ಕೆ ಕಾರಣವಾಯಿತು. ಅಧಿಕ ಕಂದಾಯ ಕಟ್ಟಲಾಗದ ರೈತರು ಸಾಲದ ಸುಳಿಗೆ ಸಿಲುಕಿಕೊಳ್ಳುವಂತಾಯಿತು. ಬ್ರಿಟಿಷರ ಕಂದಾಯ ನೀತಿಯಿಂದ ಉತ್ಪನ್ನ ಹಾಗು ಶ್ರಮದ ರೂಪದಲ್ಲಿದ್ದ ಗೇಣಿ ನಗದು ರೂಪವನ್ನು ತಾಳಿತು. ಭೂ ಒಡೆತನದ ಅಭದ್ರತೆ ಸಾಮಾನ್ಯವಾದ ಮತ್ತು ಕಡ್ಡಾಯ ಬೆಳೆ ಬೆಳೆಯಬೇಕಾದ ಅನಿವಾರ್ಯತೆಗೆ ಬ್...

ಗುಪ್ತರ ಕಾಲದ ಸುವರ್ಣ ಯುಗದ ವಿಶ್ಲೇಷಣೆ

ಪೀಠಿಕೆ :     ಭಾರತದ ಇತಿಹಾಸದಲ್ಲಿ ಆಳ್ವಿಕೆ ಮಾಡಿರುವ ಅನೇಕ ರಾಜಮನೆತನಗಳು ವೈಭವದಿಂದ ಆಡಳಿತ ನಡೆಸಿ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಅಂತಹ ಕೆಲವು ರಾಜಮನೆತನಗಳಲ್ಲಿ ಗುಪ್ತರ ಮನೆತನವೂ ಒಂದು. ಇವರ ಕಾಲಾವದಿ ಸಾ.ಶ.ವ. 300ರ ಆಸು-ಪಾಸಿನಿಂದ 550ರವರೆಗೆ ವ್ಯಾಪಿಸಿತ್ತು. ಸಮುದ್ರಗುಪ್ತ, ಚಂದ್ರಗುಪ್ತ ಮತ್ತು ಕುಮಾರ ಗುಪ್ತರು ಈ ಮನೆತನದ ಶ್ರೇಷ್ಠ ಸಾಮ್ರಾಟರು. ಸಮುದ್ರಗುಪ್ತನ ಕಾಲದಲ್ಲಿ ಸಾಮ್ರಾಜ್ಯವು ಉತ್ತರ-ದಕ್ಷಿಣದಲ್ಲಿ ವಿಸ್ತರಿಸಿದ್ದರೆ, ಇಮ್ಮಡಿ ಚಂದ್ರಗುಪ್ತನ ಕಾಲದಲ್ಲಿ ಪಶ್ಚಿಮದಲ್ಲಿ ಗುಜರಾತ್‌, ಪಂಜಾಬ್‌ ಮತ್ತು ಗಾಂಧಾರಗಳವರೆಗೂ ವಿಸ್ತರಿಸಿತ್ತು. ಸಾಮಾನ್ಯವಾಗಿ ಎರಡನೆ ಚಂದ್ರಗುಪ್ತನ ಆಳ್ವಿಕೆಯ ಕಾಲವನ್ನು ಇವರ ಕಾಲದ ಸುವರ್ಣಯುಗವೆಂದು ಪರಿಗಣಿಸಲಾಗಿದೆ.   ಪಾಶ್ಚಾತ್ಯ ಇತಿಹಾಸಕಾರ        ವಿ.ಎ. ಸ್ಮಿತ್‌ ಮತ್ತು ಕೆಲವು ರಾಷ್ಟ್ರೀಯವಾದಿ ಇತಿಹಾಸಕಾರರು ಸುವರ್ಣಯುಗದ ಪ್ರತಿಪಾದನೆ ಮಾಡಿದ್ದಾರೆ. ಇವರ ಪ್ರಕಾರ ಗುಪ್ತರ ಕಾಲದಲ್ಲಿ ಸಾಮ್ರಾಜ್ಯ ವಿಸ್ತಾರವು ಮೌರ್ಯರ ನಂತರದಲ್ಲಿ ವಿಶಾಲವಾದ ವ್ಯಾಪ್ತಿಯನ್ನು ಪಡೆಯಿತು. ಅಲ್ಲದೇ ಸಾಹಿತ್ಯ, ಕಲೆ, ವಿಜ್ಞಾನ, ವಾಸ್ತು-ಶಿಲ್ಪ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ  ಗಣನೀಯವಾದ ಸಾಧನೆಗಳಾದವು. ಮೌರ್ಯರ ನಂತರ ವೈದಿಕ ಧರ್ಮವು ಇವರ ಕಾಲದಲ್ಲಿ ಯಾವುದೇ ಹಿಂಸೆ ಮತ್ತು ರಕ್ತಪಾತಗಳಿಲ್ಲದೇ ಪುನರು...

ಭಾರತದಲ್ಲಿ ಮಹಿಳಾ ಚಳವಳಿಗಳಿಗೆ ಕಾರಣಗಳು, ಪ್ರಮುಖ ಮಹಿಳಾ ಚಳವಳಿಗಳು ಮತ್ತು ಅವುಗಳ ಪರಿಣಾಮಗಳು

ಪೀಠಿಕೆ: ವೈಯಕ್ತಿಕವಾಗಿ ಅಥವ ಸಾಮೂಹಿಕವಾಗಿ ಸಮಾಜದಲ್ಲಿ ಬದಲಾವಣೆ ತರಲು ನಡೆಸುವ ಪ್ರಯತ್ನವನ್ನು ಸಾಮಾಜಿಕ ಚಳವಳಿ ಎನ್ನಬಹುದು. ಸಾಮಾನ್ಯವಾಗಿ ಸಮಾಜದ ಭಾಗವಾಗಿರುವ ಒಂದು ಗುಂಪಿನ ಬದಲಾವಣೆಯನ್ನು ಉತ್ತೇಜಿಸಲು ಅಥವ ವಿರೋಧಿಸಲು ಸಾಮಾಜಿಕ ಚಳವಳಿಗಳು ಜರುಗುತ್ತವೆ. ಅಂಡ್ರಸನ್‌ ಮತ್ತು ಪಾರ್ಕರ್‌ ಪ್ರಕಾರ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಪೂರ್ಣ ಅಥವ ಭಾಗಶಃ ಬದಲಾವಣೆ ತರಲು ಕಾಲ ಹಾಗು ಗುರಿಗೆ ತಕ್ಕಂತೆ ಹಂತ ಹಂತವಾಗಿ ರೂಪುಗೊಂಡ ಬಹುಸಂಖ್ಯಾತರ ವರ್ತನೆಗಳೇ ಸಾಮಾಜಿಕ ಚಳವಳಿ. ಅಂತೆಯೇ ಲಂಡ್ಬರ್ಗ್‌ ಹಾಗು ಇತರರು ವಿಶಾಲ ಸಮಾಜದಲ್ಲಿನ ಧೋರಣೆ, ವರ್ತನೆ ಅಥವ ಸಾಮಾಜಿಕ ಸಂಬಂಧಗಳನ್ನು ಬದಲಾಯಿಸಲು ತೊಡಗಿರುವ ಸ್ವಯಂ ಪ್ರೇರಿತ ಜನ ಸಮೂಹವನ್ನುಳ್ಳ ಸಂಘಟನೆಗಳ ಪ್ರಯತ್ನಗಳೇ ಸಾಮಾಜಿಕ ಚಳವಳಿ ಎಂದಿರುವರು. ಒಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಜನಸಮೂಹ ನಡೆಸುವ ಪ್ರಯತ್ನಗಳನ್ನು ಸಾಮಾಜಿಕ ಚಳವಳಿ ಎನ್ನಲಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಬದಲಾವಣೆವಿರೋಧಿಸಲು, ಅಲ್ಪ ಬದಲಾವಣೆ ತರಲು ಅಥವ ಸಂಪೂರ್ಣ ಬದಲಾವಣೆ ಸಾಕಾರಗೊಳಿಸಲು ಸಾಮಾಜಿಕ ಚಳವಳಿಗಳು ಜರುಗುತ್ತವೆ. ಹೀಗೆ ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದ ಚಳವಳಿಗಳನ್ನು ಆರಂಭದಲ್ಲಿ ಸುಧಾರಣಾ ಚಳವಳಿ ಎಂದು ಕರೆದರೆ ಬಳಿಕ ಕ್ರಾಂತಿಕಾರಿ ಚಳವಳಿ ಎಂತಲೂ ಗುರುತಿಸಲಾಗಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕಿಯ ವ್ಯವಸ್ಥೆಯ ಬದಲಾವಣೆಗೆ ಜಗತ್ತಿನಾದ್ಯಂತ ೧೮ ನೇ ಶತಮಾನದಿಂದ ಸಾಮಾಜಿಕ ಚಳವಳ...